Railway Station: ಇನ್ನು ಮುಂದೆ ರೈಲು ನಿಲ್ದಾಣದಲ್ಲಿ ಹಲ್ಲುಜ್ಜಿದರೆ ಭಾರೀ ದಂಡ ಕಟ್ಟಬೇಕು

ರೈಲ್ವೇ ಕಾಯಿದೆ 1989 ರ ಪ್ರಕಾರ, ರೈಲ್ವೆ ಆವರಣದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆ ಕಡೆ ಹಲ್ಲುಜ್ಜುವುದು, ಉಗುಳುವುದು, ಶೌಚಾಲಯ, ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು ಅಪರಾಧವಾಗಿದೆ. ಈ ನಿಷೇಧಿತ ಕೃತ್ಯಗಳನ್ನು ಎಸಗುವವರ ಮೇಲೇ ಭಾರೀ ದಂಡ ವಿಧಿಸಲಾಗುವುದು.

Railway Station: ಇನ್ನು ಮುಂದೆ ರೈಲು ನಿಲ್ದಾಣದಲ್ಲಿ ಹಲ್ಲುಜ್ಜಿದರೆ ಭಾರೀ ದಂಡ ಕಟ್ಟಬೇಕು
ರೈಲು ನಿಲ್ದಾಣದಲ್ಲಿ ಹಲ್ಲುಜ್ಜಿದರೆ ಭಾರೀ ದಂಡ ಕಟ್ಟಬೇಕು
Image Credit source: Pinterest

Updated on: Feb 13, 2024 | 5:49 PM

ರೈಲಿನಲ್ಲಿ ಪ್ರಯಾಣಿಸುವುದು ಸುರಕ್ಷಿತ ಮತ್ತು ವೆಚ್ಚದಾಯಕ ಪ್ರಯಾಣದ ಮಾರ್ಗವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಕೂಡ ಹೆಚ್ಚಿನ ಪ್ರಯಾಣಿಕರಿಗೆ ಈ ಕುರಿತು ತಿಳಿದಿಲ್ಲ. ರೈಲ್ವೆ ನಿಲ್ದಾಣದಲ್ಲಿ ಹಲ್ಲುಜ್ಜುವುದು ಅಪರಾಧ ಎಂದು ನಿಮಗೆ ತಿಳಿದಿದೆಯೇ? ನೀವು ಹೀಗೆ ಮಾಡಿದರೆ, ಸಂಬಂಧಿತ ನಿಯಮಗಳ ಪ್ರಕಾರ ನಿಮಗೆ ಶಿಕ್ಷೆಯಾಗುತ್ತದೆ. ರೈಲ್ವೇ ನಿಲ್ದಾಣದಲ್ಲಿ ಹಲ್ಲುಜ್ಜುವ ವೇಳೆ ಸಿಕ್ಕಿಬಿದ್ದರೆ ಏನು ಕ್ರಮ? ನಿಯಮಗಳೇನು? ಎಷ್ಟು ದಂಡ ಕಟ್ಟಬೇಕು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿ ತಿಳಿದುಕೊಳ್ಳಿ.

ಬೆಳಗ್ಗೆ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿರುವ ನಲ್ಲಿಗಳಲ್ಲಿ ಹಲ್ಲುಜ್ಜುವುದು ಮತ್ತು ಊಟದ ಪಾತ್ರೆಗಳನ್ನು ತೊಳೆಯುವುದನ್ನು ನೀವು ನೋಡಿರುತ್ತೀರಿ. ಆದರೆ ರೈಲ್ವೇ ನಿಲ್ದಾಣದ ಪ್ರದೇಶದ ನಲ್ಲಿ ನೀರಿನ ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಿಯಾದರೂ ಹಲ್ಲು ಹಲ್ಲುಜ್ಜುವುದು ಅಪರಾಧ. ಇಂತಹ ಕೆಲಸಗಳನ್ನು ಮಾಡುವವರಿಗೆ ರೈಲ್ವೇ ಇಲಾಖೆ ದಂಡ ವಿಧಿಸಬಹುದು. ಪ್ರಮುಖ ರೈಲ್ವೆ ನಿಯಮಗಳು ಇಲ್ಲಿವೆ.

ರೈಲ್ವೇ ಕಾಯಿದೆ 1989 ರ ಪ್ರಕಾರ, ರೈಲ್ವೆ ಆವರಣದಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಬ್ರಷ್ ಮಾಡುವುದು, ಉಗುಳುವುದು, ಶೌಚಾಲಯ, ಪಾತ್ರೆಗಳನ್ನು ತೊಳೆಯುವುದು, ಬಟ್ಟೆ ಒಗೆಯುವುದು ಅಪರಾಧವಾಗಿದೆ. ಈ ಕಾರ್ಯಗಳನ್ನು ಶೌಚಾಲಯಗಳು ಮತ್ತು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಮಾಡಬೇಕು. ಈ ನಿಷೇಧಿತ ಕೃತ್ಯಗಳನ್ನು ಎಸಗುವವರನ್ನು ರೈಲ್ವೇ ಸಿಬ್ಬಂದಿ ಹಿಡಿದರೆ, ಪ್ರಯಾಣಿಕರಿಗೆ ರೂ. 500 ದಂಡ ವಿಧಿಸಬಹುದು.

ಈ ನಿಯಮವನ್ನೂ ತಿಳಿದುಕೊಳ್ಳಿ..

ನೀವು ರೈಲ್ವೇ ಅಥವಾ ರೈಲ್ವೆ ಆವರಣದಲ್ಲಿ ಎಲ್ಲಿಯಾದರೂ ಏನನ್ನಾದರೂ ಬರೆದರೆ ಅಥವಾ ಯಾವುದೇ ಪೋಸ್ಟರ್ ಅನ್ನು ಹಾಕಿದರೆ, ಅದು ಕೂಡ ರೈಲ್ವೆ ಕಾಯಿದೆಯಡಿ ಅಪರಾಧವಾಗಿದೆ. ಇದಕ್ಕೆ ದಂಡ ವಿಧಿಸಬಹುದು.

ಚಿಪ್ಸ್ ಅಥವಾ ಇತರ ವಸ್ತುಗಳನ್ನು ತಿಂದ ನಂತರ, ಅನೇಕ ಪ್ರಯಾಣಿಕರು ಹೊದಿಕೆಗಳನ್ನು ನಿಲ್ದಾಣದ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಇದೂ ಕೂಡ ಅಪರಾಧವೇ. ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಕಸವನ್ನು ಎಲ್ಲಿಯೂ ಸುರಿಯಬಾರದು. ಗೊತ್ತುಪಡಿಸಿದ ಕಂಟೈನರ್‌ನಲ್ಲಿ ಮಾತ್ರ ಕಸವನ್ನು ಎಸೆಯಿರಿ ಮತ್ತು ಖಾಲಿ ಇರುವ ರೈಲ್ವೆ ಆವರಣದಲ್ಲಿ ಅಲ್ಲ.

Published On - 5:46 pm, Tue, 13 February 24

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us