ಭಾರಿ ಅಪಾಯದಿಂದ 20ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್​! ವಿಡಿಯೋ ನೋಡಿ

Edited By:

Updated on: May 02, 2024 | 3:11 PM

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ಬಳಿ ಘಟನೆ ನಡೆದಿದೆ. ಆನೇಕಲ್ ಘಟಕಕ್ಕೆ ಸೇರಿದ KA 42-F - 519 ಕೆ.ಎಸ್.ಆರ್.ಟಿ.ಸಿ ಬಸ್​ ಇದಾಗಿದೆ. ಆನೇಕಲ್ ಕಡೆಯಿಂದ ಸಮಂದೂರು ಮಾರ್ಗವಾಗಿ ಹೊರಟಿತ್ತು. ಈ ವೇಳೆ ಸಮಂದೂರು ಸಮೀಪ ಚಲಿಸುತ್ತಿರುವಾಗಲೇ ಏಕಾಏಕಿ ಬಸ್ ಟೈರ್​ಗಳು ಕಳಚಿಕೊಂಡಿವೆ.

ಆನೇಕಲ್, ಮೇ 2: ಚಲಿಸುತ್ತಿದ್ದ ಬಸ್​ನಿಂದ ಚಕ್ರಗಳು ಕಳಚಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಾರಿ ಅನಾಹುತ ತಪ್ಪಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ಬಳಿ ಘಟನೆ ನಡೆದಿದೆ. ಆನೇಕಲ್ (Anekal) ಘಟಕಕ್ಕೆ ಸೇರಿದ KA 42-F – 519 ಕೆ.ಎಸ್.ಆರ್.ಟಿ.ಸಿ ಬಸ್​ (KSRTC BUS) ಇದಾಗಿದೆ. ಆನೇಕಲ್ ಕಡೆಯಿಂದ ಸಮಂದೂರು ಮಾರ್ಗವಾಗಿ ಹೊರಟಿತ್ತು. ಈ ವೇಳೆ ಸಮಂದೂರು ಸಮೀಪ ಚಲಿಸುತ್ತಿರುವಾಗಲೇ ಏಕಾಏಕಿ ಬಸ್ ಟೈರ್​ಗಳು ಕಳಚಿಕೊಂಡಿವೆ. ಸುಮಾರು ಇಪ್ಪತ್ತಕ್ಕೂ ಅಧಿಕ ಜನರು ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಇತ್ತ ಟೈರ್​ಗಳು ಕಳಚುತ್ತಿದ್ದಂತೆ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಬಸ್​ಗಳ ಕಂಡೀಷನ್ ಸರಿ ಇಲ್ಲದೆ ಇದ್ದರೂ ರೂಟ್​​ಗಳಿಗೆ ಅಧಿಕಾರಿಗಳು ಕಳಿಸುತ್ತಾರೆ. ಡಿಪೋ ಅಧಿಕಾರಿಗಳ ಬೇಜಾವಬ್ದಾರಿ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕರ ಜೀವಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Ramu Ram

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More