AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಪರೀಕ್ಷೆ ಕೇಂದ್ರದಲ್ಲಿ ಮೂರ್ಛೆ ಹೋದ ವಿದ್ಯಾರ್ಥಿ, ಕಾರಣ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ

ಬಿಹಾರದ ನಳಂದಾ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿರುವ ಘಟನೆಯೊಂದು ನಡೆದಿದೆ. ಇತನು ಪರೀಕ್ಷೆಯ ಒತ್ತಡದಿಂದ ಮೂರ್ಛೆ ಹೋಗಿಲ್ಲ. 500 ಹುಡುಗಿಯರನ್ನು ಕಂಡು ಹುಡುಗ ಮೂರ್ಛೆ ಹೋಗಿದ್ದಾನೆ.

Viral News: ಪರೀಕ್ಷೆ ಕೇಂದ್ರದಲ್ಲಿ ಮೂರ್ಛೆ ಹೋದ ವಿದ್ಯಾರ್ಥಿ, ಕಾರಣ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತ
ಮೂರ್ಛೆ ಹೋದ ವಿದ್ಯಾರ್ಥಿ ಶಂಕರ್
TV9 Web
| Edited By: |

Updated on:Feb 02, 2023 | 4:18 PM

Share

ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಬಂದಾಗ ಇಲ್ಲಸಲ್ಲದ ನಾಟಕವನ್ನೆಲ್ಲ ಮಾಡುವುದು ಸಹಜ, ಪರೀಕ್ಷೆ ಎಂದರೆ ಭಯ ಎಂದು ಮೂರ್ಛೆ ಹೋಗುವುದನ್ನು ನೋಡಿದ್ದೀರಾ ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಹುಡುಗಿಯರನ್ನು ನೋಡಿ ಒಬ್ಬ ಹುಡುಗ ಮೂರ್ಛೆ ಹೋಗಿದ್ದಾನೆ. ಹೌದು ಬಿಹಾರದ ನಳಂದಾ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿರುವ ಘಟನೆಯೊಂದು ನಡೆದಿದೆ. ಇತನು ಪರೀಕ್ಷೆಯ ಒತ್ತಡದಿಂದ ಮೂರ್ಛೆ ಹೋಗಿಲ್ಲ. ಇತ ಬೇರೆಯೇ ಕಾರಣಕ್ಕೆ ಮೂರ್ಛೆ ಹೋಗಿದ್ದಾನೆ, ಎಎನ್‌ಐ ಪ್ರಕಾರ, ಈ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹೋದಾಗ, ಕೊಠಡಿಯ ಪೂರ್ತಿ ವಿದ್ಯಾರ್ಥಿನಿಯರು ತುಂಬಿದ್ದು, ಆ ಕೋಣೆಯಲ್ಲಿ ಇವನು ಒಬ್ಬನೇ ವಿದ್ಯಾರ್ಥಿ. ಶಂಕರ್ ಎಂಬ ವಿದ್ಯಾರ್ಥಿ ಷರೀಫ್ ಅಲ್ಲಮ ಇಕ್ಬಾಲ್ ಕಾಲೇಜಿನಲ್ಲಿ ಓದುತ್ತಿದ್ದ ಎಂದು ಹೇಳಲಾಗಿದೆ. ಶಂಕರ್ ಬ್ರಿಲಿಯಂಟ್ ಶಾಲೆಯಲ್ಲಿ ಮಧ್ಯಂತರ ಪರೀಕ್ಷೆಗೆ ಹೋಗಿದ್ದ. ಸುದ್ದಿ ಸಂಸ್ಥೆಯೊಂದಿಗಿನ ಸಂವಾದದ ಸಮಯದಲ್ಲಿ, ಶಂಕರ್ ಅವರ ಚಿಕ್ಕಮ್ಮ ಹೇಳಿರುವಂತೆ 500 ಹುಡುಗಿಯರಲ್ಲಿ ಇವನು ಒಬ್ಬನೇ ಹುಡುಗ ಎಂದು ತಿಳಿದಾಗ ಶಂಕರ್ ಭಯದಿಂದ ಮೂರ್ಛೆ ಹೋದನು ಎಂದು ಹೇಳಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗನನ್ನು ಕಂಡು ಪರೀಕ್ಷಾ ಕೇಂದ್ರದಲ್ಲಿ ಮೂರ್ಛೆ ಹೋಗಿದ್ದು. ಆತ ಪರೀಕ್ಷೆಯ ಭಯದಿಂದ ಮೂರ್ಛೆ ಹೋಗಿದ್ದಾನೆ ಎಂದುಕೊಂಡಿದ್ದರು, ಆದರೆ ಆತ 500 ಹುಡುಗಿಯರ ಮಧ್ಯೆ ನಾನು ಒಬ್ಬನೇ ಎಂದು ಪ್ರಜ್ಞೆ ತಪ್ಪಿದ್ದಾನೆ. ಶಂಕರ್ ಪ್ರಜ್ಞೆ ತಪ್ಪಿದ ನಂತರ, ನಲಂದಾದ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ನನ್ನ ದೇಹದಲ್ಲಿ, ತಲೆಯಲ್ಲಿ ಮತ್ತು ಕಣ್ಣುಗಳಲ್ಲಿ ನೋವಾಗುತ್ತಿತ್ತು ಎಂದು ಹೇಳಿದ್ದಾನೆ. ಶಂಕರ್ ಆಸ್ಪತ್ರೆಯಲ್ಲಿ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral News: ವಿದೇಶದಲ್ಲಿ ಮದುವೆಯಾಗಿ ಮಗು ಪಡೆದ ಭಾರತೀಯ ವ್ಯಕ್ತಿಗೆ 1 ಲಕ್ಷ 28 ಸಾವಿರ ರೂ. ನೀಡಿದ ಬೆಲಾರಸ್ ಸರ್ಕಾರ

ನಂತರ ಶಂಕರ್​ಗೆ ನೀಡಿದ್ದ ಪ್ರವೇಶ ಪತ್ರದಲ್ಲಿ ಸಣ್ಣ ದೋಷವಿರುವುದು ಪತ್ತೆಯಾಗಿದೆ. ವರದಿಯ ಪ್ರಕಾರ, ಪ್ರವೇಶ ಕಾರ್ಡ್‌ನಲ್ಲಿ ಅವರನ್ನು ‘ಹುಡುಗಿ’ ಎಂದು ಕರೆಯಲಾಗಿದೆ, ಆ ಕಾರಣದಿಂದ ಆತ ಈ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದಾನೆ. ವಿದ್ಯಾರ್ಥಿನಿಯರ ಮಧ್ಯೆ ಏಕಾಂಗಿಯಾಗಿದ್ದ ಶಂಕರ್ ಆತಂಕಗೊಂಡಿದ್ದಾನೆ. ಒಟ್ಟು 13, 18, 227 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದು ಬಿಹಾರದ CBSE 12 ನೇ ಬೋರ್ಡ್ ಪರೀಕ್ಷೆಗಳಿಗೆ ಸಮಾನವಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ 6,36, 432 ಬಾಲಕಿಯರು ಮತ್ತು 6, 81, 795 ಬಾಲಕರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:18 pm, Thu, 2 February 23

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ