Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​

ರಸ್ತೆಯಲ್ಲಿ ಬಾಲಕ ಟ್ರಕ್ ಟೈರ್​ ಮೇಲೆ ನಿಂತು ತನ್ನ ಕಾಲುಗಳ ಸಹಾಯದಿಂದ ಟೈಯರ್​ಅನ್ನು ಓಡಿಸುತ್ತಾನೆ. ಬಾಲಕನ ಸ್ಟಂಟ್​ ವಿಡಿಯೋ ವೈರಲ್​.. ವಿಡಿಯೋ ಇಲ್ಲಿದೆ ನೀವೂ ನೋಡಿ.

ಪೆಟ್ರೋಲ್, ಡೀಸೆಲ್ ಖರ್ಚೇ ಇಲ್ಲ, ಟೈರ್​ ಹತ್ತಿ ರಸ್ತೆಯಲ್ಲಿ ಚಲಿಸಿದ ಬಾಲಕ! ಸ್ಟಂಟ್ ವಿಡಿಯೋ ವೈರಲ್​
ಟ್ರಕ್​ ಟೈರ್​ ಮೇಲೆ ಹತ್ತಿ ನಿಂತ ಬಾಲಕ
Follow us
shruti hegde
|

Updated on:May 10, 2021 | 12:18 PM

ಸಾಮಾಜಿಕ ಜಾಲತಾಣದಲ್ಲಿ ಬಾಲಕರ ಸ್ಟಂಟ್​ ವಿಡಿಯೋಗಳು ಆಗಾಗ ಹೆಚ್ಚು ವೈರಲ್ ಅಗುತ್ತಿರುತ್ತದೆ. ಅದೆಷ್ಟೋ ಎತ್ತರದ ಕಟ್ಟಡವನ್ನು ಹತ್ತಿದ ಸಾಹಸ, ಕೈಕಾಲುಗಳನ್ನು ಸರಳಪಳಿಯಂತೆ ತಿರುಚುವ ಸಾಹಸಗಳನ್ನು ನೋಡಿಯೇ ಇರುತ್ತೀರಿ. ಅಂತಹುದೇ ಒಂದು ಸ್ಟಂಟ್​ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಅಗುತ್ತಿದೆ. ಬಾಲಕನ ಟ್ಯಾಲೆಂಟ್​ ನಿಮ್ಮನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ವಿಡಿಯೋ ಇಲ್ಲಿದೆ ನೋಡಿ.

ರಸ್ತೆಯಲ್ಲಿ ಬಾಲಕ ಟ್ರಕ್ ಟೈರ್​ ಮೇಲೆ ನಿಂತು ತನ್ನ ಕಾಲುಗಳ ಸಹಾಯದಿಂದ ಟೈರ್​ಅನ್ನು ಓಡಿಸುತ್ತಾನೆ. ಮತ್ತು ಟೈರ್​ಅನ್ನು ತನ್ನ ಕಾಲುಗಳ ಸಹಾಯದಿಂದ ಹಿಂದಕ್ಕೆ ಎಳೆಯುತ್ತಾನೆ. ಈತನ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಬಾಲಕನ ಸ್ಟಂಟ್​ ನೋಡಿ ಆಶ್ಚರ್ಯಗೊಂಡಿದ್ದಾರೆ.

ವಿಡಿಯೋವನ್ನು ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿರುತ್ತವೆ. ಆ ಸಮಯದಲ್ಲಿ ಬಾಲಕ ರಸ್ತೆಯ ಬದಿಯಲ್ಲಿ ಟ್ರಕ್​ ಟೈರ್​​ಅನ್ನು ಹಿಡಿದು ನಿಂತಿರುವುದನ್ನು ನೋಡಬಹುದು. ಬಳಿಕ ರಸ್ತೆಯ ಮಧ್ಯಕ್ಕೆ ಬಂದು ಟೈರ್​ ಮೇಲೆ ಹತ್ತಿ ನಿಂತು ಟೈಯರ್​ ಓಡಿಸಲು ಪ್ರಾರಂಭಿಸುತ್ತಾನೆ. ತನ್ನ ಕಾಲುಗಳ ಮೂಲಕ ಟೈರ್​ಅನ್ನು ಓಡಿಸುವ ರೀತಿ ಆಶ್ಚರ್ಯವನ್ನು ಉಂಟುಮಾಡುತ್ತದೆ.

ಮೇ 8ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮತ್ತು 100ಕ್ಕೂ ಹೆಚ್ಚು ಲೈಕ್ಸ್​ಗಳು ಮತ್ತು ರಿಟ್ವೀಟ್​ಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಸ್ಟಂಟ್​ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್​ ಕಾರ್, ಮತ್ತೆ ಚಾಲಕನ ಕಥೆ?

Published On - 12:15 pm, Mon, 10 May 21

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು