AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಳ ಅಪಾಯಕಾರಿ ರೀತಿಯಲ್ಲಿ ಹಳಿದಾಟುವ ಮಹಿಳೆ ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಳ್ಳುತ್ತಾಳೆ! ಮೈ ಜುಮ್ಮೆನಿಸುವ ವೈರಲ್ ವಿಡಿಯೋ

ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.

ಬಹಳ ಅಪಾಯಕಾರಿ ರೀತಿಯಲ್ಲಿ ಹಳಿದಾಟುವ ಮಹಿಳೆ ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಳ್ಳುತ್ತಾಳೆ! ಮೈ ಜುಮ್ಮೆನಿಸುವ ವೈರಲ್ ವಿಡಿಯೋ
ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಂಡ ಮಹಿಳೆ
TV9 Web
| Edited By: |

Updated on: Jul 20, 2022 | 12:24 PM

Share

ಸಾವಿನೊಂದಿಗೆ (death) ಚೆಲ್ಲಾಟ ಅಂದರೆ ಇದೇ ಇರಬೇಕು ಮಾರಾಯ್ರೇ. ಈ ವಿಡಿಯೋ ನೋಡಿ, ಮಹಿಳೆಯೊಬ್ಬಳು ಕೂದಲೆಳೆಯ ಅಂತರದಲ್ಲಿ ನಿಶ್ಚಿತ ಸಾವಿನಿಂದ ಪಾರಾಗುತ್ತಾಳೆ. ಮಹಿಳೆಯ ಕುಟುಂಬವಲ್ಲದೆ ಬೇರೆ ಕೆಲವರು ಸಹ ಮತ್ತೊಂದು ಟ್ರ್ಯಾಕ್ ಗಳ (tracks) ಮೇಲೆ ನಿಂತಿರುವ ಟ್ರೈನಿಂದ ಇಳಿದಿದ್ದಾರೆ. ಯಾವುದೇ ಪ್ಲಾಟ್ ಫಾರ್ಮ್ (platform) ಕಾಣಿಸುತ್ತಿಲ್ಲವಾದ್ದರಿಂದ ಇದು ಯಾವ ಊರು ಅಂತ ನಮಗೆ ಗೊತ್ತಿಲ್ಲ. ಪ್ರಾಯಶಃ ಮಹಿಳೆ ಸೇರಿದಂತೆ ರೈಲಿನಿಂದ ಇಳಿದವರಿಗೆ ಅಲ್ಲಿಂದ ಮನೆ ಹತ್ತಿರವಾಗಬಹುದು. ಚಲಿಸದೆ ನಿಂತಿರುವ ಪಕ್ಕದ ಹಳಿಗಳ ಮೇಲೆ ಆ ಕಡೆಯಿಂದ ಮತ್ತೊಂದು ಟ್ರೈನ್ ಬರುತ್ತಿರುವುದು ವಿಡಿಯೋನಲ್ಲಿ ಕಾಣಿಸುತ್ತದೆ. ಅದು ಪಾಸ್ ಆಗುವ ಮೊದಲೇ ಹಳಿ ದಾಟಿದ್ದ ಮಹಿಳೆ ವಾಪಸ್ಸು ಬರುತ್ತಾಳೆ. ಆಗಲೇ ಆ ಕಡೆಯಿಂದ ಟ್ರೈನು ಜೋರಾಗಿ ವಿಶಲ್ ಹಾಕುತ್ತಾ ಬಂದುಬಿಡುತ್ತದೆ. ಚೆನ್ನಾಗಿ ಗಮನಿಸಿ. ಮಹಿಳೆಯಿಂದ ಹಳಿ ದಾಟುವುದು ಕೇವಲ ಒಂದು ಕ್ಷಣ ತಡವಾಗಿದ್ದರೆ ರೈಲಿನಡಿ ಸಿಕ್ಕಿಬಿಡುತ್ತಿದ್ದಳು!

ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.

ಅದೇ ಗಾಬರಿಯಲ್ಲಿ ಜನ ತಮ್ಮ ಸಾಮಾನುಗಳನ್ನು ಅತ್ತಿಂದಿತ್ತ ಬಿಸಾಡಲಾರಂಭಿಸುತ್ತಾರೆ. ಅಪಾಯದಿಂದ ಪಾರಾದ ಮಹಿಳೆ ಹಳಿ ದಾಟಲು ಪ್ರಯತ್ನಿಸುವ ಒಬ್ಬ ಹಿರಿಯ ಮಹಿಳೆಯನ್ನು (ಆಕೆಯ ಸಂಬಂಧಿಯಾಗಿರಬಹುದು) ತಡೆಯಲು ಈ ಕಡೆಗೆ ಧಾವಿಸುತ್ತಾಳೆ. ಆಕೆಯನ್ನು ಉಳಿಸುವ ಉದ್ದೇಶದಿಂದ ಆಕೆ ತನ್ನ ಜೀವವನ್ನು ತೀವ್ರ ಸ್ವರೂಪದ ಅಪಾಯಕ್ಕೊಡುತ್ತಾಳೆ. ಆಕೆಯೊಬ್ಬಳೇ ಅಂತಲ್ಲ ಹಳಿ ದಾಟಿದವರು ಕೂಡ ತಮ್ಮ ಜೀವವನ್ನು ರಿಸ್ಕ್​ನಲ್ಲಿ ಹಾಕಿ ಹಾಗೆ ಮಾಡಿದ್ದಾರೆಂದರೆ ತಪ್ಪೆನಿಸದು.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ