Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮಹಿಳೆ ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ಕೊರೆದು ತಿನ್ನುತ್ತಾಳೆ

ಪ್ರಪಂಚದಲ್ಲಿ ಅನೇಕ ರೀತಿಯ ಆಹಾರಪ್ರೇಮಿಗಳನ್ನು ನೀವು ನೋಡಿರಬಹುದು, ಆದರೆ ಹಸಿವಾದಾಗಲೆಲ್ಲ ತನ್ನ ಮನೆಯ ಗೋಡೆಯನ್ನು ತಿನ್ನುವ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಅಂತಹ ಮಹಿಳೆಯ ಕಥೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ.

Viral Video: ಈ ಮಹಿಳೆ ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ಕೊರೆದು ತಿನ್ನುತ್ತಾಳೆ
Viral
Follow us
ಅಕ್ಷತಾ ವರ್ಕಾಡಿ
|

Updated on: Dec 08, 2023 | 12:38 PM

ಪ್ರತಿದಿನವೂ ವಿವಿಧ ಬಗೆಯ ಆಹಾರವನ್ನು ಪ್ರಯತ್ನಿಸುವ ಅನೇಕ ಆಹಾರಪ್ರೇಮಿಗಳನ್ನು ನೀವು ನೋಡಿರಬಹುದು. ಆಹಾರಪ್ರೇಮಿಗಳದ್ದೇ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ವಿಚಿತ್ರ ಆಹಾರ ಕ್ರಮದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಈ ಮಹಿಳೆ ತಾನು ಹಸಿವಾದಾಗಲೆಲ್ಲ ತನ್ನ ಮನೆಯ ಗೋಡೆಯನ್ನು ಕೊರೆದು ಕೊರೆದು ತಿನ್ನುತ್ತಾಳೆ. ಇದೀಗಾಗಲೇ ಅವಳ ಮನೆಯ ಅರ್ಧದಷ್ಟು ಗೋಡೆಯನ್ನು ತಿಂದಿದ್ದಾಳೆ. ಈಕೆಯ ಈ ವಿಚಿತ್ರ ಅಭ್ಯಾಸ ತಿಳಿದ ಅಕ್ಕ ಪಕ್ಕದ ಮನೆಯವರು ಆಕೆಯನ್ನು ತಮ್ಮ ಮನೆಯೊಳಗೆ ಬರದಂತೆ ವಿನಂತಿಸಿದ್ದಾರೆ.

ಅಮೆರಿಕದ ಮಿಚಿಗನ್ ನಿವಾಸಿಯಾಗಿರುವ ನಿಕೋಲ್ ಎಂಬಾಕೆಯೇ ಗೋಡೆ ತಿನ್ನುವ ಮಹಿಳೆ. ಈಕೆಗೆ ಯಾವುದೇ ಚೈನೀಸ್ ಅಥವಾ ಇಟಾಲಿಯನ್ ಆಹಾರ ಇಷ್ಟವಿಲ್ಲವಂತೆ. ತಾನು ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ತಿನ್ನುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಇದಲ್ಲದೇ ಹೋದಲ್ಲೆಲ್ಲಾ ತನ್ನ ಮನೆಯ ಗೋಡೆ ಮಾತ್ರವಲ್ಲದೆ ಅವರಿವರ ಮನೆಗಳ ಗೋಡೆಗಳನ್ನೂ ತಿನ್ನುತ್ತಾಳೆ. ಇದರಿಂದಾಗಿ ಆಕೆಯ ಸಂಬಂಧಿಕರು ಮತ್ತು ಸ್ನೇಹಿತರು ಆಕೆ ಇನ್ನು ಮುಂದೆ ಮನೆಗೆ ಬರದಂತೆ ವಿನಂತಿಯನ್ನೂ ಮಾಡಿದ್ದಾರೆ.

ಇದನ್ನೂ ಓದಿ: ಈ ಯುವತಿಗೆ ದಿನಕ್ಕೆ 12 ಸಾವಿರ ಬಾರಿ ಸೀನು ಬರುತ್ತದೆ, ಏನಿದು ವಿಚಿತ್ರ ಕಾಯಿಲೆ?

ನಿಕೋಲ್​​​ನ ಈ ಅಭ್ಯಾಸದಿಂದ ಹೊರಬರದಿದ್ದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವೈದ್ಯರು ಆಕೆಗೆ ಎಚ್ಚರಿಸಿದ್ದಾರೆ. ಇದೀಗಾ ಈಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!