AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದಲ್ಲಿ ಮದುವೆಯಾದರೂ ಕೊವಿಡ್​ ನಿಯಮ ಉಲ್ಲಂಘಿಸಿದ್ದಕ್ಕೆ ಶುರುವಾಯ್ತು ತನಿಖೆ

ವಿಮಾನದಲ್ಲಿ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಬಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೊವಿಡ್​ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿದ್ದರಿಂದ ಈ ಕುರಿತಂತೆ ತನಿಖೆ ನಡೆಯುತ್ತಿದೆ.

ವಿಮಾನದಲ್ಲಿ ಮದುವೆಯಾದರೂ ಕೊವಿಡ್​ ನಿಯಮ ಉಲ್ಲಂಘಿಸಿದ್ದಕ್ಕೆ ಶುರುವಾಯ್ತು ತನಿಖೆ
ಕೊವಿಡ್​ ನಿರ್ಬಂಧನೆ ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಮಧುರೈ ಜೋಡಿ
Follow us
shruti hegde
|

Updated on: May 24, 2021 | 4:40 PM

ಕೊವಿಡ್​ ನಿರ್ಬಂಧಗಳನ್ನು ತಪ್ಪಿಸಿ ವಿಮಾನದಲ್ಲಿ ಮದುವೆಯಾದ ಮಧುರೈನ ಜೋಡಿಗಳಿಗೆ ಇದೀಗ ಸಂಕಷ್ಟ ಎದುರಾದಂತಿದೆ. ಮದುವೆಯಾಗು ಪ್ರಯತ್ನದಲ್ಲೇನೋ ಗೆದ್ದರು. ಆದರೀಗ, ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಬಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕೊವಿಡ್​ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿದ್ದರಿಂದ ಈ ಕುರಿತಂತೆ ತನಿಖೆ ನಡೆಯುತ್ತಿದೆ.

ಮಧುರೈ ಜೋಡಿ ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆ ಖರೀದಿಸಿ ಮದುವೆಯಾಗಿದ್ದಾರೆ. ಆದರೆ ವಿಡಿಯೋದಲ್ಲಿ ಗಮನಿಸುವಂತೆ ಯಾರೂ ಕೂಡಾ ಕೊವಿಡ್​ ನಿಯಮಾವಳಿಗಳನ್ನು ಪಾಲಿಸಿಲ್ಲ. ಈ ಕಾರಣದಿಂದಾಗಿ ವಿಚಾರಣೆಯ ಬಳಿಕ ಸ್ಪೈಸ್​ ಜೆಟ್​ ವಿಮಾನ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ತಿಳಿಸಿದೆ. ಪದೇ ಪದೇ ವಿನಂತಿಸಿದರೂ ಕೂಡಾ ಪ್ರಯಾಣಿಕರು ನಿಯಮಗಳನ್ನು ಪಾಲಿಸಲಿಲ್ಲ ಎಂದು ಸ್ಪೈಸ್​ ಜೆಟ್​ ಹೇಳಿದ್ದರಿಂದ ವಧು-ವರ ಮತ್ತು ಅವರ ಕುಟುಂಬಸ್ಥರು ಕ್ರಮ ಎದುರಿಸಬೇಕಾಗುತ್ತದೆ.

ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ತಮಿಳುನಾಡಿನ ಮಧುರೈನ ಜೋಡಿಗಳು ಬೆಂಗಳೂರಿಗೆ ತಲುಪುವ ವಿಮಾನವನ್ನು ಬಾಡಿಗೆ ಪಡೆದು ಮಾರ್ಗ ಮಧ್ಯದಲ್ಲಿ ಮದುವೆಯಾದರು. ಮದುವೆ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಒಂದು ವಿಡಿಯೋದಲ್ಲಿ ಕ್ಯಾಮರಾಕ್ಕೆ ಮುಖ ಮಾಡಿ ವಧುವಿಗೆ ವರ ಮಂಗಳಸೂತ್ರ ಕಟ್ಟುವುದನ್ನು ನೋಡಬಹುದು. ಆ ವಿಡಿಯೋದಲ್ಲಿ ಜೋಡಿಗಳ ಹಿಂದೆ ನಿಂತಿರುವ ಜನರೆಲ್ಲರೂ ಕಾಣುತ್ತಾರೆ. ಆದರೆ ಹೆಚ್ಚಿನವರಾರೂ ಕೂಡಾ ಮುಖಗವಸು ಧರಿಸಿರುವುದಿಲ್ಲ ಎಂಬುದು ಬಹಿರಂಗವಾಗಿದೆ.

ಡೈರೆಕ್ಟರೇಟ್​ ಜನರಲ್​ ಆಫ್​ ಸಿವಿಲ್​ ಏವಿಯೇಷನ್​(ಡಿಜಿಸಿಎ) ತಂಡವು ವಿಮಾನದಲ್ಲಿ ನಡೆದ ಮದುವೆಯ ಕುರಿತಾಗಿ ತನಿಖೆಯನ್ನು ಪ್ರಾರಂಭಿಸಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ವಿಮಾನದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದೆ. ಕೊವಿಡ್​ ಸುರಕ್ಷತಾ ಕ್ರಮದ ಉಲ್ಲಂಘನೆಯ ವಿರುದ್ಧ ದೂರು ದಾಖಲಿಸುವಂತೆ ಸ್ಪೈಸ್​ ಜೆಟ್​ಗೆ ಕೇಳಲಾಗಿದೆ ಎಂಬುದನ್ನು ಡಿಜಿಸಿಎ ಸುದ್ದಿ ಸಂಸ್ಥೆ ಎನ್​ಐ ಸುದ್ದಿ ಸಂಸ್ಥೆಗೆ ಮಾಹಿತಿ ಹಂಚಿಕೊಂಡಿದೆ.

‘ಮಧುರೈನಿಂದ ನಿನ್ನೆ​ ವಿಮಾನವನ್ನು ಬುಕ್​ ಮಾಡಲಾಗಿದೆ. ಈ ಮದುವೆ ಸಮಾರಂಭದ ಕುರಿತಾಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿದಿರಲಿಲ್ಲ’ ಎಂದು ಮಧುರೈ ವಿಮಾನ ನಿಲ್ದಾಣ ನಿರ್ದೇಶಕ ಎಸ್​.ಸೆಂಥಿಲ್​ ವಲವಾನ್​ ಎಎನ್​ಐಗೆ ತಿಳಿಸಿದ್ದಾರೆ. ಪದೇ ಪದೇ ವಿನಂತಿ ಮಾಡಿಕೊಳ್ಳುತ್ತಿದ್ದರೂ, ಅರಿವು ಮೂಡಿಸುತ್ತಿದ್ದರೂ ಕೂಡಾ ಪ್ರಯಾಣಿಕರು ಕೊವಿಡ್​ ನಿಯಮಗಳನ್ನು ಅನುಸರಿಸಿಲ್ಲ. ಹಾಗಾಗಿ ವಿಮಾನಯಾನ, ನಿಯಮಗಳ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸ್ಪೈಸ್​ ಜೆಟ್​ ವಕ್ತಾರ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಕೊವಿಡ್​ ನಿರ್ಬಂಧಗಳನ್ನು ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಜೋಡಿ

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ