AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಾವನ್ನು ಕಾಪಾಡಿದ ವ್ಯಕ್ತಿ!

ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಾವನ್ನು ಕಾಪಾಡಿದ ವ್ಯಕ್ತಿ!

ಸುಷ್ಮಾ ಚಕ್ರೆ
|

Updated on: Oct 24, 2025 | 10:45 PM

Share

ಇಲ್ಲೊಬ್ಬರು ವ್ಯಕ್ತಿ ಮಾನವೀಯ ದೃಷ್ಟಿಯಿಂದ ಯೋಚಿಸಿ ಅಪಾಯದಲ್ಲಿದ್ದ ಹಾವನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಹಾವಿಗೆ ಆಪರೇಷನ್ ಕೂಡ ಮಾಡಿಸಿದ್ದಾರೆ. ಬಳಿಕ ಆ ಹಾವನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಈ ವಿಚಿತ್ರ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ವಿ. ಮಡುಗಲದಲ್ಲಿ ಬೆಳಕಿಗೆ ಬಂದಿದೆ.

ಹೈದರಾಬಾದ್, ಅಕ್ಟೋಬರ್ 24: ಸಾಮಾನ್ಯವಾಗಿ ಕೆಲವರು ಹಾವಿನ ಹೆಸರು ಕೇಳಿದ ತಕ್ಷಣ ಭಯದಿಂದ ನಡುಗುತ್ತಾರೆ. ಸ್ವಲ್ಪ ಧೈರ್ಯವಿದ್ದರೆ, ಅದರಿಂದ ತಮಗೆ ಏನಾದರೂ ಹಾನಿಯಾಗುತ್ತದೆ ಎಂದು ಭಾವಿಸಿ ಅದರ ಮೇಲೆ ದಾಳಿ ಮಾಡಿ ಕೊಲ್ಲುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ಮಾನವೀಯ ದೃಷ್ಟಿಯಿಂದ ಯೋಚಿಸಿ ಅಪಾಯದಲ್ಲಿದ್ದ ಹಾವನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಹಾವಿಗೆ ಆಪರೇಷನ್ ಕೂಡ ಮಾಡಿಸಿದ್ದಾರೆ. ಬಳಿಕ ಆ ಹಾವನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಈ ವಿಚಿತ್ರ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ವಿ. ಮಡುಗಲದಲ್ಲಿ ಬೆಳಕಿಗೆ ಬಂದಿದೆ.

ಅನಕಪಲ್ಲಿ ಜಿಲ್ಲೆಯ ವಿ. ಮಡುಗಲದಲ್ಲಿರುವ ದೇವಸ್ಥಾನವೊಂದರಲ್ಲಿ ಸ್ಥಳೀಯರಿಗೆ ಹಾವು ಕಾಣಿಸಿತ್ತು. ಅದು ದೇವಸ್ಥಾನದ ಶಟರ್‌ನಲ್ಲಿ ಸಿಲುಕಿಕೊಂಡಿತ್ತು. ಶಟರ್‌ನಿಂದ ಹೊರಬರಲು ಹಾವು ತುಂಬಾ ಪ್ರಯತ್ನಿಸಿದರೂ ಹೊರಬರಲು ಸಾಧ್ಯವಾಗಲಿಲ್ಲ. ಅದರ ದೇಹವು ಗಾಯಗೊಂಡು ಸ್ವಲ್ಪ ಸಮಯದವರೆಗೆ ಚಲನರಹಿತವಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದರು. ಘಟನೆಯ ಸ್ಥಳಕ್ಕೆ ತಕ್ಷಣ ತಲುಪಿದ ಹಾವು ಹಿಡಿಯುವ ವೆಂಕಟೇಶ್ ಬಹಳ ಚಾಣಾಕ್ಷತನದಿಂದ ಹಾವನ್ನು ಶಟರ್‌ನಿಂದ ಹೊರತೆಗೆದರು. ಗಾಯಗೊಂಡಿದ್ದ ಹಾವನ್ನು ವೆಂಕಟೇಶ್ ತಕ್ಷಣ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪಶುವೈದ್ಯ ಡಾ. ಶಿವ ಹಾವನ್ನು ಪರೀಕ್ಷಿಸಿ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ನಂತರ ಆ ಹಾವನ್ನು ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ