AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ

Vasudhaiva Kutumbakam: ಹೀಗೊಂದು ಬಾತುಕೋಳಿ ರೆಕಾರ್ಡಿಂಗ್​ನಲ್ಲಿ ವೃತ್ತಿಪರ ಕಲಾವಿದರಂತೆ ಪಾಲ್ಗೊಂಡಿತ್ತು ಎನ್ನುವುದು ಸಂಗೀತ ಕಲಾವಿದ ಕುಲದೀಪ್ ಎಂ ಪೈ ಅವರಿಗೆ ಎಡಿಟಿಂಗ್​​ನ ವೇಳೆ ತಿಳಿದುಬಂದಿದೆ. ತಾವು ಮಾಡುತ್ತಿದ್ದ ಪ್ರಾಜೆಕ್ಟ್​ನ ಉದ್ದೇಶವು ಬಾತುಕೋಳಿಯ ಆಕಸ್ಮಿಕ ಪ್ರವೇಶ ಮತ್ತದರ ಪ್ರಸ್ತುತಿಯಿಂದ ತನ್ನಿಂತಾನೇ ಈಡೇರಿದೆ ಎಂದು ಅವರು ಸಂತಸ ವ್ಯಕ್ತಪಡಿದ್ದಾರೆ. ನೋಡಿ ವಿಡಿಯೋ.

Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ
ಸಂಗೀತ ಕಲಾವಿದ ಕುಲದೀಪ ಎಂ ಪೈ ತನ್ನ ಶಿಷ್ಯರೊಂದಿಗೆ ವಸುದೈವ ಕುಟುಂಬಕಂ ರೆಕಾರ್ಡಿಂಗ್​ನಲ್ಲಿ
ಶ್ರೀದೇವಿ ಕಳಸದ
|

Updated on:Sep 05, 2023 | 1:37 PM

Share

Music : ಚೆನ್ನೈನಲ್ಲಿ ವಾಸವಾಗಿರುವ ವಿದ್ವಾನ್ ಕುಲದೀಪ ಎಂ. ಪೈ (Kuldeep M Pai) ಅನೇಕ ಪ್ರತಿಭಾವಂತ ಮಕ್ಕಳನ್ನು ಜಗತ್ತಿಗೆ ಪರಿಚಯಿಸಿದ ಸಂಗೀತ ಕಲಾವಿದ. ಸೂರ್ಯಾಗಾಯತ್ರಿ, ರಾಹುಲ್ ವೆಲ್ಲಾಲ್, ಉತ್ತರಾ ಉಣ್ಣಿಕೃಷ್ಣನ್​ ಮುಂತಾದವರು ಸಾಮಾಜಿಕ ಜಾಲತಾಣಗಳಲ್ಲಿ ಹಾಡಿದ ಭಕ್ತಿಗೀತೆಗಳಿಂದಲೇ ಅನೇಕ ಮಕ್ಕಳ ಬೆಳಗಾಗುವುದು. ಆ ಬಾಲಕಲಾವಿದರೆಲ್ಲ ಇಂದು ಹದಿಹರೆಯಕ್ಕೆ ಕಾಲಿಟ್ಟಿದ್ದು ಭಕ್ತಿ ಮತ್ತು ನಾದಮಾಧುರ್ಯವನ್ನು ಅನವರತ ಹರಿಸುತ್ತಲೇ ಇದ್ದಾರೆ. ಕುಲದೀಪ ಇತ್ತೀಚೆಗೆ ರಾಹುಲ್​ ವೆಲ್ಲಾಲ್​ ಮತ್ತು ರಘುವೀರ್ ಮಣಿಕಂಡಮ್​ ಜೊತೆಗೂಡಿ ‘ವಸುದೈವ ಕುಟುಂಬಕಂ’ ಎಂಬ ಪ್ರಾಜೆಕ್ಟ್​ನಲ್ಲಿ ತೊಡಗಿಕೊಂಡಿದ್ದರು. ಇದರ ರೆಕಾರ್ಡಿಂಗ್​ ವೇಳೆ ವಿಶೇಷ ಕಲಾವಿದರೊಬ್ಬರು ಬೀಟ್​ಬಾಕ್ಸ್ (Beatboxing)​ ಪ್ರಸ್ತುಪಡಿಸಿ ಹೋಗಿರುವುದು ಎಡಿಟಿಂಗ್ ವೇಳೆ ಬೆಳಕಿಗೆ ಬಂದಿದೆ!

ಇದನ್ನೂ ಓದಿ : Viral Video: ಶಿವಲಿಂಗದ ಮೇಲೆ ಅರ್ಘ್ಯದಿಂದ ಕೈ ತೊಳೆದುಕೊಂಡ ಉತ್ತರಪ್ರದೇಶದ ಸಚಿವ; ಪ್ರತಿಪಕ್ಷಗಳಿಂದ ಟೀಕೆ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ವಸುದೈವ ಕುಟುಂಬಕಂ’ ಹಾಡಿನ ರೆಕಾರ್ಡಿಂಗ್ ನಡೆಸುತ್ತಿದ್ದೆವು. ಆಗ ನಮ್ಮ ಅನುಮತಿ ಇಲ್ಲದೇ ಒಬ್ಬರು ಆ ಜಾಗವನ್ನು ಪ್ರವೇಶಿಸಿದ್ದರು. ಅಲ್ಲಲ್ಲ, ಅವರ ಜಾಗವನ್ನು ನಾವು ಪ್ರವೇಶಿಸಿದ್ದೆವು ಎನ್ನುವುದೇ ಸರಿ. ನಾವು ಹಾಡುವಾಗ ಅವರು ಕ್ವ್ಯಾಕ್​ ಕ್ವ್ಯಾಕ್​ ಎಂದು ತಾಳಕ್ಕೆ ತಕ್ಕಂತೆ ತಾಳವಾದ್ಯ ಪ್ರಸ್ತುಪಡಿಸಿ ಹೋಗಿದ್ದಾರೆ. ಆದರೆ ಈ ವಿಡಿಯೋ ಅನ್ನು ಎಡಿಟ್ ಮಾಡುವಾಗ ಅವರ ಧ್ವನಿ ಅಡಕವಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಬಾತುಕೋಳಿಯ (Duck) ವಿಡಿಯೋ ನಮಗೆ ಸಿಕ್ಕಿಲ್ಲ. ಈ ಆಕಸ್ಮಿಕ ಕೂಡ ಎಷ್ಟೊಂದು ಅರ್ಥಗರ್ಭಿತವಾಗಿದೆಯಲ್ಲ? ಇಡೀ ಜಗತ್ತೇ ಒಂದು ಕುಟುಂಬ ಎನ್ನಿಸಿಕೊಳ್ಳುವುದು ಹೀಗೇ ಅಲ್ಲವೆ? ‘ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ ಕುಲದೀಪ.

ವಿದ್ವಾನ್​ ಬಾತುಕೋಳಿ ಪ್ರಸಂಗದ ಬಗ್ಗೆ ಕುಲದೀಪ

View this post on Instagram

A post shared by Kuldeep M Pai (@kuldeep.pai)

ರೆಕಾರ್ಡಿಂಗ್​ ವೇಳೆ ಇವರ ಹಾಡನ್ನು ಕೇಳಿಕೊಂಡು ಅಲ್ಲಿಯೇ ಓಡಾಡಿಕೊಂಡಿದ್ದ ವಿದ್ವಾನ್ ಬಾತುಕೋಳಿಯವರು, ‘ಜಗದೇವ ಕುಟುಂಬಕಂ ವಸುದೈವ ಕುಟುಂಬಕಂ’ ಎಂಬ ಪಲ್ಲವಿ ಮುಗಿದು ಚರಣ ಶುರುವಾಗುವ ಹೊತ್ತಿಗೆ ಕ್ವ್ಯಾಕ್​ ಕ್ವ್ಯಾಕ್​ ಎಂದು ಬೀಟ್​ಬಾಕ್ಸ್​ ಸಾಥಿ ಕೊಟ್ಟಿದ್ದಾರೆ. ಆ ಶ್ರುತಿ ಲಯ ಎಷ್ಟು ಪಕ್ಕಾಗಿದೆ ಎಂದರೆ ಅದೊಂದು ಬಾತುಕೋಳಿಯ ಕೂಗು ಎಂದು ಹೇಳದ ಹೊರತು ಯಾರ ಅರಿವಿಗೂ ಬಾರದಷ್ಟು. ಹೆಚ್ಚೂ ಕಡಿಮೆ ಮೋರ್ಚಿಂಗ್​ ವಾದ್ಯದ ಸಾಮ್ಯತೆ ಇದಕ್ಕೆ ಒದಗಿದೆ.

ಬಾತುಕೋಳಿಯ ಬೀಟ್​ಬಾಕ್ಸ್​ನೊಂದಿಗೆ ವಸುದೈವ ಕುಟುಂಬಕಂ ಹಾಡನ್ನು ಕೇಳಿ

View this post on Instagram

A post shared by Kuldeep M Pai (@kuldeep.pai)

ಸಕಲ ಜೀವರಾಶಿಗಳು ಪ್ರಕೃತಿಯ ಮೂಲಕ ಕಲೆಯೊಳಗೆ ಏಕತೆಯನ್ನು ಸಾಧಿಸುವುದೆಂದರೆ ಇದೇ ಏನೋ ಎನ್ನಿಸುತ್ತದೆ. ನೆಟ್ಟಿಗರನೇಕರು ಈ ವಿಡಿಯೋ ನೋಡಿ ವಿಸ್ಮಯಗೊಂಡಿದ್ದಾರೆ. ಪ್ರ್ಯಾಕ್ಟೀಸ್​ ವೇಳೆಯ ವಿಡಿಯೋಗಳನ್ನ ಹೆಚ್ಚೆಚ್ಚು ಅಪ್ಲೋಡ್ ಮಾಡಿ. ಮಕ್ಕಳು ಮತ್ತು ಯುವಪ್ರತಿಭೆಗಳಿಗೆ ಒತ್ತಾಸೆಯಾಗಿ ನಿಂತ ನಿಮಗೆ ಸಾವಿರದ ಶರಣು ನಿಮಗೆ ಒಳ್ಳೆಯದಾಗಲಿ. ನಿಜವಾದ ವಸುದೈವ ಕುಟುಂಬವನ್ನು ಕಟ್ಟುವ ಶಕ್ತಿ ಸಂಗೀತದ ಮೂಲಕ ನಿಮಗೆ ಒದಗಲಿ ಎಂದು ಅವರು ಹಾರೈಸಿದ್ದಾರೆ.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:32 pm, Tue, 5 September 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ