AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಸ್ಟೇಬಲ್ ಮನೆಯಲ್ಲಿ ಬುಸುಗುಡುಲು ಆರಂಭಿಸಿವೆ 15 ನಾಗರಹಾವಿನ ಮರಿಗಳು! ವಿಡಿಯೋ ಇಲ್ಲಿದೆ ನೋಡಿ

ಪೊಲೀಸ್ ವೃತ್ತಿಯೊಂದಿಗೆ ಹಾವಿನ ರಕ್ಷಣೆಯ ಹವ್ಯಾಸ, ಹಾವು ರಕ್ಷಣೆ ವೇಳೆ ಪತ್ತೆಯಾದ ಮೊಟ್ಟೆಗಳನ್ನು ಮನೆಗೆ ತಂದು ಆರೈಕೆ, ಇದೀಗ ಮೊಟ್ಟೆಗಳು ಒಡೆದು ಹೊರಬಂದಿರುವ ನಾಗರಹಾವಿನ ಮರಿಗಳು ಬುಸುಗುಡುತ್ತಿವೆ. ವಿಡಿಯೋ ಇಲ್ಲಿದೆ ನೋಡಿ.

ಕಾನ್ಸ್ಟೇಬಲ್ ಮನೆಯಲ್ಲಿ ಬುಸುಗುಡುಲು ಆರಂಭಿಸಿವೆ 15 ನಾಗರಹಾವಿನ ಮರಿಗಳು! ವಿಡಿಯೋ ಇಲ್ಲಿದೆ ನೋಡಿ
ಪೊಲೀಸ್ ಕಾನ್ಸ್ಟೇಬಲ್ ರಮೇಶ ಮತ್ತು ಅವರ ತಮ್ಮ ಶ್ರೀಕಾಂತ
TV9 Web
| Edited By: Rakesh Nayak Manchi|

Updated on: Jun 23, 2022 | 2:04 PM

Share

ಹಾವೇರಿ: ಪೊಲೀಸ್ ಸಿಬ್ಬಂದಿಯೊಬ್ಬರು ಹಾವು ಹಿಡಿಯಲು ಹೋಗಿದ್ದ ವೇಳೆ ದೊರೆತಿದ್ದ ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮನೆಯಲ್ಲಿ ಮರಿ ಮಾಡಿಸಲು ತಂದಿಟ್ಟಿದ್ದರು. ಇದೀಗ ಆ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ. ಸದ್ಯ 15 ನಾಗರ ಹಾವಿನ ಮರಿಗಳು ಬುಸುಗುಡಲು ಆರಂಭಿಸಿದ್ದು, ಕಾನ್ಸ್ಟೇಬಲ್ ರಮೇಶ ಹರಿಜನ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್

ಹಾವೇರಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿರುವ ರಮೇಶ ಅವರಿಗೆ ಹಾವುಗಳ ಮೇಲೆ ಅತೀವ ಪ್ರೀತಿ. ಅದರಂತೆ ವೃತ್ತಿಯ ಜೊತೆಗೆ ಅವರು ಹಾವುಗಳ ರಕ್ಷಣೆಯಲ್ಲಿ ನಿರತಂರವಾಗಿ ತೊಡಗಿಸಿಕೊಂಡಿದ್ದಾರೆ. ಹಾವು ಬಂದಿದೆ ಎಂದು ಕರೆ ಮಾಡಿದರೆ ಸಾಕು ಸ್ಥಳಕ್ಕೆ ದಾವಿಸುವ ರಮೇಶ, ಹಾವನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ.

ಇದನ್ನೂ ಓದಿ: Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು

ವಿಡಿಯೋ ವೀಕ್ಷಿಸಿ:

ಹೀಗೆ ಒಂದೊಮ್ಮೆ ಹಾವಿನ ರಕ್ಷಣೆಗೆಂದು ಹೋಗಿದ್ದ ವೇಳೆ ರಮೇಶ ಅವರಿಗೆ ನಾಗರ ಹಾವಿನ ಮೊಟ್ಟೆಗಳು ಸಿಕ್ಕಿವೆ. ಈ ಮೊಟ್ಟೆಗಳನ್ನು ಮರಿ ಮಾಡುವ ನಿಟ್ಟಿನಲ್ಲಿ ಮನೆಗೆ ಕೊಂಡೊಯ್ದು ಸೂಕ್ತ ಸ್ಥಳ ಮಾಡಿ ಅದರಲ್ಲಿಟ್ಟು ಅರೈಕೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ರಮೇಶ ಅವರ ತಮ್ಮ ಶ್ರೀಕಾಂತ ಅವರು ಕೂಡ ಸಾಥ್ ನೀಡುತ್ತಾರೆ. ಮನೆಯಲ್ಲಿ ಮರಿಮಾಡಲು ತಂದಿಟ್ಟಿದ್ದ 19 ಮೊಟ್ಟೆಗಳಲ್ಲಿ 15 ಮೊಟ್ಟೆಗಳು ಒಡೆದು ಹಾವಿನ ಮರಿಗಳು ಹೊರಬಂದು ಬುಸುಗುಡುತ್ತಿವೆ. ಪೊಲೀಸ್ ವೃತ್ತಿಯ ಜೊತೆಗೆ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಕಾನಸ್ಟೇಬಲ್ ರಮೇಶ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!