AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನನ್ನು ಅಣ್ಣ, ಅಂಕಲ್ ಎಂದು ಕರೆಯಬೇಡಿ’ ಉಬರ್ ಡ್ರೈವರ್ ವಿನಂತಿ

Uber Driver : ಈ ಪೋಸ್ಟ್​ಗೆ ಉಬರ್ ಕಂಪೆನಿ ಪ್ರತಿಕ್ರಿಯಿಸಿದೆ. ಜೊತೆಗೆ, ‘ವ್ಯಕ್ತಿಯ ವೃತ್ತಿ, ಸ್ಥಾನಮಾನದ ಬಗ್ಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸುವುದು ಮಾನವೀಯತೆಯ ಗುರಿಯಾಗಬೇಕು’ ಎಂದಿದ್ದಾರೆ ನೆಟ್ಟಿಗರೊಬ್ಬರು.

‘ನನ್ನನ್ನು ಅಣ್ಣ, ಅಂಕಲ್ ಎಂದು ಕರೆಯಬೇಡಿ’ ಉಬರ್ ಡ್ರೈವರ್ ವಿನಂತಿ
‘ನನ್ನನ್ನು ಅಣ್ಣ ಅಥವಾ ಅಂಕಲ್ ಎಂದು ಕರೆಯಬೇಡಿ’
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Sep 30, 2022 | 2:41 PM

Share

Viral  : ಸೀಟಿನ ಹೆಡ್​ರೆಸ್ಟ್​ನ ಮೇಲೆ ಉಬರ್ ಚಾಲಕರೊಬ್ಬರು, ‘ನನ್ನನ್ನು ಅಣ್ಣ, ಅಂಕಲ್​ ಎಂದು ಕರೆಯಬೇಡಿ’ ಎಂದು ನೋಟ್ ಬರೆದಿರುವ ಪೋಸ್ಟ್​ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ಪೋಸ್ಟ್ ಹಂಚಿಕೊಂಡು  ಮಜವಾಗಿರುವ ನೋಟ್​ ಅನ್ನು ಓದಿ ಓದಿ ನಗುತ್ತಿದ್ದಾರೆ ಜೊತೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಝಿನೆಸ್​ ಜರ್ನಲಿಸ್ಟ್ ಸೋಹಿನಿ ಎಂ. ಸೆ.27ರಂದು ಉಬರ್ ಇಂಡಿಯಾಗೆ ಟ್ಯಾಗ್​ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಬರ್​ ಕಂಪೆನಿಯೇ ಈ ಪೋಸ್ಟ್​ಗೆ ಖುದ್ದಾಗಿ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಈ ನೋಟ್​ನ ಪ್ರಕಾರ, ಇಂಥ ಸಂದರ್ಭವನ್ನು ತಪ್ಪಿಸಲು ಪರ್ಯಾಯ ಮಾರ್ಗವನ್ನು ಗ್ರಾಹಕರು ಕಂಡುಕೊಳ್ಳಬೇಕು. ಡ್ರೈವರ್ ಹೆಸರಿನ ಬಗ್ಗೆ ಅನುಮಾನ ಉಂಟಾದಲ್ಲಿ, ಉಬರ್ ಆ್ಯಪ್​ ಮೂಲಕ ಹೆಸರನ್ನು ಖಚಿತಪಡಿಸಿಕೊಂಡು ಸಂಬೋಧಿಸುವುದು ಒಳ್ಳೆಯದು’ ಎಂದು ಉಬರ್ ಪ್ರತಿಕ್ರಿಯಿಸಿದೆ.

ಈ ಪೋಸ್ಟ್ 3,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 200ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ‘ವ್ಯಕ್ತಿಯ ವೃತ್ತಿ, ಸ್ಥಾನಮಾನದ ಬಗ್ಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸುವುದು ಮಾನವೀಯತೆಯ ಗುರಿಯಾಗಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

‘ನಾನು ಸಾಮಾನ್ಯವಾಗಿ ಡ್ರೈವರ್​ಗಳ ಹೆಸರಿನ ಮುಂದೆ ಜೀ ಸೇರಿಸಿ ಸಂಬೋಧಿಸುತ್ತೇನೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಗದೊಬ್ಬರು, ‘ನಾನು ಯಾವಾಗಲೂ ಕಾರ್ ಸಾರ್​’ ಎಂದೇ ಕರೆಯುತ್ತೇನೆ ಎಂದಿದ್ದಾರೆ.

ನೀವು ಏನೆಂದು ಕರೆಯುತ್ತೀರಿ? ಪ್ರತಿಯೊಬ್ಬರಿಗೂ ಅವರು ಮಾಡುವ ಕೆಲಸಗಳಿಗೂ ಘನತೆ ಇದೆಯಲ್ಲವೆ? ಪರಸ್ಪರ ಘನತೆಯಿಂದ ಬದುಕುವುದೇ ಮಾನವೀಯತೆಯ ಉದ್ದೇಶ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋ ಕ್ಲಿಕ್ ಮಾಡಿ

Published On - 2:38 pm, Fri, 30 September 22

Follow Us
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ