ನಟ ದರ್ಶನ್ (Darshan) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಅನೇಕರು ಆರಾಧಿಸುತ್ತಾರೆ. ದರ್ಶನ್ ಹೇಳಿದ್ದನ್ನು ಅಕ್ಷರಶಃ ಪಾಲಿಸೋರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಅವರ ಬರ್ತ್ಡೇನೆ ಸಾಕ್ಷಿ. ಸಾಮಾನ್ಯವಾಗಿ ಹುಟ್ಟುಹಬ್ಬ ಎಂದಾಗ ಅಭಿಮಾನಿಗಳು ಕೇಕ್ ಹಿಡಿದು ಬರುತ್ತಾರೆ. ಆದರೆ, ಈ ರೀತಿ ತರುವ ಕೇಕ್ಗಳು ಪೂರ್ತಿಯಾಗಿ ತಿನ್ನಲಾಗದೆ ಹಾಳಾಗಿ ಹೋಗುತ್ತವೆ. ಈ ರೀತಿ ಆಗಬಾರದು ಎನ್ನುವ ಕಾರಣಕ್ಕೆ ದರ್ಶನ್ ಅವರು ಅಕ್ಕಿ ಹಾಗೂ ಮೊದಲಾದ ಧಾನ್ಯಗಳನ್ನು ತರುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಫ್ಯಾನ್ಸ್ ಸ್ವೀಕರಿಸಿದ್ದಾರೆ. ಬರ್ತ್ಡೇ ದಿನ ಅಕ್ಕಿ ಮೂಟೆಗಳನ್ನು ಹೊತ್ತು ಬಂದಿದ್ದಾರೆ ಫ್ಯಾನ್ಸ್. ಇವುಗಳನ್ನು ಅಗತ್ಯ ಇರುವವರಿಗೆ ನೀಡಲಾಗುತ್ತದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ