Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈತ್ಯಾಕಾರದ ಆನೆ ಕ್ರಿಕೆಟ್​ ಆಡುವುದನ್ನು ನೋಡಿದರೆ ನೀವೂ ಆಶ್ಚರ್ಯಪಡ್ತೀರಾ; ಇಲ್ಲಿದೆ ವಿಡಿಯೋ

ದೈತ್ಯಾಕಾರದ ಆನೆ ಸ್ಟೈಲ್ ಆಗಿ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡಲು ನಿಂತಿದೆ. ಚೆಂಡು ಎದುರು ಬರುತ್ತಿದ್ದಂತೆ ತನ್ನ ಸೊಂಡಿಲಿನಿಂದ ಹಿಡಿದ ಬ್ಯಾಟ್​ ಮೂಲಕ ಬೀಸಿ ಬೀಸಿ ಚೆಂಡನ್ನು ಹೊಡೆಯುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.

ದೈತ್ಯಾಕಾರದ ಆನೆ ಕ್ರಿಕೆಟ್​ ಆಡುವುದನ್ನು ನೋಡಿದರೆ ನೀವೂ ಆಶ್ಚರ್ಯಪಡ್ತೀರಾ; ಇಲ್ಲಿದೆ ವಿಡಿಯೋ
ಕ್ರಿಕೆಟ್​ ಆಡುತ್ತಿರುವ ದೈತ್ಯಾಕಾರದ ಆನೆ
Follow us
shruti hegde
|

Updated on: May 10, 2021 | 3:30 PM

ದೇಶದೆಲ್ಲೆಡೆ ಕೊರೊನಾ ವೈರಸ್​ ವ್ಯಾಪಕವಾಗಿ ಹರಡುವಿಕೆಯಿಂದ ಈ ಬಾರಿಯ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿಯನ್ನು ಮುಂದೂಡಲಾಯಿತು. ಹೀಗಿರುವಾಗ ಗುಂಪೊಂದು ಸೇರಿ ಕ್ರಿಕೆಟ್​ ಆಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕ್ರಿಕೆಟ್​ ಟೀಂನಲ್ಲಿ ಬ್ಯಾಟಿಂಗ್​ ಮಾಡುತ್ತಿರುವ ದೈತ್ಯಾಕಾರನನ್ನು ನೋಡಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ. ಹಾಗಾದರೆ ಯಾರಿರಬಹುದು ಅಂತಹ ದೈತ್ಯ ಆಟಗಾರ? ವಿಡಿಯೋ ಇಲ್ಲಿದೆ ನೀವೂ ನೋಡಿ.

ದೈತ್ಯಾಕಾರದ ಆನೆ ಸ್ಟೈಲ್ ಆಗಿ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡಲು ನಿಂತಿದೆ. ಚೆಂಡು ಎದುರು ಬರುತ್ತಿದ್ದಂತೆ ತನ್ನ ಸೊಂಡಿಲಿನಿಂದ ಹಿಡಿದ ಬ್ಯಾಟ್​ ಮೂಲಕ ಬೀಸಿ ಬೀಸಿ ಚೆಂಡನ್ನು ಹೊಡೆಯುತ್ತಿದೆ. ಪ್ರತಿ ಚೆಂಡು ಕೂಡಾ ಸಿಕ್ಸ್​ ಗಡಿಯಾಚೆಗೆ ಹೋಗಿ ಬೀಳುತ್ತಿದೆ. 30 ಸೆಕೆಂಡುಗಳಿರುವ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದಾರೆ. ಬ್ಯಾಟ್​ ಹಿಡಿದು ನಿಂತ ಅನೆಯನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಸ್ಥಳದಲ್ಲಿ ಆನೆ ಹೊಡೆದ ಚೆಂಡನ್ನು ಹಿಡಿಯಲು, ಮತ್ತು ಆನೆಯನ್ನು ಔಟ್​ ಮಾಡಲು ಆಟಗಾರರು ನಿಂತಿದ್ದಾರೆ. ಅತಿ ಚಾಣುಕ್ಯತನದಿಂದ ಆನೆ ಸಿಕ್ಸರ್​ ಹೊಡೆಯುವ ದೃಶ್ಯ ನೋಡಿದ ನೆಟ್ಟಿಗರು ಆನೆಯ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ ಪುಟವೊಂದರಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋಕ್ಕೆ ಕಮೆಂಟ್ಸ್​ಗಳ ಸುರಿಮಳೆಯೇ ಬಂದಿದೆ. ಮುಂದಿನ ಐಪಿಲ್​ಗೆ ಗಜರಾಜನನ್ನು ಆಯ್ಕೆ ಮಾಡುವುದಾಗಿ ನೆಟ್ಟಿಗರು ಪ್ರಶಂಸೆ ಪಟ್ಟಿದ್ದಾರೆ.

ಕ್ರಿಕೆಟ್​ ಅಂದಾಕ್ಷಣ ಜನರ ಕಿವಿ ನೆಟ್ಟಗಾಗುತ್ತದೆ. ಅಷ್ಟು ಇಷ್ಟದ ಕ್ರಿಕೆಟ್​ ಆಟಕ್ಕೆ ಸಂಬಂಧಿಸಿದ ವಿಷಯವಂತೂ ಹೆಚ್ಚು ಚರ್ಚೆಯಾಗುವುದು ಸಾಮಾನ್ಯ. ಇಲ್ಲಿ, ಆನೆ ಬ್ಯಾಟ್​ ಹಿಡಿದು ಕ್ರಿಕೆಟ್​ ಆಡುತ್ತಿರುವ ದೃಶ್ಯ ಮತ್ತು ಆನೆಗೆ ಕ್ರಿಕೆಟ್​ ಆಟದ ಮೇಲಿರುವ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ವೈರಲ್ ವಿಡಿಯೋ: ವಿಷಕಾರಿ ಹಾವಿನೆದುರು ಕಾಳಗಕ್ಕಿಳಿದು ಗೆದ್ದ ಸಣ್ಣ ಜೇಡ..!

ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು