AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಳ ಅಪಾಯಕಾರಿ ರೀತಿಯಲ್ಲಿ ಹಳಿದಾಟುವ ಮಹಿಳೆ ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಳ್ಳುತ್ತಾಳೆ! ಮೈ ಜುಮ್ಮೆನಿಸುವ ವೈರಲ್ ವಿಡಿಯೋ

ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.

ಬಹಳ ಅಪಾಯಕಾರಿ ರೀತಿಯಲ್ಲಿ ಹಳಿದಾಟುವ ಮಹಿಳೆ ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಳ್ಳುತ್ತಾಳೆ! ಮೈ ಜುಮ್ಮೆನಿಸುವ ವೈರಲ್ ವಿಡಿಯೋ
ಕೂದಲೆಳೆ ಅಂತರದಿಂದ ಸಾವು ತಪ್ಪಿಸಿಕೊಂಡ ಮಹಿಳೆ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 20, 2022 | 12:24 PM

Share

ಸಾವಿನೊಂದಿಗೆ (death) ಚೆಲ್ಲಾಟ ಅಂದರೆ ಇದೇ ಇರಬೇಕು ಮಾರಾಯ್ರೇ. ಈ ವಿಡಿಯೋ ನೋಡಿ, ಮಹಿಳೆಯೊಬ್ಬಳು ಕೂದಲೆಳೆಯ ಅಂತರದಲ್ಲಿ ನಿಶ್ಚಿತ ಸಾವಿನಿಂದ ಪಾರಾಗುತ್ತಾಳೆ. ಮಹಿಳೆಯ ಕುಟುಂಬವಲ್ಲದೆ ಬೇರೆ ಕೆಲವರು ಸಹ ಮತ್ತೊಂದು ಟ್ರ್ಯಾಕ್ ಗಳ (tracks) ಮೇಲೆ ನಿಂತಿರುವ ಟ್ರೈನಿಂದ ಇಳಿದಿದ್ದಾರೆ. ಯಾವುದೇ ಪ್ಲಾಟ್ ಫಾರ್ಮ್ (platform) ಕಾಣಿಸುತ್ತಿಲ್ಲವಾದ್ದರಿಂದ ಇದು ಯಾವ ಊರು ಅಂತ ನಮಗೆ ಗೊತ್ತಿಲ್ಲ. ಪ್ರಾಯಶಃ ಮಹಿಳೆ ಸೇರಿದಂತೆ ರೈಲಿನಿಂದ ಇಳಿದವರಿಗೆ ಅಲ್ಲಿಂದ ಮನೆ ಹತ್ತಿರವಾಗಬಹುದು. ಚಲಿಸದೆ ನಿಂತಿರುವ ಪಕ್ಕದ ಹಳಿಗಳ ಮೇಲೆ ಆ ಕಡೆಯಿಂದ ಮತ್ತೊಂದು ಟ್ರೈನ್ ಬರುತ್ತಿರುವುದು ವಿಡಿಯೋನಲ್ಲಿ ಕಾಣಿಸುತ್ತದೆ. ಅದು ಪಾಸ್ ಆಗುವ ಮೊದಲೇ ಹಳಿ ದಾಟಿದ್ದ ಮಹಿಳೆ ವಾಪಸ್ಸು ಬರುತ್ತಾಳೆ. ಆಗಲೇ ಆ ಕಡೆಯಿಂದ ಟ್ರೈನು ಜೋರಾಗಿ ವಿಶಲ್ ಹಾಕುತ್ತಾ ಬಂದುಬಿಡುತ್ತದೆ. ಚೆನ್ನಾಗಿ ಗಮನಿಸಿ. ಮಹಿಳೆಯಿಂದ ಹಳಿ ದಾಟುವುದು ಕೇವಲ ಒಂದು ಕ್ಷಣ ತಡವಾಗಿದ್ದರೆ ರೈಲಿನಡಿ ಸಿಕ್ಕಿಬಿಡುತ್ತಿದ್ದಳು!

ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.

ಅದೇ ಗಾಬರಿಯಲ್ಲಿ ಜನ ತಮ್ಮ ಸಾಮಾನುಗಳನ್ನು ಅತ್ತಿಂದಿತ್ತ ಬಿಸಾಡಲಾರಂಭಿಸುತ್ತಾರೆ. ಅಪಾಯದಿಂದ ಪಾರಾದ ಮಹಿಳೆ ಹಳಿ ದಾಟಲು ಪ್ರಯತ್ನಿಸುವ ಒಬ್ಬ ಹಿರಿಯ ಮಹಿಳೆಯನ್ನು (ಆಕೆಯ ಸಂಬಂಧಿಯಾಗಿರಬಹುದು) ತಡೆಯಲು ಈ ಕಡೆಗೆ ಧಾವಿಸುತ್ತಾಳೆ. ಆಕೆಯನ್ನು ಉಳಿಸುವ ಉದ್ದೇಶದಿಂದ ಆಕೆ ತನ್ನ ಜೀವವನ್ನು ತೀವ್ರ ಸ್ವರೂಪದ ಅಪಾಯಕ್ಕೊಡುತ್ತಾಳೆ. ಆಕೆಯೊಬ್ಬಳೇ ಅಂತಲ್ಲ ಹಳಿ ದಾಟಿದವರು ಕೂಡ ತಮ್ಮ ಜೀವವನ್ನು ರಿಸ್ಕ್​ನಲ್ಲಿ ಹಾಕಿ ಹಾಗೆ ಮಾಡಿದ್ದಾರೆಂದರೆ ತಪ್ಪೆನಿಸದು.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ