AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​​ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್​ಗೆ ಕೈಮುಗಿದ ವಿದೇಶಿ ಪ್ರಜೆ

ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​ ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂ​ ಸೌಲಭ್ಯ ಹೊಂದಿದ್ದು, ಇದರಿಂದ ವಿಕಲಚೇತನರು ಸಂಚರಿಸಲು ಅನುಕೂಲವಾಗಿದೆ.

Video Viral: ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​​ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್​ಗೆ ಕೈಮುಗಿದ ವಿದೇಶಿ ಪ್ರಜೆ
ಬಿಎಂಟಿಸಿ ಗಾಲಿಕುರ್ಚಿ-ಲಿಫ್ಟಿಂಗ್​
ವಿವೇಕ ಬಿರಾದಾರ
|

Updated on:Mar 18, 2023 | 6:13 AM

Share

ಬೆಂಗಳೂರು: ಸಿಲಿಕಾನ್​ ಸಿಟಿ ಜನರ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಎಲ್ಲ ಮೂಲಗಳಿಗು ಜನರನ್ನು ತಲುಪಿಸುತ್ತದೆ. ಬಿಎಂಟಿಸಿಯಲ್ಲಿ ನಿತ್ಯ ಲಕ್ಷಾಂತರ ಜನರು ಸುರಕ್ಷಿತವಾಗಿ ಸಂಚರಿಸುತ್ತಾರೆ. ಆರಾಮದಾಯಕ ಪ್ರಯಾಣಕ್ಕೆ ಬಸ್​ಗಳು ಅನುಕೂಲವಾಗಿದೆ. ಬಿಎಂಟಿಸಿ ಹೊಸ ಹೊಸ ಬಸ್​ಗಳನ್ನು ಪರಿಚಯಿಸುತ್ತಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್​ ಬಸ್​, ಎಂಡಿ 15 ( ಶೇ 15 ರಷ್ಟು ಮಿಥೈಲ್​-ಡಿಸೇಲ್ ಮಿಶ್ರಿತ) ಬಸ್​ ಹೀಗೆ ಹೊಸ ಹೊಸ ಬಸ್​ಗಳನ್ನು ರಸ್ತೆಗೆ ಇಳಿಸುತ್ತದೆ.​ ಎಲೆಕ್ಟ್ರಿಕ್​ ಬಸ್​ನಲ್ಲಿ ವಿಕಲಚೇತನರು ವೀಲ್​​ಚೇರ್​ ಸಮೇತ ಬಸ್​ ಹತ್ತಲು ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂ ಸೌಲಭ್ಯ ಇದೆ. ವಿಕಲಚೇತನ ವಿದೇಶಿ ಪ್ರಜೆಯೊಬ್ಬರು ವೀಲ್​ ಚೇರ್​ ಸಮೇತ ಬಸ್​ ಹತ್ತಿದ್ದು, ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂ​ ಸೌಲಭ್ಯ ಕಂಡು ಆ ಪ್ರಜೆ ಕಂಡೆಕ್ಟ್​​ರಗೆ ಕೈ ಮುಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರು ಬಸ್​ಗಾಗಿ ಕಾಯುತ್ತಿರುತ್ತಾರೆ. ಈ ವೇಳೆ 226N ಎಲೆಕ್ಟ್ರಿಕ್​ ಬಸ್​​ ಬರುತ್ತದೆ. ಇಬ್ಬರು ವಿದೇಶಿ ಪ್ರಯಾಣಿಕರಲ್ಲಿ ಓರ್ವ ವಿಕಲಚೇತನ ವ್ಯಕ್ತಿಯಾಗಿದ್ದು, ವೀಲ್​ಚೇರ್​​ನಲ್ಲಿ ಕುಳಿತಿರುತ್ತಾರೆ. ವಿಕಲಚೇತನ ವ್ಯಕ್ತಿ ವೀಲ್​ಚೇರ್​ ಸಮೇತ ಬಸ್​ ಹತ್ತಲು ಚಾಲಕ ರಿಮೋಟ್​ ಮೂಲಕ ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂನ್ನು ಹೊರತೆಗೆಯುತ್ತಾರೆ. ಅದು ನೆಲದ ಸಮಾನಂತರವಾಗಿ ಹಾಸಿಕೊಳ್ಳುತ್ತದೆ. ನಂತರ ಅದರ ಮೇಲೆ ವೀಲ್​ಚೇರ್​ ಸಮೇತ ವ್ಯಕ್ತಿಯನ್ನು ಕೂರಿಸಲಾಗುತ್ತದೆ. ನಂತರ ನಿಧಾನವಾಗಿ ಲಿಫ್ಟರ್​ ಮೇಲೆ ಹೋಗಿ ಬಸ್​ನ​​ ಸಮಾನಾಂತರವಾಗಿ ನಿಲ್ಲುತ್ತದೆ. ಬಳಿಕ ವಿಕಲಚೇತನ ವ್ಯಕ್ತಿ ಒಳಗೆ ಹೋಗುತ್ತಾನೆ. ಇದನ್ನು ಕಂಡ ಮತ್ತೊಬ್ಬ ವಿದೇಶಿ ಪ್ರಯಾಣಿಕ ಕಂಡಕ್ಟರ್​ಗೆ ಕೈಮುಗಿಯುತ್ತಾರೆ.

ವಿಕಲಚೇತನರಿಗೆ ಪ್ರಯಾಣವನ್ನು ಸುಲಭಗೊಳಿಸಲು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊದಲ ಬಾರಿಗೆ ಗಾಲಿಕುರ್ಚಿ-ಲಿಫ್ಟಿಂಗ್ ಸೌಲಭ್ಯವನ್ನು ಹೊಂದಿರುವ ಬಸ್‌ಗಳನ್ನು ಕಳೆದ ವರ್ಷ ಪರಿಚಯಿಸಿದೆ. ಇದನ್ನು ಬಸ್ ಸಿಬ್ಬಂದಿ ನಿರ್ವಹಿಸುತ್ತಾರೆ. ಬಿಎಂಟಿಸಿ ವಿಡಿಯೋ ಟ್ವೀಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 am, Sat, 18 March 23

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್