Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishi Sunak: ‘ಅಭಿಯಾನ’ ಪದದಲ್ಲಿನ ತಪ್ಪಾದ ಕಾಗುಣಿತದಿಂದಾಗಿ ವೈರಲ್ ಆದ ರಿಷಿ ಸುನಕ್

ರಿಷಿ ಸುನಕ್ ಅವರ ಅಭಿಯಾನದ ಬ್ಯಾನರ್​ನಲ್ಲಿ Campaign ಎಂದು ಬರೆಯುವ ಬದಲು Campiaign ಎಂದು ಬರೆಯಲಾಗಿದೆ. ಕಾಗುಣಿತ ತಪ್ಪಾಗಿರುವುದನ್ನು ಗಮನಿಸಿದ ನೆಟ್ಟಿಗರು, ವಿವಿಧ ರೀತಿಯಲ್ಲಿ ಕಾಂಮೆಂಟ್​ಗಳನ್ನು ಮಾಡಿ ಜರಿಯುತ್ತಿದ್ದಾರೆ.

Rishi Sunak: 'ಅಭಿಯಾನ' ಪದದಲ್ಲಿನ ತಪ್ಪಾದ ಕಾಗುಣಿತದಿಂದಾಗಿ ವೈರಲ್ ಆದ ರಿಷಿ ಸುನಕ್
ರಿಷಿ ಸುನಕ್
Follow us
TV9 Web
| Updated By: Digi Tech Desk

Updated on:Jul 16, 2022 | 12:42 PM

ಮಾನವರಾದ ನಾವು ತಪ್ಪು ಮಾಡುವುದು ಸಹಜ, ಅದರಲ್ಲೂ ಕಾಗುಣಿತದಲ್ಲಿನ ತಪ್ಪುಗಳು. ಜನಸಾಮಾನ್ಯರಾದರೆ ಅಷ್ಟೊಂದು ಗಂಭೀರವಾಗುವುದಿಲ್ಲ ಆದರೆ ದೊಡ್ಡ ವ್ಯಕ್ತಿಗಳು ತಪ್ಪು ಮಾಡಿದರೆ ಅದು ಹೆಚ್ಚು ಗಮನಸೆಳೆಯುತ್ತದೆ. ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಆಂಗ್ಲ ಭಾಷೆಯಲ್ಲಿನ ಅಭಿಯಾನ ಪದದಲ್ಲಿ ಬರೆಯಲಾದ ತಪ್ಪಾದ ಕಾಗುಣಿತದಿಂದಾಗಿ ಹೆಚ್ಚು ವೈರಲ್ ಆಗುತ್ತಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ಪಿಚ್ ಮಾಡುವ ಮೊದಲ ದೂರದರ್ಶನ ಚರ್ಚೆಯಲ್ಲಿ ರಿಷಿ ಸುನಕ್ ಅವರು ಭಾಗವಹಿಸಿದ್ದಾರೆ. ಸಂದರ್ಶಕರ ಮುಂದೆ ಕುಳಿತಿದ್ದ ರಿಷಿ ಅವರ ಹಿಂಬದಿಯಲ್ಲಿ ಅಭಿಯಾನದ ಬ್ಯಾನರ್ ಅನ್ನು ಹಾಕಲಾಗಿತ್ತು. ಈ ಅಭಿಯಾನದ ಬ್ಯಾನರ್​ನಲ್ಲಿ ಅಭಿಯಾನ ಎಂಬ ಆಂಗ್ಲ ಪದವೇ ತಪ್ಪಾಗಿ ಬರೆದಿರುವುದು ಕೆಲವು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ರಿಷಿ ಸುನಕ್ ಅವರನ್ನು ಪ್ರಚಾರದ ಬ್ಯಾನರ್‌ನಲ್ಲಿ ಕಾಗುಣಿತ ದೋಷವಿದೆ ಎಂದು ವೀಕ್ಷಕರು ಇಂಟರ್ನೆಟ್​ನಲ್ಲಿ ಜರಿಯಲು ಪ್ರಾರಂಭಿಸಿದ್ದಾರೆ.

ಅಷ್ಟಕ್ಕೂ ರಿಷಿ ಸುನಕ್ ಅವರ ಅಭಿಯಾನದ ಬ್ಯಾನರ್​ನಲ್ಲಿ Campaign ಎಂದು ಬರೆಯುವ ಬದಲು Campiaign ಎಂದು ಬರೆಯಲಾಗಿದೆ. ಕಾಗುಣಿತ ತಪ್ಪಾಗಿರುವುದನ್ನು ಮುಂದಿಟ್ಟುಕೊಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಂಮೆಂಟ್​ಗಳನ್ನು ಮಾಡಲು ಮುಂದಾಗಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, ”ರಿಷಿ ಸುನಕ್ ಅವರು ತಪ್ಪಾಗಿ ಬರೆದ ‘ಅಭಿಯಾನ’ ಪದದ ಮುಂದೆ ಕುಳಿತುಕೊಳ್ಳದಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, “ರಿಷಿ ಸುನಕ್ ಕೋಟ್ಯಾಧಿಪತಿಯಾಗಿರಬಹುದು, ಆದರೆ ಅವರು ಅಭಿಯಾನವನ್ನು ಉಚ್ಚರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು  ಬ್ರಿಟನ್ ಪ್ರಧಾನಿ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗುರುವಾರ ನಡೆದ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಒಬ್ಬ ಅಭ್ಯರ್ಥಿ ಚುನಾವಣಾ ಸುತ್ತಿನಿಂದ ಹೊರ ಬಿದ್ದಿದ್ದಾರೆ. ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೂನಿಯರ್ ಟ್ರೇಡ್ ಮಿನಿಸ್ಟರ್ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದಿದ್ದಾರೆ. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಸುತ್ತಿನಿಂದ ಹೊರನಡೆದಿದ್ದಾರೆ. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದಿದ್ದಾರೆ.

Published On - 11:13 am, Sat, 16 July 22

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್