AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಜನರು ಶವಗಳನ್ನು ಸುಡುವುದಿಲ್ಲ, ಕಾಡಿನಲ್ಲಿ ಕೊಳೆಯಲು ಬಿಡ್ತಾರೆ, ಕಾರಣ ವಿಚಿತ್ರ

ಇಂಡೋನೇಷ್ಯಾದ ಬಾಲಿಯಯ ದ್ವೀಪದಲ್ಲಿರುವ ಈ ಗ್ರಾಮದಲ್ಲಿ ಆಚರಣೆಗಳು ತುಂಬಾ ವಿಚಿತ್ರ, ಇಲ್ಲಿ ಯಾರಾದರೂ ಸತ್ತರೆ ಅವರನ್ನು ಸುಡುವುದಾಗಲಿ, ಹೂಳುವುದಾಗಲಿ ಮಾಡುವುದಿಲ್ಲ ಬದಲಾಗಿ ಅವುಗಳನ್ನು ಕಾಡಿನಲ್ಲಿ ಕೊಳೆಯಲು ಬಿಡುತ್ತಾರೆ. ಈ ಆಚರಣೆ ಹಿಂದಿರುವ ನಂಬಿಕೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಇಲ್ಲಿ ಜನರು ಶವಗಳನ್ನು ಸುಡುವುದಿಲ್ಲ, ಕಾಡಿನಲ್ಲಿ ಕೊಳೆಯಲು ಬಿಡ್ತಾರೆ, ಕಾರಣ ವಿಚಿತ್ರ
Follow us
ನಯನಾ ರಾಜೀವ್
|

Updated on: May 10, 2024 | 10:50 AM

ಪ್ರಪಂಚದ ಒಂದೊಂದು ಕಡೆ ಒಂದೊಂದು ರೀತಿಯಾಗಿ ಶವಗಳ ಅಂತ್ಯಸಂಸ್ಕಾರ ನಡೆಯುತ್ತೆ. ಕೆಲವು ಕಡೆ ಶವವನ್ನು ಸುಟ್ಟರೆ ಇನ್ನೂ ಕೆಲವು ಕಡೆ ಹೂಳುತ್ತಾರೆ. ಆದರೆ ವಿಚಿತ್ರ ಸಂಗತಿ ಎಂದರೆ ಇಂಡೋನೇಷ್ಯಾದ ಬಾಲಿ(Bali)ಯಲ್ಲಿ ಶವವನ್ನು ಹೂಳುವುದೂ ಇಲ್ಲ, ಸುಡುವುದೂ ಇಲ್ಲ ಬದಲಾಗಿ ಶವವನ್ನು ಕಾಡಿನಲ್ಲಿಯೇ ಕೊಳೆಯಲು ಬಿಡುತ್ತಾರೆ.

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಟ್ರುನಿಯನ್​ ಎಂಬ ಹೆಸರಿನ ಗ್ರಾಮವಿದೆ. ಇಲ್ಲಿ ವಾಸಿಸುವ ಜನರು ಬಲಿ, ಬಲಿಯಾಗ, ಬಲಿ ಮುಲಾ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರು ಹೊಸ ಸಂಪ್ರದಾಯಕ್ಕೆ ಕಟ್ಟುಬಿದ್ದಿಲ್ಲ, ತಮ್ಮದೇ ಆದ ನಿಯಮಗಳನ್ನು ಅನುಸರಿಸುತ್ತಾರೆ. ಪಾರ್ಸಿ ಜನಾಂಗವು ತಮ್ಮ ಪ್ರೀತಿಪಾತ್ರರ ಶವವನ್ನು ಪಕ್ಷಿ, ಪ್ರಾಣಿಗಳಿಗೆ ತಿನ್ನಲು ಬಿಡುತ್ತಾರೆ ಎಂಬುದನ್ನು ನೀವು ಕೇಳಿರಬೇಕು.

ಆದರೆ ಇದು ಸಂಪೂರ್ಣ ವಿರುದ್ಧವಾಗಿದ್ದು, ಮೃತದೇಹಗಳನ್ನು ರಣಹದ್ದುಗಳು, ಕಾಗೆಗಳು ತಿನ್ನದಂತೆ ಬಿದಿರಿನ ಪಂಜರಗಳಲ್ಲಿ ಇರಿಸಲಾಗುತ್ತದೆ. ಏಕೆಂದರೆ ಯಾವುದೇ ಜೀವಿ ಈ ಮೃತದೇಹವನ್ನು ತಿಂದರೆ ಸತ್ತವರಿಗೆ ಅವಮಾನವಾಗುತ್ತೆ ಎಂಬುದು ಅವರ ನಂಬಿಕೆ.

ಅಮ್ಯೂಸಿಂಗ್​ ಪ್ಲಾನೆಟ್​ ವರದಿ ಪ್ರಕಾರ, ಮೃತದೇಹದಿಂದ ಮಾಂಸವನ್ನು ತೆಗೆದ ನಂತರ ಈ ಜನರು ತಲೆಬುರುಡೆ ಮತ್ತು ಇತರೆ ಮೂಳೆಗಳನ್ನು ಹೊರತೆಗೆದು ಒಂದು ಕಡೆ ಅಲಂಕರಿಸುತ್ತಾರೆ.

ಮತ್ತಷ್ಟು ಓದಿ: Viral Video: ಬಾಲ್ಯದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ಡ್ರೈವರ್​​ಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಯುವತಿ

ಆದರೆ ತುಂಬಾ ವರ್ಷದ ಹಳೆಯ ಆಲದಮರವಿದೆ ಇಲ್ಲಿ ದೇಹದ ದುರ್ವಾಸನೆ ಬರುವುದಿಲ್ಲ, ಟ್ರೂನಿಯನ್ ಸ್ಮಶಾನಕ್ಕೆ ಬರುವ ಹಲವು ಮಂದಿ ಅದರ ಬಗ್ಗೆ ತಿಳಿದು ಆಶ್ಚರ್ಯಪಡುತ್ತಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಇಲ್ಲಿ ಸಮಾಧಿ ಮಾಡಲಾಗುವುದಿಲ್ಲ ಟ್ರುನಿಯನ್ ಗ್ರಾಮದ ಬಳಿ ಮೂರು ಸ್ಮಶಾನಗಳಿವೆ,ಇಲ್ಲಿ ನೈಸರ್ಗಿಕವಾಗಿ ಸಾವನ್ನಪ್ಪಿದ್ದವರ ಶವಗಳನ್ನು ಮಾತ್ರ ಇಡಲಾಗಿದೆ. ಅಪಘಾತ ಅಥವಾ ಆತ್ಮಹತ್ಯೆಯಲ್ಲಿ ಮರಣ ಹೊಂದಿದವರನ್ನು ಸಮಾಧಿ ಮಾಡಲು ಅರ್ಹರೆಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಬೇರೆ ಕಡೆ ಸಮಾಧಿ ಮಾಡಲಾಗುತ್ತದೆ. ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವುದಿಲ್ಲ, ವಿವಾಹಿತರ ಶವಗಳನ್ನು ಮಾತ್ರ ಇಲ್ಲಿ ಇರಿಸಲಾಗುತ್ತದೆ.

ಬಾಲಿಯಲ್ಲಿ ಜ್ವಾಲಾಮುಖಿ ಹೆಚ್ಚು ಹಾಗಾಗಿ ಸತ್ತವರ ದೇಹವನ್ನು ಭೂಮಿಗೆ ಕೊಟ್ಟರೆ ದೇವತೆಗಳು ಕೋಪಗೊಳ್ಳುವುದಿಲ್ಲ ಎಂಬುದು ನಂಬಿಕೆ. ಕೆಲವು ಮೃತದೇಹಗಳಿಗೆ ಸ್ಥಳಾವಕಾಶವಿಲ್ಲದಿದ್ದರೆ ಹಲವು ದಿನಗಳ ಕಾಲ ಅವುಗಳನ್ನು ಮನೆಯಲ್ಲಿಯೇ ಇರಿಸಿಕೊಳ್ಳಲಾಗುತ್ತದೆ. ಮೃತ ದೇಹಗಳು ಕೊಳೆಯುವುದನ್ನು ತಡೆಯಲು ಫಾರ್ಮಾಲ್ಡಿಹೈಡ್​ನಲ್ಲಿ ಸುತ್ತಿಡಲಾಗುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್