Viral News: ಕವಣೆ ಸಹಾಯದಿಂದ ತಂಗಿಯನ್ನು ಕಿಡ್ನಾಪರ್​​ನಿಂದ ಕಾಪಾಡಿದ ಅಣ್ಣ

ಓವನ್ ಬರ್ನ್ಸ್ ಎಂಬ ಹುಡುಗ ತನ್ನ ಎಂಟು ವರ್ಷದ ಸಹೋದರಿಯನ್ನು ಕಿಡ್ನಾಪ್​​ ಮಾಡಿದ ವ್ಯಕ್ತಿಗೆ  ಕಿಟಕಿಯಿಂದ ಕವಣೆಗೆ (ಚಾಟಿ ಬಿಲ್ಲು) ಜಲ್ಲಿಕಲ್ಲುನಿಂದ ಗುರಿಯಿಟ್ಟು ಹೊಡೆದಿದ್ದಾನೆ.

Viral News: ಕವಣೆ ಸಹಾಯದಿಂದ ತಂಗಿಯನ್ನು ಕಿಡ್ನಾಪರ್​​ನಿಂದ ಕಾಪಾಡಿದ ಅಣ್ಣ
ಸಾಂದರ್ಭಿಕ ಚಿತ್ರ

Updated on: May 19, 2023 | 3:09 PM

ಅಣ್ಣ ಎಂಬ ಶಕ್ತಿ ನಮ್ಮ ಜತೆಗೆ ಇದ್ದಾಗ ಯಾವುದೇ ಸಮಸ್ಯೆ ಬಂದರು ಅದನ್ನು ತಡೆಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ, ಹೌದು ಅಮೆರಿಕದ ಮಿಚಿಗನ್​​ನಲ್ಲಿ ಹದಿಹರೆಯದ ಹುಡುಗನೊಬ್ಬ, ತನ್ನ ಪುಟ್ಟ ತಂಗಿಯನ್ನು ಕಿಡ್ನಾಪರ್​​ನಿಂದ ತುಂಬಾ ಚುರುಕುತನದಿಂದ ಕಾಪಾಡಿದ್ದಾನೆ. ಸ್ಕೈ ನ್ಯೂಸ್ ಪ್ರಕಾರ , ಆಲ್ಪೆನಾ ಟೌನ್‌ಶಿಪ್‌ನಲ್ಲಿ ಮೇ 10ರಂದು ಈ ಘಟನೆ ನಡೆದಿದೆ. ಓವನ್ ಬರ್ನ್ಸ್ ಎಂಬ ಹುಡುಗ ತನ್ನ ಎಂಟು ವರ್ಷದ ಸಹೋದರಿಯನ್ನು ಕಿಡ್ನಾಪ್​​ ಮಾಡಿದ ವ್ಯಕ್ತಿಗೆ  ಕಿಟಕಿಯಿಂದ ಕವಣೆಗೆ (ಚಾಟಿ ಬಿಲ್ಲು) ಜಲ್ಲಿಕಲ್ಲುನಿಂದ ಗುರಿಯಿಟ್ಟು ಹೊಡೆದಿದ್ದಾನೆ. ಆತನ 13 ವರ್ಷ ವಯಸ್ಸಿನ ತಂಗಿ ಸ್ನೇಹಿತರೊಂದಿಗೆ ಆಟವಾಡುತ್ತಿರುವಾಗ ಕಿರುಚಾಟ ಕೇಳುತ್ತದೆ, ಏನೋ ಅವರೇ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದುಕೊಂಡ ಅಣ್ಣ, ನಂತರ ಮತ್ತೆ ಜೋರಾಗಿ ಕಿರುಚಾಟ ಕೇಳಿದೆ, ತಕ್ಷಣ ಅಣ್ಣ ಅವಳ ಸಹಾಯಕ್ಕೆ ಧಾವಿಸಿದ್ದಾನೆ.

ಅಣ್ಣ ಓವನ್ ತಿಳಿಸಿರುವಂತೆ ನಾನು ಕಿಟಕಿಯಿಂದ ಹೊರಗೆ ನೋಡಿದಾಗ ಆಕೆಯನ್ನು ಒಬ್ಬ ವ್ಯಕ್ತಿ ಅಪಹರಿಸಿರುವುದನ್ನು ನೋಡಿದೆ, ಇದರಿಂದ ನಾನು ತುಂಬಾ ಭಯಭೀತನಾಗಿ ಏನು ಮಾಡಬೇಕು ಎಂದು ತಿಳಿಯದೆ ಕವಣೆಯಿಂದ ಹೊಡೆದಿದ್ದಾನೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ:Viral Video: ಡೇರ್​ಡೆವಿಲ್​ ಮುಸ್ತಾಫಾ; ಆಗೋದಿದೆ ಆರಂಭವು ಆಲಿಂಗನದಲ್ಲಿ, ಒಟ್ನಲ್ಲಿ ಕ್ರಾಂತಿ ಆಗಲಿ!

ನಾನು ಕವಣೆ (ಚಾಟಿ ಬಿಲ್ಲು) ಹಿಡಿದು ಅದಕ್ಕೆ ಜಲ್ಲಿಕಲ್ಲು ಸೇರಿಸಿ ಕಿಟಕಿಯಲ್ಲಿ ಗುರಿಯಿಟ್ಟು ಅವನಿಗೆ ಹೊಡೆದೆ. ಅಣ್ಣ ಓವನ್ ಈ ಕೆಲಸದಿಂದ ಕಿಡ್ನಾಪರ್​​ ಆತ ತಂಗಿಯನ್ನು ಬಿಟ್ಟು ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಿಡ್ನಾಪರ್​​ 17 ವರ್ಷದ ಯುವಕನಾಗಿದ್ದು, ಆತನ ವಿರುದ್ಧ ದೂರ ದಾಖಲಿಸಲಾಗಿದ್ದು, ಓವನ್ ಕವಣೆ (ಚಾಟಿ ಬಿಲ್ಲು) ಯಿಂದ ಹೊಡೆದ ಪರಿಣಾಮ ಆತನ ತಲೆ ಮತ್ತು ಎದೆಗೆ ಪೆಟ್ಟು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಆ ಕಿಡ್ನಾಪರ್​​ನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us