AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗಾಯಕಿ; ವಿಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ

Sophia Urista: ಗಾಯಕಿ ಸೋಫಿಯಾ ಉರಿಸ್ಟಾ ಕ್ಷಮೆ ಕೇಳುವುದಕ್ಕೂ ಮೊದಲು ಮ್ಯೂಸಿಕಲ್ ಬ್ಯಾಂಡ್​ ಬ್ರಾಸ್​ ಅಗೇನೆಸ್ಟ್ ಕೂಡ ಜನರ ಕ್ಷಮೆ ಕೇಳಿದೆ. ರಾಕ್​ವಿಲ್ಲೆ ಉತ್ಸವದಲ್ಲಿ ಏನಾಯಿತೋ ಅದು ನಮ್ಮ ನಿರೀಕ್ಷೆಗೂ ಮೀರಿ ಆಗಿದ್ದು ಎಂದು ಹೇಳಿದೆ.

Video: ವೇದಿಕೆ ಮೇಲೆ ಪ್ಯಾಂಟ್​ ಬಿಚ್ಚಿ ಅಭಿಮಾನಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಗಾಯಕಿ; ವಿಕೃತಿ ವಿರುದ್ಧ ನೆಟ್ಟಿಗರ ಆಕ್ರೋಶ
ಗಾಯಕಿ ಉರಿಸ್ಟಾ
TV9 Web
| Edited By: |

Updated on:Nov 20, 2021 | 1:02 PM

Share

ರಾಕ್​ ಸಂಗೀತವೆಂದರೆ ಅಲ್ಲಿ ಸ್ವಲ್ಪ ಅಬ್ಬರ ಇದ್ದೇ ಇರುತ್ತದೆ. ಗಾಯಕರೂ ಕೂಡ ಅತ್ಯುತ್ಸಾಹ, ಉದ್ರೇಕದಲ್ಲಿಯೇ ಹಾಡುತ್ತಾರೆ. ಅಂಥ ಸಂಗೀತ ಕೇಳುತ್ತ ಅಭಿಮಾನಿಗಳೂ ಕುಣಿದು ಕುಪ್ಪಳಿಸುತ್ತ, ಎಂಜಾಯ್​ ಮಾಡುವುದು ಸಾಮಾನ್ಯ. ಆದರೆ ವೇದಿಕೆ ಮೇಲೆ ಹಾಡು ಹಾಡುವ ಗಾಯಕನ ಉತ್ಸಾಹ, ಉದ್ರೇಕ ಮಿತಿಮೀರಿದರೆ ಎಂಬುದಕ್ಕೆ ಜ್ವಲಂತ ಉದಾಹರಣೆ ಯುಎಸ್​​ನ ಬ್ರಾಸ್​ ಅಗೇನೆಸ್ಟ್​ ಎಂಬ ಮ್ಯೂಸಿಕಲ್​ ಗ್ರೂಪ್​ (ಇದೊಂದು ರಾಕ್​ ಸಂಗೀತಗಾರರ ಗುಂಪು)ನ ಖ್ಯಾತ ಗಾಯಕಿ ಸೋಫಿಯಾ ಉರಿಸ್ಟಾ. ಈಕೆ  ಇತ್ತೀಚೆಗೆ ಒಂದು ಬಹುದೊಡ್ಡ ಮಟ್ಟದ ವಿವಾದ ಸೃಷ್ಟಿಸಿ, ಈಗ ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. 

ಇತ್ತೀಚೆಗೆ ಗಾಯಕಿ ಉರಿಸ್ಟಾ ಅವರ ಅತ್ಯಂತ ಕೆಟ್ಟ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿತ್ತು. ಅದನ್ನು ನೋಡಿದ ಬಹುತೇಕರು ಹೇಸಿಗೆ ಪಟ್ಟುಕೊಂಡಿದ್ದರು. ಕಳೆದವಾರ ಫ್ಲೋರಿಡಾದ ಡೇಟೋನಾ ಬೀಚ್​​ನಲ್ಲಿ ರಾಕ್​ವಿಲ್ಲೆ ಮೆಟಲ್​ ಉತ್ಸವ ನಡೆದಿತ್ತು.  ಈ ಉತ್ಸವದಲ್ಲಿ ಬ್ರಾಸ್​ ಅಗೇನೆಸ್ಟ್​ ರಾಕ್​ ಬ್ಯಾಂಡ್​​ನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಉರಿಸ್ಟಾ ಗಾಯನವಿತ್ತು ಮತ್ತು ಇನ್ನೂ ಹಲವು ಕಲಾವಿದರು ಸಂಗೀತ ಸಾಧನಗಳನ್ನು ನುಡಿಸುತ್ತಿದ್ದರು. ಈ ಗಾಯಕಿಗೆ ಅದೇನಾಯ್ತೋ ಗೊತ್ತಿಲ್ಲ, ಗಾಯನ ಕೇಳುತ್ತಿದ್ದ ಅಭಿಮಾನಿಯೊಬ್ಬನನ್ನು ವೇದಿಕೆಗೆ ಕರೆದು ಮಲಗಿಸಿದಳು. ನಂತರ ತನ್ನ ಪ್ಯಾಂಟ್​ ಬಿಚ್ಚಿ, ಆ ಅಭಿಮಾನಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದಳು. ಇದನ್ನೆಲ್ಲ ಹಾಡು ಹೇಳುತ್ತಲೇ ಮಾಡಿ ಮುಗಿಸಿದ್ದಳು. ಆ ಅಭಿಮಾನಿಯೂ ಕೂಡ ಸಿಕ್ಕಾಪಟೆ ಖುಷಿಯಾಗಿಯೇ ಇದ್ದ. ಆದರೆ ನೆಟ್ಟಿಗರು ಮಾತ್ರ ವಿಪರೀತ ಆಕ್ರೋಶ ವ್ಯಕ್ತಪಡಿಸಿದ್ದರು.

ಕ್ಷಮೆ ಕೇಳಿದ ಗಾಯಕಿ ವೇದಿಕೆ ಮೇಲೆ ಅಭಿಮಾನಿ ಮೇಲೆ  ಮೂತ್ರವಿಸರ್ಜನೆ ಮಾಡಿದ್ದಕ್ಕೆ ತನ್ನ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ ಸೋಫಿಯಾ ಉರಿಸ್ಟಾ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಕೇಳಿದ್ದಾರೆ.  ಟ್ವೀಟ್​ ಮಾಡಿರುವ ಅವರು, ನಾನು ಯಾವುದೇ ಸಂಗೀತ ಕಾರ್ಯಕ್ರಮದಲ್ಲೂ, ವೇದಿಕೆಯ ಮೇಲೆ ಮಿತಿಯಲ್ಲೇ ಇರುತ್ತಿದ್ದೆ. ಆದರೆ ಪ್ರಸ್ತುತ ಈ ಕಾರ್ಯಕ್ರಮದಲ್ಲಿ ನನ್ನ ಮಿತಿಯನ್ನು ತುಂಬ ಮೀರಿಬಿಟ್ಟಿದ್ದೇನೆ. ನಾನು ನನ್ನ ಕುಟುಂಬವನ್ನು, ನನ್ನ ಬ್ಯಾಂಡ್​​ನ್ನು, ಅಭಿಮಾನಿಗಳನ್ನು ತುಂಬ ಪ್ರೀತಿಸುತ್ತೇನೆ. ನನಗೆ ಅಭಿಮಾನಿಗಳಿಗೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಆದರೆ ಈಗ ನನಗೆ ಗೊತ್ತಿಲ್ಲದೇ ಮಾಡಿರುವ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ನಾನೆಂದಿಗೂ ಶಾಕ್​ ಆರ್ಟಿಸ್ಟ್​ (ಆಕಸ್ಮಿಕ ಆಘಾತ ಕೊಡುವ ಕಲಾವಿದೆ) ಅಲ್ಲ. ನನ್ನ ಪಾಲಿಗೆ ಸಂಗೀತಕ್ಕೇ ಮೊದಲ ಆದ್ಯತೆ. ನನಗೆ ಬೆಂಬಲ, ಪ್ರೀತಿ ಕೊಟ್ಟು ಸಲುಹುವ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ಇನ್ನು ಗಾಯಕಿ ಸೋಫಿಯಾ ಉರಿಸ್ಟಾ ಕ್ಷಮೆ ಕೇಳುವುದಕ್ಕೂ ಮೊದಲು ಮ್ಯೂಸಿಕಲ್ ಬ್ಯಾಂಡ್​ ಬ್ರಾಸ್​ ಅಗೇನೆಸ್ಟ್ ಕೂಡ ಜನರ ಕ್ಷಮೆ ಕೇಳಿದೆ. ರಾಕ್​ವಿಲ್ಲೆ ಉತ್ಸವದಲ್ಲಿ ಏನಾಯಿತೋ ಅದು ನಮ್ಮ ನಿರೀಕ್ಷೆಗೂ ಮೀರಿ ಆಗಿದ್ದು. ಇಂಥ ಘಟನೆ ಮುಂದೆಂದೂ ನಮ್ಮ ಶೋದಲ್ಲಿ ಆಗುವುದಿಲ್ಲ ಎಂಬ ಭರವಸೆಯನ್ನು ಕೊಡುತ್ತೇವೆ ಎಂದು ಹೇಳಿದ್ದರು.

ವಿವಾದ ಸೃಷ್ಟಿಸಿರುವ ವಿಡಿಯೋ:

ಇದನ್ನೂ ಓದಿ: ಬಿಡಿಎ ಕಡತಗಳ ಒಂದೊಂದು ಹಾಳೆಯನ್ನೂ ಜಾಲಾಡುತ್ತಿರುವ ಎಸಿಬಿ, ಬ್ರೋಕರ್‌ಗಳಿಂದ ತುಂಬಿದ್ದ ಆವರಣದಲ್ಲಿ ಸ್ಮಶಾನ ಮೌನ

Published On - 12:55 pm, Sat, 20 November 21

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ