AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಪಿಠೋಪಕರಣಗಳ ವ್ಯವಸ್ಥೆ ಮಾಡಿ: ಹೆಚ್​ಡಿ ರೇವಣ್ಣ

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಪಿಠೋಪಕರಣಗಳ ವ್ಯವಸ್ಥೆ ಮಾಡಿ: ಹೆಚ್​ಡಿ ರೇವಣ್ಣ

TV9 Web
| Updated By: preethi shettigar

Updated on:Dec 22, 2021 | 9:05 AM

ಹಾಸನದಲ್ಲಿನ ಇಂಜಿನಿಯರಿಂಗ್​ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿ ಪಿಠೋಪಕರಣ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುವಂತೆ ಹೆಚ್.​ಡಿ. ರೇವಣ್ಣ ಮನವಿ ಮಾಡಿದ್ದಾರೆ.

ಬೆಳಗಾವಿ: ಸದನದಲ್ಲಿ ನಿನ್ನೆ (ಡಿಸೆಂಬರ್​ 21) ಹೆಚ್​.ಡಿ. ರೇವಣ್ಣ ಅವರು ಸರ್ಕಾರಿ ಇಂಜಿನಿಯರಿಂಗ್​ ಕಾಲೇಜುಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹಾಸನದಲ್ಲಿನ ಇಂಜಿನಿಯರಿಂಗ್​ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿ ಪಿಠೋಪಕರಣ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಉಪನ್ಯಾಸಕರ ಹುದ್ದೆ ಕೂಡ ಇಲ್ಲಿ ಖಾಲಿ ಇದ್ದು, ಅತಿಥಿ ಉಪನ್ಯಾಸಕರು ಸಂಪೂರ್ಣವಾಗಿ ಇಲ್ಲದಂತಾಗಿದೆ. ಹೀಗಾಗಿ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರಿ ಶಾಲಾ- ಕಾಲೇಜುಳಿಗೆ ಲಾಕ್​ಡೌನ್​ ನಂತರ ಮಕ್ಕಳ ಒಲವು ಹೆಚ್ಚಾಗಿದೆ ಎಂದು ಕೂಡ ಹೆಚ್​.ಡಿ ರೇವಣ್ಣ ಈ ವೇಳೆ ಪ್ರಸ್ತಾಪಿಸಿದ್ದಾರೆ.

ಮತಾಂತರ ಕಾಯ್ದೆ ಮಂಡನೆ
ಬೆಳಗಾವಿ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಬಿಜೆಪಿ ಸರ್ಕಾರ ಮತಾಂತರ ಕಾಯ್ದೆ 2021 ತಿದ್ದುಪಡೆ ಮಸೂದೆಯನ್ನ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಬಗ್ಗೆ ವಿರೋಧ ಪಕ್ಷಗಳ ಪ್ರತಿರೋಧವಿದ್ದರೂ ಆಡಳಿತ ಪಕ್ಷ ಮಸೂದೆಯನ್ನ ಮಂಡಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:
ರೇಪ್ ಆಸ್ವಾದಿಸುವ ಹೇಳಿಕೆ: ಡಬಲ್​ ಫಾಲ್ಟ್ ಮಾಡಿದ ಮಾಜಿ ಸ್ಪೀಕರ್​ ರಮೇಶ್‌ ಕುಮಾರ್ ಇಂದು ಬೆಳಗಾವಿಯಲ್ಲಿ ಹೇಳಿದ್ದೇನು?

ಎಂಇಎಸ್​ ಪುಂಡಾಟಿಕೆ: ಸುವರ್ಣ ಸೌಧದಲ್ಲಿ ಮುಟ್ಠಾಳರು ಕುಳಿತಿದ್ದಾರೆ ಎಂದ ಕರವೇ ಅಧ್ಯಕ್ಷ ನಾರಾಯಣಗೌಡ ಬೆಳಗಾವಿ ಪೊಲೀಸರ ವಶಕ್ಕೆ

 

Published on: Dec 22, 2021 08:54 AM