ಮಿಲಿಟರಿ ಚೆಕ್​ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ ಉಕ್ರೇನ್​ ಸೈನಿಕ: ವಿಡಿಯೋ ವೈರಲ್​

ಉಕ್ರೇನ್​ ಸೈನಿಕನೊಬ್ಬ ಮಿಲಿಟರಿ ಚೆಕ್​ ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಿಲಿಟರಿ ಚೆಕ್​ಪಾಯಿಂಟ್​ನಲ್ಲಿ ಮಂಡಿಯೂರಿ ಯುವತಿಗೆ ಪ್ರಪೋಸ್​ ಮಾಡಿದ ಉಕ್ರೇನ್​ ಸೈನಿಕ: ವಿಡಿಯೋ ವೈರಲ್​
ಪ್ರಪೋಸ್​ ಮಾಡಿದ ಸೈನಿಕ
Follow us
| Updated By: Pavitra Bhat Jigalemane

Updated on:Mar 09, 2022 | 9:41 AM

ರಷ್ಯಾ ಉಕ್ರೇನ್​ ರಣಭೀಕರ ಯುದ್ಧ (Russia Ukraine War) 14ನೇ ದಿನಕ್ಕೆ ಕಾಲಿಟ್ಟಿದೆ. ಜಗತ್ತಿನ ವಿವಿಧ ದೇಶಗಳು ರಷ್ಯಾವನ್ನು ವಿರೋಧಿಸಿದರೂ ಉಕ್ರೇನ್​ ಮೇಲಿನ ಯುದ್ಧವನ್ನು ಮುಂದುವರೆಸಿದೆ. ಈ ನಡುವೆ ಉಕ್ರೇನ್​ ನೆಲದ ಸಾಕಷ್ಟು  ವಿಡಿಯೋ ಫೋಟೋಗಳು ವೈರಲ್​ ಆಗಿವೆ. ಒಂದಷ್ಟು ಮನಕಲಕುವ ದೃಶ್ಯಗಳು ಉಕ್ರೇನ್​ನಲ್ಲಿ ಕಂಡುಬರುತ್ತಿವೆ. ಈ ನಡುವೆ ಉಕ್ರೇನ್​ ಸೈನಿಕನೊಬ್ಬ(Ukraine Soldier) ಮಿಲಿಟರಿ ಚೆಕ್​ ಪಾಯಿಂಟ್​ನಲ್ಲಿ ಮಂಡಿಯೂರಿ ಗೆಳತಿಗೆ ಪ್ರಪೋಸ್ ​(Propose) ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜನರ ಸಾವು, ನೋವು, ಭಯದಲ್ಲಿ ಬದುಕುತ್ತಿರುವುದರ ನಡುವೆಯೂ ಈ ರೀತಿ ಪ್ರೇಮ ನಿವೇದನೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಉಕ್ರೇನ್​ ನಾಗರಿಕರನ್ನು ಮಿಲಿಟರಿ ಚೆಕ್​ ಪಾಯಿಂಟ್​ನಲ್ಲಿ ತಪಾಸಣೆ ಮಾಡಲು ನಿಲ್ಲಿಸಲಾಗಿತ್ತು. ಈ ವೇಳೆ ಸೈನಿಕರ ಗುಂಪು ಅವರನ್ನು ತಪಾಸಣೆ ಮಾಡುತ್ತಿತ್ತು. ಗಾಡಿಯೆಡೆಗೆ ಮುಖ ಮಾಡಿ ನಿಂತಿದ್ದ ಯುವತಿಯನ್ನು ತಿರುಗುಸಿ ಸೈನಿಕನೊಬ್ಬ ಮಂಡಿಯೂರಿ ಪ್ರಪೋಸ್​​ ಮಾಡಿದ್ದಾನೆ. ಇದನ್ನು ಕಂಡು ಆಕೆ ಅಚ್ಚರಿಗೊಂಡಿದ್ದಾಳೆ.  ಪುಟ್ಟ ಹೂವನ್ನು ನೀಡಿ ಸೈನಿಕ ಪ್ರೇಮ ನಿವೇದನೆ ಮಾಡಿದ್ದಾನೆ.

ಅಚ್ಚರಿಯಿಂದ ಖುಷಿಗೊಂಡ ಯುವತಿ ಸೈನಿಕನನ್ನು ಹಗ್​ ಮಾಡಿದ್ದಾಳೆ ಇದರ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 4 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಭೀಕರ ದೃಶ್ಯಗಳ ನಡುವೆ ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ:

ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿರುವ ಬ್ರಿಟನ್ ಪಬ್; ಹೇಗೆ ಅಂತೀರಾ? ಇಲ್ಲಿದೆ ನೋಡಿ

Published On - 9:38 am, Wed, 9 March 22

ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ