AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Polls:  ಬಾದಾಮಿ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಸಿದ್ದರಾಮಯ್ಯಗೆ ಜೈ ಅನ್ನುತ್ತಾ ವೇದಿಕೆ ಬಳಿ ಬಂದು ಅವರ ಮುಂದೆ ನಿಂತುಬಿಟ್ಟ!

Assembly Polls:  ಬಾದಾಮಿ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಸಿದ್ದರಾಮಯ್ಯಗೆ ಜೈ ಅನ್ನುತ್ತಾ ವೇದಿಕೆ ಬಳಿ ಬಂದು ಅವರ ಮುಂದೆ ನಿಂತುಬಿಟ್ಟ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Mar 24, 2023 | 5:55 PM

Share

ಅಭಿಮಾನಿಯೊಬ್ಬ ಸಿದ್ದರಾಮಯ್ಯ ಜೈ ಅನ್ನುತ್ತಾ ವೇದಿಕೆ ಮುಂಭಾಗಕ್ಕೆ ಬರುತ್ತಾನೆ. ಕಾರ್ಯಕರ್ತರು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದಾಗ ಅವರಿಗೆ ತಿರುಗಿ ಬೀಳುತ್ತಾನೆ. ಕೊನೆಗೆ ಪೊಲೀಸರು ಬಂದು ಅವನನ್ನು ಅಲ್ಲಿಂದ ಎಳೆದೊಯ್ಯುತ್ತಾರೆ.

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಹತ್ತು ಹಲವು ಬಗೆಯ ಅಭಿಮಾನಿಗಳಿದ್ದಾರೆ ಮಾರಾಯ್ರೇ. ಹಳೆ ಮೈಸೂರು ಭಾಗದ (Old Mysuru Region) ಜನರ ತೋರುವ ಅಭಿಮಾನವೇ ಬೇರೆ ಉತ್ತರ ಕರ್ನಾಟಕದ ಜನ ತೋರುವ ಪ್ರೀತಿಯೇ ಬೇರೆ. ನಿಮಗೆ ನೆನಪಿದೆಯಾ? ‘ಹೌದಾ ಹುಲಿಯಾ’ (Huliya) ಎಂದ ಸಿದ್ದರಾಮಯ್ಯ ಅಭಿಮಾನಿ ಬೆಳಗಾವಿಯ ಕಾಗವಾಡದವನು. ಈ ವ್ಯಕ್ತಿ ಬೆಂಗಳೂರಿಗೆ ಪ್ರಯಾಣಿಸಿ ಸಿದ್ದರಾಮಯ್ಯನವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿದ್ದ. ಇದು 4-5 ವರ್ಷಗಳ ಹಿಂದಿನ ಮಾತು. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಎಂದರೆ, ಬಾದಾಮಿಯಲ್ಲಿಂದು ಅವರ ಅಭಿಮಾನಿಯೊಬ್ಬ ಪ್ರಾಯಶಃ ಎಣ್ಣೆ ಹಾಕಿದ್ದ ಅನಿಸುತ್ತೆ, ಮೈಯೆಲ್ಲ ಗುಲಾಲ್ ಚೆಲ್ಲಿಕೊಂಡು, ಸಿದ್ದರಾಮಯ್ಯ ಜೈ ಅನ್ನುತ್ತಾ ವೇದಿಕೆ ಮುಂಭಾಗಕ್ಕೆ ಬರುತ್ತಾನೆ. ಕಾರ್ಯಕರ್ತರು ಅಲ್ಲಿಂದ ಓಡಿಸುವ ಪ್ರಯತ್ನ ಮಾಡಿದಾಗ ಅವರಿಗೆ ತಿರುಗಿ ಬೀಳುತ್ತಾನೆ. ಕೊನೆಗೆ ಪೊಲೀಸರು ಬಂದು ಅವನನ್ನು ಅಲ್ಲಿಂದ ಎಳೆದೊಯ್ಯುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Mar 24, 2023 05:54 PM