AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ

ಮೇಕೆಗಳು, ಕುರಿಗಳಿಂದ ಹಿಡಿದು ಹಂದಿ, ಹಸು ಹೀಗಿ ಇನ್ನಿತರ ಪ್ರಾಣಿಗಳು ರೈಲಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ
ರೈಲಿನಲ್ಲಿ ಪ್ರಯಾಣಿಸುತ್ತಿರುವ ಮೇಕೆ, ಕುರಿ, ಜಾನುವಾರಗಳು
shruti hegde
| Edited By: |

Updated on: Apr 28, 2021 | 7:19 AM

Share

ರಸ್ತೆಯಲ್ಲಿ ಸಂಚರಿಸುವಾಗ ತಮ್ಮ ಬೈಕ್​ನಲ್ಲಿ ಬೆಕ್ಕಿನ ಮರಿಗಳನ್ನೂ, ಕಾರಿನಲ್ಲಿ ಸಾಕಿದ ನಾಯಿ ಮರಿಗಳನ್ನೂ, ಬಸ್​ನಲ್ಲಿ ಸಂಚರಿಸುವಾಗ ಕೋಳಿ ಮರಿಗಳನ್ನೂ ಕರೆದೊಯ್ಯುವ ದೃಶ್ಯವನ್ನು ನೋಡಿಯೇ ಇರುತ್ತೀರಿ. ಅಂತಹುದೇ ದೃಶ್ಯ ಇದೀಗ ಚೀನಾದಲ್ಲಿ ವೈರಲ್​ ಆಗಿದೆ. ಮೇಕೆಗಳು, ಕುರಿಗಳಿಂದ ಹಿಡಿದು ಹಂದಿ, ಹಸು ಹೀಗಿ ಇನ್ನಿತರ ಪ್ರಾಣಿಗಳನ್ನು ರೈತರು ರೈಲಿನಲ್ಲಿ ಕರೆದೊಯ್ಯುತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲಿನಲ್ಲಿ ಜನರು ಪ್ರಯಾಣವನ್ನು ಬೆಳೆಸುತ್ತಾರೆ. ಇದೀಗ ಚೀನಾದಲ್ಲಿ ಮೇಕೆ, ಕುರಿಗಳು ರೈಲಿಗಾಗಿ ಕಾಯುತ್ತಾ ನಿಂತಿರುವ ದಶ್ಯ ಕಂಡುಬಂದಿದೆ. ಪ್ರಯಾಣಿಕರೆಲ್ಲ ಸಾಗುವ ರೈಲಿನಲ್ಲಿ ಕುರಿ, ಮೇಕೆ ಮತ್ತು ಹಂದಿಗಳು ಚೀನಾದ ಸಿಚುವಾನ್​ ಭೂಪ್ರದೇಶದ ಪುಕ್ಸಿಯಾಂಗ್​ನಿಂದ ರೈಲಿನಲ್ಲಿ ಹತ್ತುವ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹಸುಗಳು ಕೂಡಾ ಪ್ರಯಾಣಕ್ಕಾಗಿ ರೈಲನ್ನು ಕಾಯುತ್ತಿರುವ ದೃಶ್ಯ ಸೆರೆಯಾಗಿದೆ. ಇಲ್ಲಿನ ರೈಲು ಕಡಿಮೆ ವೇಗದಲ್ಲಿ ಸಂಚರಿಸುವುದರಿಂದ ರೈತರು ರೈಲು ಹತ್ತಿಕೊಂಡ ಪ್ರಾಣಿಗಳ ಜೊತೆ ಮಾರುಕಟ್ಟೆಗೆ ತಲುಪುತ್ತಾರೆ.

ರೈಲು ಹತ್ತಿಸ ತಕ್ಷಣ ಪ್ರಾಣಿಗಳು ಸೀಟುಗಳೆಲ್ಲಿ.. ಎಂದು ಹುಡುಕಾಡುವ ದೃಶ್ಯ ಕಂಡುಬಂದಿದೆ. ನೆಟ್ಟಿಗರು ಈ ಕುರಿತಂತೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ದೃಶ್ಯ ಆಸಕ್ತಿದಾಯಕವಾಗಿದೆ ಮತ್ತು ಅಸಹನೀಯ ಎಂಬುದಾಗಿಯೂ ಅಭಿಪ್ರಾಯ ಕೇಳಿ ಬಂದಿದೆ.

ರೈತರು ಹಳ್ಳಿಯಿಂದ ಪಟ್ಟಣಕ್ಕೆ ಹೋಗಲು 353 ಕಿಲೋಮೀಟರ್​ ದೂರವಾಗುತ್ತದೆ. ಅಂದರೆ 9 ತಾಸು ಪ್ರಯಾಣ ಬೇಕು. ರೈತರು ಉತ್ಪಾದಿಸಿದ ಉತ್ಪನ್ನವನ್ನು ಸಾಗಿಸಲು ರೈಲು ವ್ಯವಸ್ಥೆ ಮಾಡಿಕೊಡಲಾಗಿದೆ. ರೈಲಿನಲ್ಲಿ ಕಡಿಮೆ ಟಿಕೆಟ್​ ಹೊಂದಿದ್ದು, ಪ್ರಾಣಿಗಳನ್ನೂ ಸಹ ಕರೆದೊಯ್ಯಲು ಚೀನಾ ಜನರಿಗೆ ಸಹಾಯವಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಜೊತೆಗೆ, ಈ ರೈಲು ರೈತರಿಗಾಗಿಯೇ ನಿಯೋಜಿಸಲಾಗಿದೆ. ಮುಕ್ತವಾಗಿ ರೈತರು ಇದರಲ್ಲಿ ಸಂಚರಿಸಬಹುದು. ಚೀನಾದ ಪ್ರಾಣಿಗಳನ್ನು ಸಾಗಿಸಲು ಅನುವು ಮಾಡಿಕೊಡುವ ಏಕೈಕ ರೈಲು ಇದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವೈರಲ್​ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ