Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ದರ್ಶನಕ್ಕೆ ಪೊಲೀಸ್ ಎಂಬ ಕಾರಣಕ್ಕಾಗಿ ಸರತಿ ಸಾಲು ಬಿಟ್ಟು ಮುನ್ನುಗ್ಗಿದವನನ್ನು ಲೇಡಿ ಕಾನ್​ಸ್ಟೇಬಲ್ ತಡೆದರು!

ದೇವರ ದರ್ಶನಕ್ಕೆ ಪೊಲೀಸ್ ಎಂಬ ಕಾರಣಕ್ಕಾಗಿ ಸರತಿ ಸಾಲು ಬಿಟ್ಟು ಮುನ್ನುಗ್ಗಿದವನನ್ನು ಲೇಡಿ ಕಾನ್​ಸ್ಟೇಬಲ್ ತಡೆದರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 27, 2025 | 8:07 PM

ತಮ್ಮ ಠಾಣೆಯ ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ಬೈದಿದ್ದಕ್ಕೆ ಸಹಜವಾಗೇ ಇನ್ಸ್​ಪೆಕ್ಟರ್​ಗೆ ಕೋಪ ಬಂದಿದೆ. ಜೈರಾಮ್ ತಾನೂ ಇಲಾಖೆಯವನೇ ಅಂತ ವಿನಂತಿಸಿಕೊಂಡಿದ್ದರೆ ಪ್ರಾಯಶಃ ಕಾನ್​ಸ್ಟೇಬಲ್ ಮತ್ತು ಇನ್ಸ್​ಪೆಕ್ಟರ್ ಗುಡಿಯೊಳಗೆ ಹೋಗುವ ಅವಕಾಶ ಮಾಡಿಕೊಡುತ್ತಿದ್ದರೇನೋ? ಆದರೆ ಮಹಿಳಾ ಕಾನ್​ಸ್ಟೇಬಲ್ ಮೇಲೆ ಜೋರು ಮಾಡಿದ ಹೆಡ್ ಕಾನ್​ಸ್ಟೇಬಲ್ ಅದಕ್ಕೆ ಬೆಲೆ ತೆತ್ತಿದ್ದಾರೆ.

ಕಾರವಾರ, ಫೆ 27: ಜನಜಂಗುಳಿಯ ನಡುವೆ ಪೊಲೀಸರೇ ಕಾದಾಟಕ್ಕೆ ನಿಂತರೆ ಹೇಗೆ ಸ್ವಾಮಿ? ಉತ್ತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿರು ಮಹಾಬಲೇಶ್ವರ ದೇವಸ್ಥಾನಕ್ಕೆ (Mahabaleshwara temple) ಪೂಜೆಗೆಂದು ಪ್ರಾಯಶಃ ಪತ್ನಿ ಜೊತೆ ಬಂದಿದ್ದ ಭಟ್ಕಳ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಜೈರಾಮ್ ಹೊಸ್ಕಟ್ಟಾ ಗುಡಿಯ ಒಳಗೆ ಹೋಗಲು ಉಳಿದವರಂತೆ ಸಾಲಲ್ಲಿ ಹೋಗೋದು ಬಿಟ್ಟು ಮುಂದೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಜನರನ್ನು ನಿಯಂತ್ರಿಸಲು ನಿಯೋಜನೆಯಲ್ಲಿದ್ದ ಒಬ್ಬ ಲೇಡಿ ಕಾನ್​ಸ್ಟೇಬಲ್ ಸಾಲಲ್ಲಿ ಬನ್ನಿ ಅಂದಾಗ ಅವರ ಮೇಲೆ ಕೂಗಾಡಿದ್ದಾರೆ. ಕೂಡಲೇ ಲೇಡಿ ಕಾನ್​ಸ್ಟೇಬಲ್ ಸ್ವಲ್ಪ ದೂರದಲ್ಲಿ ಕರ್ತವ್ಯ ನಿರತರಾಗಿದ್ದ ಇನ್ಸ್​ಪೆಕ್ಟರ್ ಖಾದರ್ ಪಾಷಾಗೆ ವಿಷಯ ತಿಳಿಸಿದ್ದಾರೆ. ಖಾದರ್ ಅಲ್ಲಿಗೆ ಬಂದು ಸಾಲಲ್ಲಿ ಬಂದರೆ ಮಾತ್ರ ಒಳಗೆ ಬಿಡೋದಾಗಿ ಖಡಾಖಂಡಿತವಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಹಿಳಾ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ ಎಫ್​ಐಆರ್ ದಾಖಲು

Published on: Feb 27, 2025 07:56 PM