Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್​ ವೈರಲ್

Kannada Cinema: ಸಪ್ತಸಾಗರದಾಚೆ ಎಲ್ಲೋ ಟೈಟಲ್​ ಟ್ರ್ಯಾಕ್​ನ ಹಾಡನ್ನು ಧನಂಜಯ್​ ರಂಜನ್​ ಬರೆದಿದ್ದಾರೆ. ಚರಣ್​ ರಾಜ್​ ಸಂಗೀತ ಸಂಯೋಜಿಸಿದ್ದು, ಕಪಿಲ್​ ಕಪಿಲನ್​ ಹಾಡಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಸುನಿಧಿ ಗಣೇಶ ಈ ಹಾಡನ್ನು ಹಾಡಿದ್ದು ಅದೀಗ ವೈರಲ್ ಆಗುತ್ತಿದೆ. ಈತನಕ ಈ ಗಾಯಕಿ ಎಲ್ಲಿ ಅವಿತಿದ್ದರು? ಎಂದು ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್​ ವೈರಲ್
1. ಗಾಯಕಿ ಸುನಿಧಿ ಗಣೇಶ. 2. ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ನಾಯಕ ರಕ್ಷಿತ ಶೆಟ್ಟಿ ಮತ್ತು ರುಕ್ಮಿಣಿ ವಸಂತ
Follow us
ಶ್ರೀದೇವಿ ಕಳಸದ
|

Updated on:Sep 05, 2023 | 4:33 PM

Kannada Cinema: ಬೆಂಗಳೂರಿನಲ್ಲಿದ್ದರೂ ಕರಾವಳಿಯ ನೀಲಸಮುದ್ರವನ್ನೇ ಧ್ಯಾನಿಸುವ ಕನಸುಕಂಗಳ ಹುಡುಗಿ ಪ್ರಿಯಾ (Rukmini Vasanth) ಮತ್ತು ಅವಳ ಕನಸುಗಳನ್ನು ನನಸು ಮಾಡಲೆಂದೇ ಬದುಕುತ್ತಿರುವ ಮನು (Rakshit Shetty). ಇವರಿಬ್ಬರ ಪ್ರೇಮಕಥೆಯೇ ‘ಸಪ್ತಸಾಗರದಾಚೆ ಎಲ್ಲೋ’. ಈ ಸಿನೆಮಾದ ಟೈಟಲ್ ಟ್ರ್ಯಾಕ್​ ಕೇಳಿದ ಯಾರೂ ಗುನುಗದೇ ಇರಲಾರರು, ಅಂಥ ನವಿರಾದ ಆಕರ್ಷಣೆ ಇದಕ್ಕಿದೆ. ಚರಣ್​ರಾಜ್ ಸಂಗೀತ ನಿರ್ದೇಶನ ಮತ್ತು ಕಪಿಲ್​ ಕಪಿಲನ್ ಅವರ ಕಂಠ ಈ ಹಾಡಿಗಿದೆ. ಸೆ. 15ರಂದು ಬಿಡುಗಡೆಯಾಗಲಿರುವ ಮೇಘನಾ ರಾಜ್​ ಅಭಿನಯದ ‘ತತ್ಸಮ ತದ್ಭವ’ ಸಿನೆಮಾದಲ್ಲಿ ‘ದೂರಿ ಲಾಲಿ’ ಹಾಡಿರುವ ಸುನಿಧಿ ಗಣೇಶ್​ ಇದೀಗ ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ಟ್ರ್ಯಾಕ್​ ಹಾಡಿ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಇವರ ಸುಮಧುರವಾದ ಧ್ವನಿ ನೆಟ್ಟಿಗರನ್ನು ಬಹುವಾಗಿ ಸೆಳೆಯುತ್ತಿದೆ.

ಇದನ್ನೂ ಓದಿ : Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸುನಿಧಿ ಗಣೇಶ ಹಿಂದೂಸ್ತಾನಿ ಶಾಸ್ತ್ರೀಯ ಕಲಾವಿದೆ. ಪಂ. ಪರಮೇಶ್ವರ ಹೆಗಡೆ ಅವರ ಶಿಷ್ಯೆ. ಶಾಸ್ತ್ರೀಯ, ಲಘು ಶಾಸ್ತ್ರೀಯ, ಸುಗಮ ಮತ್ತು ಸಿನೆಮಾ ಸಂಗೀತಕ್ಕೂ ಒಗ್ಗುವಂಥ ದನಿಬಾನಿ ಇವರದಾಗಿದೆ. ‘ನೀನಿಲ್ಲದೇ’ ಎನ್ನುವ ಆಲ್ಬಂನಲ್ಲಿ ಇವರ ಭಾವಪೂರ್ಣ ಧ್ವನಿ ಅಡಕವಾಗಿದೆ. ಸಂಗೀತಕ್ಕೆ ಸಂಬಂಧಿಸಿದ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ ಅನುಭವ ಇವರಿಗಿದೆ.  ಆಗಾಗ ಇನ್​ಸ್ಟಾಗ್ರಾಂನಲ್ಲಿ ಕನ್ನಡ, ಹಿಂದೀ ಸಿನೆಮಾ ಗೀತೆಗಳ ವಿಡಿಯೋ ಅಪ್​ಲೋಡ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿರುತ್ತಾರೆ.

ಸುನಿಧಿ ಗಣೇಶ ಹಾಡಿರುವ ಸಪ್ತಸಾಗರದಾಚೆ ಎಲ್ಲೋ

ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ನಾಯಕಿ ರುಕ್ಮಿಣಿ ವಸಂತ್ ಈ ರೀಲ್​ಗೆ ‘ಬ್ಯೂಟಿಫುಲ್​’ ಎಂದು ಪ್ರತಿಕ್ರಿಯಿಸಿದ್ದು, ರುಕ್ಮಿಣಿ ಅವರ ಅಭಿಮಾನಿಗಳ ದಂಡು ಆ ಪ್ರತಿಕ್ರಿಯೆಯ ಕೆಳಗೆ ‘ಐ ಲವ್​ ಯೂ’ ಎಂದು ಪ್ರೀತಿ ಅಭಿಮಾನದ ತೊರೆಯನ್ನೇ ಹರಿಸಿದೆ. ಸುನಿಧಿಯವರ ಮಾಧುರ್ಯಕ್ಕೆ ಮಾರುಹೋದ ಅನೇಕರು, ನಿಮಗೆ ಸಂಗೀತದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹಾರೈಸಿದ್ದಾರೆ.

ಸುನಿಧಿ ಗಣೇಶ ಪ್ರಸ್ತುತ ಪಡಿಸಿದ ‘ಬಾನ ತೊರೆದು ನೀಲಿ’

ಸುನಿಧಿ ಇತ್ತೀಚೆಗೆ ಹಾಡಿರುವ ‘ಬಾನ ತೊರೆದು ನೀಲಿ ಮರೆಯಾಯಿತೇತಕೇ’ ಹಾಡನ್ನು ಸುಮಾರು 1.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ನಿಮ್ಮ ಹಾಡುಗಾರಿಕೆ ಅನುಭವಿಸುವುದೇ ಒಂದು ಆನಂದ ಎಂದು ಪ್ರತಿಕ್ರಿಯಿಸಿದ್ದಾರೆ ಒಬ್ಬರು. ‘ಬಿಸಿಲು ಕುದುರೆಯೊಂದು’ ಹಾಡನ್ನು ಹಾಡಿ ಎಂದು ಹೇಳಿದ್ದಾರೆ ಮತ್ತೊಬ್ಬರು.

ಈ ಹಾಡುಗಳನ್ನು ಕೇಳಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:49 pm, Tue, 5 September 23

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್