Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳ ಆರೈಕೆಗಾಗಿ ರಜೆ ತೆಗೆದುಕೊಂಡಿದ್ದಕ್ಕೆ ಕೆಲಸದಿಂದ ಮಹಿಳೆ ವಜಾ

ಯಾರು ಎಷ್ಟೇ ಸಂಪಾದನೆ ಮಾಡಿದರೂ ಅದು ಕುಟುಂಬವನ್ನು ಸಲಹುವ ಸಲುವಾಗಿಯೇ, ಹಾಗಾಗಿ ಕೆಲಸ ಕುಟುಂಬ ಎಂದು ಬಂದಾಗ ಎಲ್ಲರೂ ಕುಟುಂಬವನ್ನೇ ಆರಿಸಿಕೊಳ್ಳುತ್ತಾರೆ. ಹಾಗೆಯೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳ ಆರೈಕೆಗಾಗಿ ಮಹಿಳೆ ರಜೆ ತೆಗೆದುಕೊಂಡಿದ್ದರೆ, ಕಂಪನಿಯು ಮಹಿಳೆಯನ್ನು ಕೆಲಸದಿಂದ ವಜಾ ಮಾಡಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದೆ.

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳ ಆರೈಕೆಗಾಗಿ ರಜೆ ತೆಗೆದುಕೊಂಡಿದ್ದಕ್ಕೆ ಕೆಲಸದಿಂದ ಮಹಿಳೆ ವಜಾ
ವೈರಲ್ ಸುದ್ದಿ Image Credit source: X-ElseEye
Follow us
ನಯನಾ ರಾಜೀವ್
|

Updated on: Feb 09, 2025 | 2:00 PM

ಯಾರು ಎಷ್ಟೇ ಸಂಪಾದನೆ ಮಾಡಿದರೂ ಅದು ಕುಟುಂಬವನ್ನು ಸಲಹುವ ಸಲುವಾಗಿಯೇ, ಹಾಗಾಗಿ ಕೆಲಸ ಕುಟುಂಬ ಎಂದು ಬಂದಾಗ ಎಲ್ಲರೂ ಕುಟುಂಬವನ್ನೇ ಆರಿಸಿಕೊಳ್ಳುತ್ತಾರೆ. ಹಾಗೆಯೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗಳ ಆರೈಕೆಗಾಗಿ ಮಹಿಳೆ ರಜೆ ತೆಗೆದುಕೊಂಡಿದ್ದರೆ, ಕಂಪನಿಯು ಮಹಿಳೆಯನ್ನು ಕೆಲಸದಿಂದ ವಜಾ ಮಾಡಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದೆ.

ಈ ಘಟನೆ ನಡೆದಿದೆ, ಮಹಿಳೆ ಕಳೆದ 30 ವರ್ಷಗಳಿಂದ ಮಿಚಿಗನ್​ನಲ್ಲಿ ಹಂಟಿಂಗ್ಟನ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಳು, ಮಗಳಿಗೆ ಸ್ತನ ಕ್ಯಾನ್ಸರ್​ ಇರುವುದು ಪತ್ತೆಯಾಗಿತ್ತು. ಹಾಗಾಗಿ ಆಕೆ ರಜೆ ತೆಗೆದುಕೊಂಡಿದ್ದರು. ತನ್ನಾ ಎಲ್ಲಾ ರಜೆಗಳನ್ನು ಪೂರೈಸಿ, ಬಳಿಕ 12 ವಾರಗಳ ಎಫ್​ಎಂಎಲ್​ಎ ರಜೆಯಲ್ಲಿ ನಾಲ್ಕು ವಾರಗಳನ್ನು ಬಳಸಿದ್ದಾರೆ ಎಂದು ಸಿಬಿಎಸ್ ನ್ಯೂಸದ ವರದಿ ಮಾಡಿದೆ.

ಈ ಸುದ್ದಿ ಕೇಳಿ ಮಗಳು ಈ ಘಟನೆ ನನ್ನಿಂದಲೇ ನಡೆದಿದೆ, ನನಗೋಸ್ಕರ ಅಮ್ಮ ರಜೆ ತೆಗೆದುಕೊಳ್ಳದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಫೋನ್​ನಲ್ಲಿ ಹೇಳಿಕೊಂಡು ಅತ್ತಿದ್ದಾಳೆ, ನನ್ನಿಂದಾಗಿ ನಿನ್ನ ಕೆಲಸ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾಳೆ ಎಂದು ಹೇಳಿದ್ದಾರೆ.

31 ವರ್ಷ ಯುವತಿ ತನ್ನ ತಾಯಿ ಕೆಲಸ ಕಳೆದುಕೊಂಡ 10 ದಿನಗಳ ಬಳಿಕ ನಿಧನರಾದರು, ಇದು ನಂಬಲಾಗದ ಆಘಾತವಾಗಿತ್ತು, ಕೆಲಸದಿಂದ ತೆಗೆದು ಹಾಕಿದ್ದಕ್ಕಾಗಿ ಬ್ಯಾಂಕಿನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಮಂತಾ ಅವರಿಗೆ ಏಪ್ರಿಲ್ 2023 ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ಕಾಲಾನಂತರದಲ್ಲಿ ಅವರ ಸ್ಥಿತಿ ಹದಗೆಟ್ಟಿತು.ಎಸ್ಟೆಪ್ ಅವರು ತಮ್ಮ ಆರೈಕೆಗಾಗಿ ಲಭ್ಯವಿರುವ ಎಲ್ಲಾ ರಜೆಗಳನ್ನು ಬಳಸಬೇಕಾಯಿತು.

ಅವರು ಚಿಕಿತ್ಸೆ ಪಡೆಯುತ್ತಿರುವಾಗ ತಮ್ಮ ಮಗಳ ಜೊತೆ ಇರಲು ಬಯಸಿದ್ದರು ಮತ್ತು ವೈದ್ಯಕೀಯ ಮತ್ತು ಕೌಟುಂಬಿಕ ಕಾರಣಗಳಿಗಾಗಿ ಉದ್ಯೋಗಿಗಳಿಗೆ ಉದ್ಯೋಗ-ರಕ್ಷಿತ, ವೇತನವಿಲ್ಲದ ರಜೆ ತೆಗೆದುಕೊಳ್ಳಲು ಅನುಮತಿಸುವ ಫೆಡರಲ್ ಕಾನೂನನ್ನು ಬಳಸಿದರು.

ಮತ್ತಷ್ಟು ಓದಿ: ಕುಡಿದ ಅಮಲಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ರಷ್ಯನ್ ಯುವತಿ, ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಢಿಕ್ಕಿ

ಎಸ್ಟೆಪ್ ಹೆಚ್ಚಿನ ರಜೆಯನ್ನು ಕೋರಿದರು ಆದರೆ ಕಂಪನಿಯಲ್ಲಿ ಅವರ ದೀರ್ಘಾವಧಿಯ ಸೇವಾವಧಿಯ ಹೊರತಾಗಿಯೂ ಅದೇ ದಿನ ಅವರನ್ನು ವಜಾಗೊಳಿಸಲಾಯಿತು.

ಕುಟುಂಬ ಮತ್ತು ವೈದ್ಯಕೀಯ ರಜೆ ಕಾಯ್ದೆ ಸೇರಿದಂತೆ ಎಲ್ಲಾ ಉದ್ಯೋಗ ಕಾನೂನುಗಳನ್ನು ಅನುಸರಿಸಲು ಬದ್ಧವಾಗಿದೆ ಮತ್ತು ನಾವು ಈ ವಿಷಯದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಬ್ಯಾಂಕ್ ಹೇಳಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು