AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!

ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್​ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜ್ವಾಲಾಮುಖಿಯಲ್ಲಿ ಪಿಜ್ಜಾ ತಯಾರು; ನೀವೂ ಹೀಗೆಲ್ಲ ಮಾಡಬೇಡಿ ಹುಷಾರು!
ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ
shruti hegde
|

Updated on: May 14, 2021 | 5:02 PM

Share

ಕಳೆದ ಫೆಬ್ರವರಿ ತಿಂಗಳಿನಿಂದ ಗ್ವಾಟೆಮಾಲಾದ ಪಕಾಯಾ ಜ್ವಾಲಾಮುಖಿ ಸ್ಟೋಟಗೊಳ್ಳುತ್ತಿದೆ. ಅಲ್ಲಿನ ಜನರು ಮತ್ತು ಅಧಿಕಾರಿಗಳಿಗೆ ಜ್ವಾಲಾಮುಖಿಯ ಭೀಕರತೆ ಹೆಚ್ಚು ಎಚ್ಚರವಹಿಸುವಂತೆ ಮಾಡಿದೆ. ಅಕೌಂಟೆಟ್ ವೃತ್ತಿಯಲ್ಲಿರುವ 34 ವರ್ಷದ ಡೇವಿಡ್​ ಗಾರ್ಸಿಯಾ ಎಂಬುವವರು ಜ್ವಾಲಮುಖಿಯ ಬಂಡೆಯ ಮೇಲೆ ಪಿಜ್ಜಾ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜ್ವಾಲಾಮುಖಿ ಸ್ಪೋಟಗೊಂಡಿರುವುದರಿಂದಾಗಿ ಕಲ್ಲಿನ ಬಂಡೆಗಳು ಹೆಚ್ಚು ಬಿಸಿಯಿದೆ. ಬಂಡೆಗಳ ಶಾಖದ ತೀವ್ರತೆಯಿಂದ ಪಿಜ್ಜಾ ತಯಾರಿಸಿದ್ದೇನೆ. ಇಂದು ಪಿಜ್ಜಾ ಸವಿಯಲು ಅನೇಕ ಜನರು ಬರುತ್ತಾರೆ ಎಂದು ಡೇವಿಡ್​ ಗಾರ್ಸಿಯಾ ಹೇಳಿದ್ದಾರೆ. ಪಿಜ್ಜಾ ತಯಾರಿಸುವಾಗ ಗಾರ್ಸಿಯಾ ಅವರು ಬೆಂಕಿಯಿಂದ ರಕ್ಷಿಸುವ ಉಡುಪನ್ನು ಧರಿಸಿರುತ್ತಾರೆ. ತೀವ್ರತೆಯ ಶಾಖದಲ್ಲಿ ಪಿಜ್ಜಾ ಬೇಯಿಸಿ, ಅದಕ್ಕೆ ಟೊಮ್ಯಾಟೋ ಸಾಸ್​ ಮತ್ತು ಚೀಸ್​ಅನ್ನು ಮಿಶ್ರಣ ಮಾಡಿ ಪಿಜ್ಜಾ ಕತ್ತರಿಸುತ್ತಾರೆ.

ಅಡುಗೆ ಹೇಗೆ ಮಾಡಿದರು ಎಂಬುದರ ಕುರಿತಾಗಿ ಹೇಳಿದ ಗಾರ್ಸಿಯಾ ಅವರು, ಸುಮಾರು 800 ಡಿಗ್ರಿಗಳಷ್ಟು ಇರುವ ಶಾಖದಲ್ಲಿ ಪಿಜ್ಜಾದ ಪಾತ್ರೆಯನ್ನು ಇರಿಸಿದ್ದೇನೆ. ಅದು 14 ನಿಮಿಷಗಳಲ್ಲಿ ಸಿದ್ಧಗೊಂಡಿತು. ನಂತರ ಅದನ್ನು ಸವಿದೆ. ತುಂಬಾ ರುಚಿಕರವಾಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್

Follow Us
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಶೃಂಗೇರಿ ವೋಟ್ ಟ್ಯಾಂಪರಿಂಗ್ ಆರೋಪ: FSL​ನಲ್ಲಿ ಎಲ್ಲ ಗೊತ್ತಾಗಲಿದೆ: ಪರಮೇಶ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್
ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದ ಜೀವರಾಜ್