ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ? ವಿಶ್ವಾಸದಲ್ಲಿ ಡಿಕೆಶಿ ಆಪ್ತ ಶಾಸಕರು
ಕಾಂಗ್ರೆಸ್ ಮನೆಯಲ್ಲಿನ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದ್ರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಬಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.
ರಾಮನಗರ, (ಡಿಸೆಂಬರ್ 29): ಕಾಂಗ್ರೆಸ್ ಮನೆಯಲ್ಲಿನ ಸಿಎಂ ಕುರ್ಚಿ ಕಾಳಗಕ್ಕೆ ಸದ್ಯ ಜನವರಿ 15ರವರೆಗೆ ಅಲ್ಪವಿರಾಮ ಬಿದ್ದಿದೆ. ಆದ್ರೆ ಪಟ್ಟದ ಪಗಡೆಯಾಟೆ ಮಾತ್ರ ಕಂಡು ಕಾಣದಂತೆ ಒಳಗೊಳಗೆ ನಡೀತಾನೆ ಇದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ (Siddaramaiah) ಬಣ ಉರುಳಿಸಿರುವ ಅಹಿಂದ ಶಕ್ತಿ ಪ್ರದರ್ಶನವೂ ಒಂದು. ಸಿದ್ದು ತವರು ಮೈಸೂರು ಅಹಿಂದ ಸಮಾವೇಶಕ್ಕೆ ಸಜ್ಜಾಗ್ತಿದೆ. ಇದರ ನಡುವೆ ಜನವರಿ 6 ಅಥವಾ 9ಕ್ಕೆ ಡಿಕೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಶರಣರನ್ನು ಮುಂದಿಟ್ಟು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಮಾತನಾಡಿರುವ ಕೈ ಶಾಸಕ ಇಕ್ಬಾಲ್ ಹುಸೇನ್, ಜನವರಿ 6 ಅಥವಾ 9ಕ್ಕೆ ಡಿಕೆ ಅಧಿಕಾರ ಹಿಡಿಯುತ್ತಾರೆ. 200 ಪರ್ಸೆಂಟ್ ಈ ಎರಡು ಡೇಟ್ನಲ್ಲಿ ಅಧಿಕಾರ ಸಿಗಲಿದೆ. ಈಗಲು ಸಹ ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನನಗೆ ವಿಶ್ವಾಸವಿದೆ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ. ಶರಣರು ಹೇಳುವ ಮಾತು ಸತ್ಯವಾಗುತ್ತದೆ. ಅಧಿಕಾರ ಹಂಚಿಕೆ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ ಅಲ್ವಾ. ಹಾಗಾಗಿ ನನಗೆ ಈ ಬಗ್ಗೆ ನಂಬಿಕೆ ಇದೆ. ಭಗವಂತ ನಮ್ಮ ಬೇಡಿಕೆ ಈಡೇರಿಸುತ್ತಾನೆ ಎಂದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ

