ನಾನು ಸ್ವರ್ಗ ಕಂಡೆ: 11 ನಿಮಿಷಗಳ ಕಾಲ ಸತ್ತು ಬದುಕಿ ಬಂದ ಮಹಿಳೆ ಹೇಳಿದ್ದೇನು?

ಸತ್ತವರು ಮತ್ತೆ ಬದುಕಿ ಬರ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ, ನಮ್ಮ ಜೀವನ ತುಂಬಾ ವಿಚಿತ್ರ, ನಮ್ಮ ಕೈ ಮೀರಿ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. 11 ನಿಮಿಷಗಳ ಕಾಲ ಸತ್ತಿದ್ದ ಮಹಿಳೆ ಹೇಳಿರುವ ವಿಚಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ನಾನು ಸ್ವರ್ಗ ಕಂಡೆ: 11 ನಿಮಿಷಗಳ ಕಾಲ ಸತ್ತು ಬದುಕಿ ಬಂದ ಮಹಿಳೆ ಹೇಳಿದ್ದೇನು?
ಸಾವು Image Credit source: Believer.com
Follow us
|

Updated on: Oct 20, 2024 | 1:53 PM

ಸತ್ತವರು ಮತ್ತೆ ಬದುಕಿ ಬರ್ತಾರಾ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ, ನಮ್ಮ ಜೀವನ ತುಂಬಾ ವಿಚಿತ್ರ, ನಮ್ಮ ಕೈ ಮೀರಿ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. 11 ನಿಮಿಷಗಳ ಕಾಲ ಸತ್ತಿದ್ದ ಮಹಿಳೆ ಹೇಳಿರುವ ವಿಚಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಮಹಿಳೆ 11 ನಿಮಿಷಗಳ ಕಾಲ ಸತ್ತು ಮತ್ತೆ ಭೂಮಿಗೆ ಬಂದಿದ್ದಾರಂತೆ, ರ್ಲೋಟ್ ಹೋಮ್ಸ್ ಎಂಬ ಮಹಿಳೆ ತಾನು ಸತ್ತಾಗ ನೇರವಾಗಿ ಸ್ವರ್ಗಕ್ಕೆ ಹೋದೆ ಎಂದು ಹೇಳಿಕೊಂಡಿದ್ದಾಳೆ. ಇಲ್ಲಿ ಅವರು ಕಲ್ಪನೆಗೆ ಮೀರಿದ ಅನೇಕ ವಿಷಯಗಳನ್ನು ಅವರು ಕಂಡಿದ್ದಾಗಿ ಹೇಳಿದ್ದಾರೆ.

2019ರಲ್ಲಿ ಅಧಿಕ ರಕ್ತದೊತ್ತಡದಿಂದಾಗಿ ಮಹಿಳೆಯ ಸ್ಥಿತಿ ಹದಗೆಟ್ಟಿತ್ತು, ಆಸ್ಪತ್ರೆಯ ಹಾಸಿಗೆ ಮೇಲೆ ಕೊನೆಯುಸಿರೆಳೆದಿದ್ದರು. 11 ನಿಮಿಷಗಳ ಬಳಿಕ ಮತ್ತೆ ಉಸಿರಾಡಲು ಶುರು ಮಾಡಿದ್ದರು. ಆಗ ಸ್ವರ್ಗಕ್ಕೆ ಹೋಗಿದ್ದೆ, ದೇವತೆಗಳು ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದೆ. ತನ್ನ ದೇಹವನ್ನು ಕೂಡ ನಾನು ನೋಡಿದ್ದೆ ಎಂದು ಆಕೆ ಹೇಳಿದ್ದಾಳೆ.

ಮತ್ತಷ್ಟು ಓದಿ: Viral Video : ಅಬ್ಬಬ್ಬಾ! ಈ ಪೋರನ ಸ್ಟಂಟಿಂಗ್ ಟ್ಯಾಲೆಂಟ್ ನೋಡಿ, ವಿಡಿಯೋ ವೈರಲ್

ವೈದ್ಯರು ಹಾಗೂ ನರ್ಸ್​ಗಳು ಸಿಪಿಆರ್ ನೀಡುತ್ತಿದ್ದರು, ಆ ಸಮಯದಲ್ಲಿ ಪ್ರಕಾಶಮಾನವಾದ ಬೆಳಕು ನೋಡಿದೆ, ಆಹ್ಲಾದಕರ ಸಂಗೀತವಿತ್ತು, ಹೂವಿನ ಪರಿಮಳವೂ ಬರುತ್ತಿತ್ತು, ಕಣ್ಣೂ ತೆರೆದಾಗ ಅದು ಸ್ವರ್ಗವಾಗಿತ್ತು, ಅಲ್ಲಿನ ಸಂಗೀತಕ್ಕೆ ಪ್ರಕೃತಿಯೂ ಕುಣಿಯುತ್ತಿತ್ತು ಎಂದು ಹೇಳಿದ್ದಾರೆ.

ಆ ಸ್ಥಳವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ, ತನ್ನ ಮೃತ ಪೋಷಕರು, ಸಹೋದರಿಯನ್ನು ಭೇಟಿಯಾದೆ. ಅಲ್ಲಿ ಅವರು ತುಂಬಾ ಚಿಕ್ಕವರಾಗಿ, ಆರೋಗ್ಯವಂತರಾಗಿ ಕಾಣುತ್ತಿದ್ದರು, ತನ್ನ ಹೊಟ್ಟೆಯಲ್ಲಿಯೇ ಸತ್ತಿದ್ದ ಮಗುವನ್ನು ಕೂಡ ಭೇಟಿಯಾದೆ, ಸುಂದರ ಅನುಭವದ ಜತೆ ನರಕದ ದರ್ಶನವೂ ಆಗಿತ್ತು.

ಕೊಳೆತ ವಾಸನೆ, ಕಿರುಚಾಟಗಳು ಕೇಳಿಬಂದಿತ್ತು, ಬಳಿಕ ಆಸ್ಪತ್ರೆಯ ಹಾಸಿಗೆ ಮೇಲೆ ಕಣ್ಣುತೆರೆದೆ ಎಂದು ಹೇಳಿಕೊಂಡಿದ್ದ ಷಾರ್ಲೆಟ್ ಈ ಘಟನೆ ನಡೆದು ನಾಲ್ಕು ವರ್ಷಗಳ ಬಳಿಕ 2023 ನವೆಮಬರ್ 28ರಂದು ನಿಧನರಾದರು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ
ಈಡಿ ವ್ಯಾಪ್ತಿಯನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ: ಸಚಿವ