Viral Video: 41 ವರ್ಷಗಳ ನಂತರ ರಾಜಕುಮಾರ ಹಾಡು ವೈರಲ್; ಮೂಲಹಾಡಿಗಿಂತಲೂ ಮಧುರ ಎಂದ ನೆಟ್ಟಿಗರು

Kannada Film Song: ಎಸ್​ ಜಾನಕಿ ಮತ್ತು ರಾಜಕುಮಾರ ಅವರು 41 ವರ್ಷಗಳ ಹಿಂದೆ ಹಾಡಿದ ಈ ಹಾಡು ಇದೀಗ ವೈರಲ್ ಆಗಿದೆ. ದಿ ಸ್ಟೆಕ್ಯಾಟೋ ಕೆಫೆಯ ಕಲಾವಿದರಾದ ಸುನಿಧಿ ಗಣೇಶ, ಸುಪ್ರಭಾ ಬಿ ಆರ್, ಜೈಜೀವನ್​ ಈ ಹಾಡಿಗೆ ಜೀವತುಂಬಿರುವ ರೀತಿಗೆ ನೆಟ್ಟಿಗರು ಮನಸೋತಿದ್ದಾರೆ. ಮಿಲಿಯನ್​ಗಟ್ಟಲೆ ಜನರ ಮನಸ್ಸನ್ನು ಸೂರೆಗೊಂಡ ಈ ಹಾಡನ್ನು ನೀವೂ ಕೇಳಬೇಕೆ?

Viral Video: 41 ವರ್ಷಗಳ ನಂತರ ರಾಜಕುಮಾರ ಹಾಡು ವೈರಲ್; ಮೂಲಹಾಡಿಗಿಂತಲೂ ಮಧುರ ಎಂದ ನೆಟ್ಟಿಗರು
ಕಲಾವಿದರಾದ ಸುನಿಧಿ ಗಣೇಶ, ಸುಪ್ರಭಾ ಬಿಆರ್ ಮತ್ತು ಜೈಜೀವನ್
Follow us
|

Updated on:Sep 09, 2023 | 4:19 PM

Kannada Cinema: ರಾಜಕುಮಾರ ಮಂಜುಳಾ ಅಭಿನಯದ ‘ನೀ ನನ್ನ ಗೆಲ್ಲಲಾರೆ’ 1981ರಲ್ಲಿ ಬಿಡುಗಡೆಯಾಯಿತು. ಈ ಸಿನೆಮಾದ ಪ್ರಸಿದ್ಧ ಗೀತೆಯನ್ನು ರಾಜಕುಮಾರ ಮತ್ತು ಎಸ್​ ಜಾನಕಿ ಇಳಯರಾಜಾ (Ilaiyaraaja) ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದರು. ಅಂದರೆ ಸುಮಾರು 41 ವರ್ಷಗಳ ಹಿಂದೆ ಹಾಡಿದ ಈ ಹಾಡನ್ನು ಇದೀಗ ಗಾಯಕಿ ಸುನಿಧಿ ಗಣೇಶ ಮತ್ತು  ಸುಪ್ರಭಾ ಬಿ ಆರ್ ಹಾಡಿದ್ದಾರೆ. ಇವರು ಹಾಡಿರುವ ರೀತಿಗೆ ನೆಟ್ಟಿಗರು, ಇದು ಮೂಲಹಾಡಿಗಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂದು  ಪುಳಕಿತಗೊಂಡಿದ್ದಾರೆ. ದಿ ಸ್ಟೆಕ್ಯಾಟೋ ಕೆಫೆ (The Staccato Cafe) ಎಂಬ ಬ್ಯಾಂಡ್​ನ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಇದನ್ನೂ ಓದಿ : Viral Video: ದೈತ್ಯಹುಲಿಗೆ ಚುಂಬಿಸುತ್ತಿರುವ ವ್ಯಕ್ತಿ; ಈತ ಅದೃಷ್ಟವಂತ ಎನ್ನುತ್ತಿರುವ ಕೆಲಮಂದಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜುಲೈ 18ಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 2.9 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ ಸಾವಿರಾರು ಜನರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ನಿಮ್ಮಿಬ್ಬರ ಧ್ವನಿ ಅತ್ಯದ್ಭುತವಾಗಿದೆ, ಈ ಮೂಲಕ ಈ ಹಾಡಿಗೆ ಮತ್ತಷ್ಟು ಹೊಳಪನ್ನು ತಂದಿದ್ದೀರಿ ಎಂದಿದ್ದಾರೆ ಅನೇಕರು. ಹಾಗಿದ್ದರೆ ಆ ಹಾಡು ಯಾವುದು? ಎಷ್ಟು ಬೇಕಾದಷ್ಟು ಸಲವಾದರೂ ಕೇಳಬಹುದು ಸುನಿಧಿ ಮತ್ತು ಸುಪ್ರಭಾ ಕಂಠದಲ್ಲಿ.

ಜೀವ ಹೂವಾಗಿದೆ ಭಾವ ಜೇನಾಗಿದೆ

ಸಂಜೆ ತಂಗಾಳಿ, ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ/ತಂದಿದೆ ಹಿತವ ನಮಗಾಗಿ/ತಂದಿದೆ ಹಿತವ ನಮಗಾಗಿ/ಜೋಡಿ ಬಾನಾಡಿ, ಮೇಲೆ ಹಾರಾಡಿ ತೇಲಾಡಿ, ಹೋಲಾಡಿ ನಲಿವಂತೆ/ನಾವು ಆಡೋಣ ಇನ್ನೇಕೆ ಬಾ ಚಿಂತೆ/ಜೀವ ಹೂವಾಗಿದೇ… ಮತ್ತೆ ಮತ್ತೆ ಕೇಳುವಂತಿದೆಯಲ್ಲವೆ? ಈ ಹಾಡು ಶುರುವಾಗುತ್ತಿದ್ದಂತೆ ನನ್ನ ಮೈ ನವಿರೆದ್ದಿತು, ನಿಜಕ್ಕೂ ನಿಮ್ಮ ಟೀಮ್​ ತುಂಬಾ ಚೆನ್ನಾಗಿದೆ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ‘ಹುಟ್ಟಿದ್ದು ಒಂಟಿಗಾಲಲ್ಲಿ ಆದರೆ ಬದುಕಿನುದ್ದಕ್ಕೂ ನರ್ತಿಸುತ್ತೇನೆ’; ಫಾತೀಮಾ

ಇದು ನನ್ನ ಅಪ್ಪನ ಅಚ್ಚುಮೆಚ್ಚಿನ ಹಾಡು. ನಾನು ಚಿಕ್ಕವನಿದ್ದಾಗ ಅವರು ಗುನುಗುತ್ತಿದ್ದರು. ಆರು ವರ್ಷದ ಹಿಂದೆ ಅವರು ತೀರಿದರು. ಈ ಹಾಡು ಕೇಳಿ ಅನೇಕ ನೆನಪುಗಳು ಉಕ್ಕಿದವು ಜೊತೆಗೆ ಕಣ್ಣೀರು, ಧನ್ಯವಾದ ನಿಮಗೆ ಎಂದಿದ್ದಾರೆ ಒಬ್ಬರು. ಮತ್ತಷ್ಟು ಹಳೆಯ ಹಾಡುಗಳನ್ನು ನೀವು ಹಾಡುತ್ತಲೇ ಇರಬೇಕು ನಾವು ಕೇಳುತ್ತಲೇ ಇರಬೇಕು ಎಂದು ಅನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ಧಾರೆ.

ಹಾಗೆಯೇ ವೈರಲ್ ಆಗಿರುವ ಇನ್ನೊಂದು ರೀಲ್​ನಲ್ಲಿ ಜಸ್ಟ್​ ಮಾತ್ ಮಾತಲ್ಲಿ ಸಿನೆಮಾದ ಗೀತೆಯನ್ನು ನಯನಾ ನಾಗರಾಜ್​ ಹಾಡಿದ್ದಾರೆ. ಈ ಹಾಡನ್ನು ಈತನಕ 1.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ನೀವೂ ಈ ಹಾಡನ್ನು ಕೇಳಬೇಕೆ?

ಶ್ರೇಯಾ ಘೋಷಾಲ್ ಹಾಡಿದ ಎಲ್ಲೋ ಜಿನುಗಿರುವ ಹಾಡು ನಯನಾ ಕಂಠದಲ್ಲಿ

ಈ ಇಡೀ ತಂಡಕ್ಕೆ ಉಜ್ವಲ ಭವಿಷ್ಯ ಕಾದಿದೆ ಎಂದು ಹಾರೈಸಿದ್ದಾರೆ ಸಾಕಷ್ಟು ಜನರು. ಎಂಥ ಅರ್ಥಪೂರ್ಣ ಮತ್ತು ಮಧುರವಾದ ಸಂಗೀತ ಸಾಹಿತ್ಯ ಅಲ್ಲವೆ? ಕಲೆ ಎಂದಿಗೂ ಶಾಶ್ವತ, ಈ ಮೂಲಕ ಕಲಾವಿದರೂ.

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 4:13 pm, Sat, 9 September 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್