AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನನ್ನ ಕಿಡ್ನಾಪ್ ಮಾಡ್ತಿದ್ದಾರೆ, ಬಚಾವ್-ಬಚಾವ್; ಬಸ್ ನಿಲ್ಲಿಸದ ಚಾಲಕನ ವಿರುದ್ಧ ಪ್ರಯಾಣಿಕನ ಆಕ್ರೋಶ

ಬಸ್ ನಿಲ್ಲಿಸಲು ನಿರಾಕರಿಸಿದ ಚಾಲಕನನ್ನು ಅಪಹರಣಕಾರನನ್ನಾಗಿ ಮಾಡಿದ ಪ್ರಯಾಣಿಕನ ವಿಡಿಯೋ ವೈರಲ್ ಆಗುತ್ತಿದೆ.

Viral Video: ನನ್ನ ಕಿಡ್ನಾಪ್ ಮಾಡ್ತಿದ್ದಾರೆ, ಬಚಾವ್-ಬಚಾವ್; ಬಸ್ ನಿಲ್ಲಿಸದ ಚಾಲಕನ ವಿರುದ್ಧ ಪ್ರಯಾಣಿಕನ ಆಕ್ರೋಶ
ಚಾಲಕ ಬಸ್ ನಿಲ್ಲಿಸದ್ದಕ್ಕೆ ಪ್ರಯಾಣಿಕ ಮಾಡಿದ ಅವಾಂತರ
TV9 Web
| Edited By: Rakesh Nayak Manchi|

Updated on:Oct 16, 2022 | 11:01 AM

Share

ನೀವು ಎಂದಾದರೂ ಬಸ್ಸಿನಲ್ಲಿ ಪ್ರಯಾಣಿಸಿದ್ದರೆ ಈ ಘಟನೆಯನ್ನು ನೀವು ಗಮನಿಸಿರಬಹುದು. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ಸಿನಲ್ಲಿ ಇಳಿಯಲು ಬಯಸುತ್ತಾರೆ. ಇದು ಬಸ್ ನಿಲ್ದಾಣವಾಗಿದೆಯೇ ಅಥವಾ ಇಲ್ಲವೇ ಎಂದು ಪ್ರಯಾಣಿಕರು ಲೆಕ್ಕಿಸುವುದಿಲ್ಲ. ಇದರಿಂದಾಗಿ ಚಾಲಕ ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ನಡೆಯುತ್ತವೆ. ಕೆಲವೊಮ್ಮೆ ತಾರಕಕ್ಕೇರಿ ಹಲ್ಲೆ ನಡೆಸಿದ ಪ್ರಸಂಗವೂ ನಡೆದಿದೆ. ಇಂತಹದ್ದೇ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಬಸ್ ನಿಲ್ಲಿಸಲು ನಿರಾಕರಿಸಿದ್ದಕ್ಕೆ ಪ್ರಯಾಣಿಕನೊಬ್ಬ ಚಾಲಕನನ್ನು ಅಪಹರಣಕಾರನಂತೆ ಜನರು ನೋಡುವಂತೆ ಮಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಅಣ್ಣನ ಆತ್ಮವಿಶ್ವಾಸ ನೋಡಿ ಎಂದು ಹಾಸ್ಯವಾಗಿ ಹೇಳಿದ್ದಾರೆ.

ಈ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. PMPAL (ಪುಣೆ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್ ಲಿಮಿಟೆಡ್)ನ ಬಸ್ ಚಿಂಚವಾಡದಿಂದ ಬಾಳೆವಾಡಿಗೆ ಹೋಗುತ್ತಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಸ್ ನಿಲುಗಡೆಗೆ ಮೊದಲು ಇಳಿಯಬೇಕಾಗಿತ್ತು. ಚಾಲಕನ ಬಳಿ ವಿನಂತಿಸಿಕೊಂಡಾಗ ಚಾಲಕ ನಿರಾಕರಿಸಿದ್ದಾನೆ. ಹೀಗಾಗಿ ಹಠಕ್ಕೆ ಬಿದ್ದ ಆ ವ್ಯಕ್ತಿ ಮರಾಠಿಯಲ್ಲಿ “ನನ್ನನ್ನು ಉಳಿಸಿ, ನನ್ನನ್ನು ಉಳಿಸಿ, ಚಾಲಕ ನನ್ನನ್ನು ಅಪಹರಿಸುತ್ತಿದ್ದಾನೆ, ಅವನು ನನ್ನನ್ನು ಬಸ್ಸಿನಿಂದ ಇಳಿಯಲು ಬಿಡುತ್ತಿಲ್ಲ” ಎಂದು ಕಿರುಚಾಡಲು ಆರಂಭಿಸಿದ್ದಾನೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಚಾಲಕನಿಗೆ ಬಾಗಿಲು ತೆರೆಯಲು ಕೇಳುತ್ತಾನೆ. ಆದರೆ ಚಾಲಕ ಅವನ ಮಾತನ್ನು ಕೇಳುವುದಿಲ್ಲ. ಈ ವೇಳೆ ವ್ಯಕ್ತಿ ಬಲವಂತವಾಗಿ ಬಾಗಿಲು ತೆರೆಯಲು ಗೇಟ್ ಬಟನ್ ಒತ್ತಲು ಮುಂದಾಗುತ್ತಾನೆ. ಇದಕ್ಕೆ ಚಾಲಕ ಪ್ರತಿರೋಧ ಒಡ್ಡುತ್ತಾನೆ. ಇಬ್ಬರ ನಡುವೆ ಚರ್ಚೆ ಶುರುವಾಗುತ್ತದೆ. ತನ್ನ ಮಾತನ್ನ ಕೇಳದ್ದಕ್ಕೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ನನ್ನನ್ನು ಉಳಿಸಿ ಎಂದು ಜೋರಾಗಿ ಕೂಗಲು ಪ್ರಾರಂಭಿಸುತ್ತಾನೆ. ಆ ಮೂಲಕ ಬಸ್ ಚಾಲಕನನ್ನು ಅಪಹರಣಕಾರನನ್ನಾಗಿ ನೋಡುವಂತೆ ಮಾಡುತ್ತಾನೆ. ಪ್ರಯಾಣಿಕನ ಕಿರುಚಾಟ ನೋಡಿದ ಜನರು ಸುತ್ತಮುತ್ತಲೂ ಗುಂಪು ಸೇರುತ್ತಾರೆ.

satyamjoshi99 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಎಲ್ಲಾ ಮೆಮರ್‌ಗಳು ದಯವಿಟ್ಟು ಗಮನಿಸಿ… ಸಹೋದರನ ವಿಶ್ವಾಸವನ್ನು ನೋಡಿ… ಉಳಿಸಿ… ಉಳಿಸಿ..!” ಎಂದು ಶೀರ್ಷಿಕೆ ಬರೆಯಲಾಗಿದೆ. ಅದರಂತೆ ವೈರಲ್ ಆದ ಈ ವಿಡಿಯೋವನ್ನು ನೂರಾರು ವೀಕ್ಷಣೆಗಳನ್ನು ಕಂಡಿದೆ. ಕೆಲವೊಂದು ಕಾಮೆಂಟ್​ಗಳು ಕೂಡ ಬಂದಿವೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Sun, 16 October 22

Follow Us
Web contact
Web contact

TV9 Kannada

Read More
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​