ಐದು ತಿಂಗಳು ಸೆರೆವಾಸದ ಬಳಿಕ ಕುಂಟುತ್ತಾ ಬಳ್ಳಾರಿ ಜೈಲಿನಿಂದ ಹೊರಬಿದ್ದ ದರ್ಶನ್
ಬೆನ್ನುನೋವು ನಿವಾರಣೆಗೆ ದರ್ಶನ್ ಆಪರೇಶನ್ ಮಾಡಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಬೆನ್ನುನೋವಿನ ಕಾರಣಕ್ಕಾಗೇ ಅವರಿಗೆ ಬಳ್ಳಾರಿ ಜೈಲಿನಲ್ಲಿ ವೆಸ್ಟರ್ನ್ ಮತ್ತು ವಿಶಿಷ್ಟ ವಿನ್ಯಾಸದ ಕಮೋಡನ್ನು ಒದಗಿಸಲಾಗಿತ್ತು. ತಮ್ಮಿಷ್ಟದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಕಾಶವನ್ನು ನ್ಯಾಯಾಲಯವು ದರ್ಶನ್ಗೆ ಕಲ್ಪಿಸಿದೆ.
ಬಳ್ಳಾರಿ: ಸುಮಾರು ಐದು ತಿಂಗಳು ಕಾಲ ಜೈಲಲ್ಲಿದ್ದ ನಟ ದರ್ಶನ್ ಇಂದು ರಾಜ್ಯ ಉಚ್ಛ ನ್ಯಾಯಾಲಯದಿಂದ ಜಾಮೀನು ಪಡೆದು ಬಳ್ಳಾರಿ ಕೇಂದ್ರೀಯ ಕಾರಾಗೃಹದಿಂದ ಹೊರಬಿದ್ದರು. ಅವರನ್ನಿಟ್ಟಿದ್ದ ಸೆಲ್ನಿಂದ ನಟ ಕುಂಟುತ್ತಾ ನಡೆದು ಬರುತ್ತಿರುವ ಎಕ್ಸ್ಕ್ಲ್ಯೂಸಿವ್ ಫುಟೇಜ್ ನಮಗೆ ಸಿಕ್ಕಿದೆ. ಅವರು ಎಡಗಾಲನ್ನು ಎತ್ತಿ ಹಾಕುತ್ತಿದ್ದಾರೆ. ಬೆನ್ನುನೋವು ಹೆಚ್ಚಾಗಿರೋದು ನಡಿಗೆಯಲ್ಲಿ ಗೊತ್ತಾಗುತ್ತದೆ. ಟಿವಿ9 ಸಿಕ್ಕಿರುವ ಮಾಹಿತಿ ಪ್ರಕಾರ ದರ್ಶನ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿರುವ ಕಾರು ಚಳ್ಳಕೆರೆ-ಹಿರಿಯೂರು-ಶಿರಾ-ತುಮಕೂರು-ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ಬಿಡುಗಡೆ ಕೋರಿ ವಿಜಯಲಕ್ಷ್ಮಿ ಸುತ್ತಿದ ದೇವಾಲಯಗಳು ಯಾವುವು ಗೊತ್ತೆ?
Follow Us
Latest Videos
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

