AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸನಗೌಡ ಯತ್ನಾಳ್ ಕೈ ಬಿಡಬೇಡಿ ಎಂದು ಕೆಲ ಸಂಸದರು ನನಗೆ ಹೇಳಿದ್ದಾರೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬಸನಗೌಡ ಯತ್ನಾಳ್ ಕೈ ಬಿಡಬೇಡಿ ಎಂದು ಕೆಲ ಸಂಸದರು ನನಗೆ ಹೇಳಿದ್ದಾರೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2025 | 10:17 AM

Share

ಉತ್ತರ ಕರ್ನಾಟಕದ ಸರ್ವಾಂಗೀಣ ಬೆಳವಣಿಗೆಗೆ ಬಸನಗೌಡ ಯತ್ನಾಳ್ ಅವರಿಂದ ಬಹು ದೊಡ್ಡ ಕೊಡುಗೆ ಸಿಗುತ್ತಿದೆ ಮತ್ತು ಮುಂದೆಯೂ ಸಿಗಲಿದೆ, ಯುವಕರನ್ನು ಸಂಘಟಿಸುವ ಕಾರ್ಯದಲ್ಲಿ ಅವರನ್ನು ಮೀರಿಸುವವರಿಲ್ಲ ಎಂದು ಸ್ವಾಮೀಜಿ ಹೇಳಿದರು. ಕರ್ನಾಟಕದ ಜನ ಅದರಲ್ಲೂ ವಿಶೇಷವಾಗಿ ವಿಜಯಪುರ ಮತ್ತು ಉತ್ತರ ಕರ್ನಾಟಕದ ಜನ ಯತ್ನಾಳ್ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಸ್ವಾಮೀಜಿ ಹೇಳಿದರು.

ವಿಜಯಪುರ, ಮೇ 1: ಬುಧವಾರದಂದು ಬಸವ ಜಯಂತಿ ಪ್ರಯುಕ್ತ ವಿಜಯಪುರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತಾಡಿದ ಕೂಡಲಸಂಗಮ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು (Basava Jaya Mrithyunjaya Swamiji) ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹಿಂದೆ ತಾವು ನೈತಿಕ ಬಲವಾಗಿ ನಿಂತಿದ್ದೇನೆ ಎಂದು ಹೇಳಿದರು. ದೆಹಲಿಯಲ್ಲಿ ತಾವು ಭಾಗವಹಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕೆಲ ಬಿಜೆಪಿ ಸಂಸದರು ಸಹ ಪಾಲ್ಗೊಂಡಿದ್ದರು, ಮತ್ತು ತಮ್ಮ ಕಿವಿಯಲ್ಲಿ ಯಾವ ಕಾರಣಕ್ಕೂ ಯತ್ನಾಳ್ ರನ್ನು ಬಿಡಬೇಡಿ, ಅವರಿಂದಾಗೇ ಬಿಜೆಪಿ ಕರ್ನಾಟಕದಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಸಾಧ್ಯ ಎಂದು ಹೇಳಿದರು ಎಂದು ಸ್ವಾಮೀಜಿ ಸಭೆಗೆ ತಿಳಿಸಿದರು.

ಇದನ್ನೂ ಓದಿ:  ಯತ್ನಾಳ್ ಬಗ್ಗೆ ಬಹಳ ಕನಸಿಟ್ಟುಕೊಂಡಿದ್ದೆವು, ಅದರೆ ಬಚ್ಚಲು ಬಾಯಿಂದಾಗಿ ಎಲ್ಲ ಹಾಳುಮಾಡಿಕೊಂಡಿದ್ದಾರೆ: ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ