AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಸ್​ ಅಧಿಕಾರಿ ಈತನನ್ನು ಆಫ್ರಿಕಾದ ಬಾಬಾ ರಾಮ್​ದೇವ್​ ಎಂದಿದ್ದಾರೆ; ಏನಿರಬಹುದು ಈತನ ಸಾಹಸಗಾಥೆ? ವಿಡಿಯೋ ವೈರಲ್​

ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಅವರು ಈ ವಿಡಿಯೋ ನೋಡಿ ಆಶ್ಚರ್ಯರಾಗಿದ್ದಾರೆ. ಹಾಗೂ ಈತನ ಸಾಹಸವನ್ನು ನೋಡಿ ಆಫ್ರಿಕಾದ ಬಾಬಾ ರಾಮ್​ದೇವ್​ ಎಂದು ಕರೆದಿದ್ದಾರೆ. ಏನಿರಬಹುದು ಆತನ ಸಾಹಸಗಾಥೆ? ಇಲ್ಲಿದೆ ವಿಡಿಯೋ.

ಐಪಿಎಸ್​ ಅಧಿಕಾರಿ ಈತನನ್ನು ಆಫ್ರಿಕಾದ ಬಾಬಾ ರಾಮ್​ದೇವ್​ ಎಂದಿದ್ದಾರೆ; ಏನಿರಬಹುದು ಈತನ ಸಾಹಸಗಾಥೆ? ವಿಡಿಯೋ ವೈರಲ್​
ವಿಡಿಯೋ ವೈರಲ್​
shruti hegde
|

Updated on:Apr 28, 2021 | 12:31 PM

Share

ಕೆಲವೊಂದು ನಂಬಲಾಗದ ಸಾಹಸಗಳ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗುತ್ತಿದೆ. ಅದೆಷ್ಟೋ ಎತ್ತರದ ಕಟ್ಟಡಗಳನ್ನು ಹತ್ತುವ ಸಾಹಸ, ಮರದಿಂದ ಮರಕ್ಕೆ ಮಂಗನಂತೆ ಜಿಗಿಯುವ ಸಾಹಸ, ರಸ್ತೆಯ ಮೇಲೆ ಮಲಗಿ ಮೈಮೇಲೆ ಕಾರು ಹತ್ತಿಸಿಕೊಳ್ಳುವ ಸಾಹಸಗಳನ್ನು ನೋಡಿರುತ್ತೇವೆ. ಅಂತಹುದೇ ಒಂದು ಸಾಹಸದ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈತನ ಸಾಹಸವನ್ನು ನೋಡಿದರೆ ನೀವೂ ಆಶ್ಚರ್ಯಚಕಿತರಾಗುತ್ತೀರಾ. ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಅವರು ಈ ವಿಡಿಯೋ ನೋಡಿ ಆಶ್ಚರ್ಯರಾಗಿದ್ದಾರೆ. ಹಾಗೂ ಈತನ ಸಾಹಸವನ್ನು ನೋಡಿ ಆಫ್ರಿಕಾದ ಬಾಬಾ ರಾಮ್​ದೇವ್​ ಎಂದು ಕರೆದಿದ್ದಾರೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ವ್ಯಕ್ತಿ ವಿಭಿನ್ನ ಸಾಹಸಗಳನ್ನು ಮಾಡುತ್ತಿರುವುದನ್ನು ನೋಡಬಹುದು. ನಿಮಗೂ ಆಶ್ಚರ್ಯವಾಗುವಂತಹ ವ್ಯಕ್ತಿಯ ಸಾಹಸದ ವಿಡಿಯೋ ಇಲ್ಲಿದೆ.

ವಿಡಿಯೋದಲ್ಲಿ ನೋಡಿದಂತೆ ವ್ಯಕ್ತಿ ಮೊದಲು ಹಿಂಬಾಗದಿಂದ ಕಾಲನ್ನು ಮಡಚುತ್ತಾನೆ ಮತ್ತು ಕಾಲನ್ನು ಒಂದು ರೌಂಡ್​ ಸುತ್ತಿಸುತ್ತಾನೆ. ಕೈಗಳನ್ನು ಹಗ್ಗದಂತೆ ಬಳಸಿಕೊಂಡು ಸ್ಕಿಪ್ಪಿಂಗ್​ ಆಡುತ್ತಾನೆ. ಕಾಲುಗಳಲ್ಲಿಯೇ ತಲೆ ಮೇಲಿರುವ ಟೋಪಿಯನ್ನು ತೆಗೆಯುತ್ತಾನೆ. ಕೈಗಳನ್ನು ಮಡಚಿ ವಿಭಿನ್ನ ರೀತಿಯಲ್ಲಿ ನಿಂತುಕೊಳ್ಳುತ್ತಾನೆ. ನೆಲದ ಮೇಲೆ ಕುಳಿತು ತನ್ನ ಕತ್ತಿನ ಮೇಲೆ ಎರಡೂ ಕಾಲುಗಳನ್ನು ಇರಿಸಿಕೊಳ್ಳುವುದನ್ನು ನೋಡಿದರೆ ರೋಮಾಂಚನವಾಗುತ್ತದೆ. ಕಬ್ಬಿಣದ ಸರಳಪಳಿಯಂತೆ ಆತನ ಕೈಕಾಲುಗಳು ತಿರುಗುವುದು ಎಲ್ಲರನ್ನೂ ಆಶ್ಚರ್ಯವನ್ನುಂಟು ಮಾಡಿದೆ. ವಿಡಿಯೋ ನೋಡಿದ ನೆಟ್ಟಿಗರು ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ವಿಡಿಯೋವನ್ನು ನೋಡಿದ್ದಾರೆ. ಕಾಮೆಂಟ್​ ಮಾಡುವ ಮೂಲಕ ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ

Published On - 12:30 pm, Wed, 28 April 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ