AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಯಿ ಮತ್ತು ಅವನು: ಟೈಟಾನಿಕ್ ಸಿನಿಮಾದ ಜನಪ್ರಿಯ ದೃಶ್ಯದ ಮರುನಿರ್ಮಾಣ

ನಾಯಿಯೊಂದಿಗೆ ಯುವಕನೊಬ್ಬ ಟೈಟಾನಿಕ್ ಸಿನಿಮಾದ ದೃಶ್ಯಾವಳಿಯನ್ನು ಮರು ನಿರ್ಮಾಣ ಮಾಡಿ ಇಂಟರ್ನೆಟ್​ನಲ್ಲಿ ಗಮನ ಸೆಳೆದಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.

Viral Video: ನಾಯಿ ಮತ್ತು ಅವನು: ಟೈಟಾನಿಕ್ ಸಿನಿಮಾದ ಜನಪ್ರಿಯ ದೃಶ್ಯದ ಮರುನಿರ್ಮಾಣ
ಟೈಟಾನಿಕ್ ಸಿನಿಮಾದ ಜನಪ್ರಿಯ ದೃಶ್ಯದ ಮರುನಿರ್ಮಾಣ
TV9 Web
| Edited By: Rakesh Nayak Manchi|

Updated on:Oct 09, 2022 | 4:09 PM

Share

ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿನ ಮುಂಭಾಗದ ಅಂಚಿನಲ್ಲಿ ಒಬ್ಬ ಯುವಕ ಮತ್ತು ಒಬ್ಬ ಯುವತಿ ನಿಂತುಕೊಂಡು ಪ್ರಕೃತಿಗೆ ಮೈಯೊಡುತ್ತಿರುತ್ತಾರೆ. ಯುವತಿ ಮುಂಭಾಗದಲ್ಲಿ ನಿಂತಿದ್ದರೆ ಯುವಕ ಆಕೆಯನ್ನು ಹಿಂಬದಿಯಿಂದ ಹಿಡಿದುಕೊಂಡು ಗಾಳಿಯನ್ನು ಆಸ್ವಾದಿಸುತ್ತಾರೆ. ಇದು ಜನಪ್ರಿಯ ಟೈಟಾನಿಕ್ ಸಿನಿಮಾದಲ್ಲಿ ಹೀರೋ ಜ್ಯಾಕ್ ಮತ್ತು ಹೀರೋಯಿನ್ ರೋಸ್ ಅವರ ಅಭಿನಯವಾಗಿದೆ. ಇದೀಗ ಇದೇ ದೃಶ್ಯವನ್ನು ಮುಂದಿಟ್ಟುಕೊಂಡು ಯುವಕನೊಬ್ಬ ರೀಲ್ಸ್ ಮಾಡಿದ್ದಾನೆ. ಇದರಲ್ಲಿ ಯುವಕ ಟೈಟಾನಿಕ್ ಫಿಲ್ಮ್ ನಟಿಯಂತೆ ನಟನೆ ಮಾಡಿದ್ದು, ಯುವಕನಾಗಿ ಮುದ್ದಾದ ನಾಯಿ ಅಭಿನಯಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.

ಯುವಕ ರೋಸ್​ನಂತೆ ಮೇಕಪ್ ಮಾಡುವುದರಿಂದ ವಿಡಿಯೋ ಆರಂಭವಾಗುತ್ತದೆ. ಮ್ಯಾಕ್ಸಿನ್ ಎಂಬ ಹೆಸರಿನ ನಾಯಿಗೆ ಜ್ಯಾಕ್​ನಂತೆ ವೇಷ ಧರಿಸಲಾಗುತ್ತದೆ. ನಂತರ ಹಡಗಿನ ಮುಂಭಾಗದಲ್ಲಿರುವ ತಡೆಯನ್ನು ನಿರ್ಮಿಸಿ ಅಲ್ಲಿ ಕುರ್ಚಿಯನ್ನು ಇಡಲಾಗುತ್ತದೆ. ನಂತರ ನಾಯಿಯನ್ನು ಬೆನ್ನಿಗೆ ಕಟ್ಟಿದ ರೋಸ್ ವೇಷದಲ್ಲಿರುವ ಯುವಕ ಆ ಕುರ್ಚಿ ಮೇಲೆ ನಿಂತುಕೊಂಡು ಟೈಟಾನಿಕ್ ಸಿನಿಮಾದ ಆ ಒಂದು ದೃಶ್ಯಾವಳಿಯನ್ನು ಮರುನಿರ್ಮಾಣ ಮಾಡುತ್ತಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಮ್ಯಾಕ್ಸಿನ್‌ ಇದೇ ಮೊದಲ ಬಾರಿ ನೆಟ್ಟಿಗರಿಗೆ ಕಣ್ಣಿಗೆ ಬಿದ್ದಿಲ್ಲ. ಇದಕ್ಕೂ ಮೀಸಲಾಗಿರುವ ಇನ್ಸ್ಟಾಗ್ರಾಮ್ ಖಾತೆಯೊಂದು ಇದೆ. ಇದರಲ್ಲಿ ಮ್ಯಾಕ್ಸಿನ್ ಮಾಡುವ ರೀಲ್ಸ್​ಗಳನ್ನು ಹಂಚಿಕೊಳ್ಳಲಾಗುತ್ತದೆ. ಹೀಗಾಗಿ ಮ್ಯಾಕ್ಸಿನ್ ಒಂದಷ್ಟು ನೆಟ್ಟಿಗರಿಗೆ ಚಿರಪರಿಚಿತ. ಸದ್ಯ ಟೈಟಾನಿಕ್ ಸಿನಿಮಾದ ದೃಶ್ಯಾವಳಿಯನ್ನು ನೆನಪಿಸುವಂತೆ ಮಾಡಿದ ಈ ರೀಲ್ಸ್ ಅನ್ನು ಕೂಡ ಅದೇ ಪೇಜ್​ನಲ್ಲಿ ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, 60 ಸಾವಿರಕ್ಕು ಹೆಚ್ಚು ಲೈಕ್​ಗಳು ಬಂದಿವೆ.

ಮತ್ತಷ್ಟು ವೈರಲ್ ವಿಡಿಯೋನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Sun, 9 October 22

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ