Chamarajanagar: ಬಂಡೀಪುರದ ಆನೆ ಶಿಬಿರದಲ್ಲಿ ಅನಾಥವಾಗಿದ್ದ ಹೆಣ್ಣು ಅನೆಮರಿಯೊಂದಕ್ಕೆ ಯುವ ಕಾವಾಡಿ ದಂಪತಿಯೇ ಅಪ್ಪ-ಅಮ್ಮ
ದಂಪತಿ ವೇದಾಳಿಗೆ ಹಾಲು ಕುಡಿಸುತ್ತಾರೆ ಅರಣ್ಯ ಪ್ರದೇಶದಲ್ಲಿ ತಮ್ಮೊಂದಿಗೆ ವಾಕ್ ಕರೆದುಕೊಂಡು ಹೋಗುತ್ತಾರೆ. ಅದರೊಂದಿಗೆ ಹೈಡ್ ಅಂಡ್ ಸೀಕ್ ಆಟ ಕೂಡ ಆಡುತ್ತಾರೆ!
ಚಾಮರಾಜನಗರ: ಮಾನವ ಮತ್ತು ಪ್ರಾಣಿಗಳ ನಡುವಿನ ಅನನ್ಯ ಬಾಂಧವ್ಯದ ಮತ್ತೊಂದು ಕಥೆಯಿದು. ಜಿಲ್ಲೆ ಬಂಡೀಪುರ ಅಭಯಾರಣ್ಯದಲ್ಲಿರುವ (Bandipur Reserve Forest) ರಾಂಪುರ ಆನೆ ಶಿಬಿರದಲ್ಲಿ ತನ್ನ ಹೆತ್ತಮ್ಮಳಿಂದ ಬೇರೆಯಾದ 7-ದಿನದ ಹೆಣ್ಣು ಆನೆಮರಿಯೊಂದಕ್ಕೆ (baby elephant) ಅದೇ ಶಿಬಿರದಲ್ಲಿ ಕೆಲಸ ಮಾಡುವ ಕಾವಾಡಿ ದಂಪತಿ ಸ್ವಂತ ಮಗುವಿನಂತೆ ಸಲಹುತ್ತಿದ್ದಾರೆ, ಪೋಷಿಸುತ್ತಿದ್ದಾರೆ. ದಯಾಳು ದಂಪತಿ ತಮ್ಮ ಆನೆಮರಿಗೆ ವೇದಾ (Veda) ಅಂತ ನಾಮಕರಣ ಕೂಡ ಮಾಡಿದ್ದಾರೆ. 7-ದಿನದ ಮರಿಯಾಗಿದ್ದಾಗ ರಾಜು (Raju) ಮತ್ತು ರಮ್ಯಾರ (Ramya) ಮಡಿಲು ಸೇರಿದ ವೇದಾಗೆ ಈಗ 7-ತಿಂಗಳ ಪ್ರಾಯ. ದಂಪತಿ ವೇದಾಳಿಗೆ ಹಾಲು ಕುಡಿಸುತ್ತಾರೆ ಅರಣ್ಯ ಪ್ರದೇಶದಲ್ಲಿ ತಮ್ಮೊಂದಿಗೆ ವಾಕ್ ಕರೆದುಕೊಂಡು ಹೋಗುತ್ತಾರೆ. ಅದರೊಂದಿಗೆ ಹೈಡ್ ಅಂಡ್ ಸೀಕ್ ಆಟ ಕೂಡ ಆಡುತ್ತಾರೆ! ವೇದ ಮತ್ತು ರಾಜು ದಂಪತಿಯ ಅನುಬಂಧಕ್ಕೆ ಯಾರ ದೃಷ್ಟಿಯೂ ತಾಕದಿರಲಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

