ಚೈತ್ರಾ ಕುಂದಾಪುರ ಬಗ್ಗೆ ವಿನಯ್ ಗುರೂಜಿ ಜೊತೆ ಗೋವಿಂದ ಬಾಬು ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಬಯಲು!

ಚೈತ್ರಾ ಕುಂದಾಪುರ ಬಗ್ಗೆ ವಿನಯ್ ಗುರೂಜಿ ಜೊತೆ ಗೋವಿಂದ ಬಾಬು ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಬಯಲು!
|

Updated on: Sep 16, 2023 | 12:36 PM

ಗೋವಿಂದ ಬಾಬು ಹೇಳುತ್ತಿರುವ ‘ಅವರು’ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಆದರೆ ಒಂದು ಮಾತು ಸ್ಪಷ್ಟವಾಗುತ್ತದೆ. ಗೋವಿಂದ ಬಾಬುರನ್ನು ವಂಚಿಸಲು ಚೈತ್ರಾ ಗಣ್ಯರೊಬ್ಬರ ಹೆಸರು ಬಳಸಿದ್ದಾಳೆ ಮತ್ತು ವಿಚಾರಣೆ ಸಮಯದಲ್ಲಿ ಗೋವಿಂದ ಗಣ್ಯರ ಹೆಸರನ್ನು ಪೊಲೀಸರಿಗೆ ತಿಳಿಸಿರುವ ಸಾಧ್ಯತೆ ಇದೆ.

ಚಿಕ್ಕಮಗಳೂರು: ಚೈತ್ರಾ ಕುಂದಾಪರ ವಂಚನೆ ಪ್ರಕರಣದಲ್ಲಿ (Chaitra Kundapura fraud case) ಚಿಕ್ಕಮಗಳೂರು ಜಿಲ್ಲೆಯ ಪ್ರಸ್ತಾಪ ಜಾಸ್ತಿಯಾಗುತ್ತಿದೆ. ಇಲ್ಲೊಂದು ಬಹಿರಂಗಗೊಡಿರುವ ಆಡಿಯೋ ಕ್ಲಿಪ್ಪಿಂಗ್ ಇದೆ. ಚೈತ್ರಾಳಿಂದ ವಂಚನೆಗೊಳಗಾಗಿರುವ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) ಮತ್ತು ವಿನಯ್ ಗುರೂಜಿ ಗೌರಿಗದ್ದೆ (Vinay Guriju Gowrigadde) ನಡುವೆ ನಡೆದಿರುವ ಸಂಬಾಷಣೆ ಇದು. ಅಸಲಿಗೆ ಇದು ಕೇವಲ 10-12 ಸೆಕೆಂಡುಗಳ ವಿಡಿಯೋ. ಗೋವಿಂದ ಬಾಬು, ಚೈತ್ರಾಗೆ (ಅಥವಾ ಚೈತ್ರಾ ಬಗ್ಗೆ) ಜಾಗ್ರತೆಯಿಂದ ಇರಲು ತಿಳಿಸುವಂತೆ ಗುರೂಜಿಗೆ ಹೇಳುತ್ತಿದ್ದಾರೆ. ‘ಅವರ’ ಹೆಸರಲ್ಲಿ ಬೇರೆಯವರಿಗೂ ಮೋಸ ಮಾಡಬಹುದು, ನನಗಂತೂ ಬಹಳ ದೊಡ್ಡ ಮೋಸ ಮಾಡಿದ್ದಾಳೆ ಎಂದು ಅವರು ಗುರೂಜಿಗೆ ಹೇಳುತ್ತಿದ್ದಾರೆ. ಗೋವಿಂದ ಬಾಬು ಹೇಳುತ್ತಿರುವ ‘ಅವರು’ ಯಾರು ಅನ್ನೋದು ಗೊತ್ತಾಗುತ್ತಿಲ್ಲ. ಆದರೆ ಒಂದು ಮಾತು ಸ್ಪಷ್ಟವಾಗುತ್ತದೆ. ಗೋವಿಂದ ಬಾಬುರನ್ನು ವಂಚಿಸಲು ಚೈತ್ರಾ ಗಣ್ಯರೊಬ್ಬರ ಹೆಸರು ಬಳಸಿದ್ದಾಳೆ ಮತ್ತು ವಿಚಾರಣೆ ಸಮಯದಲ್ಲಿ ಗೋವಿಂದ ಗಣ್ಯರ ಹೆಸರನ್ನು ಪೊಲೀಸರಿಗೆ ತಿಳಿಸಿರುವ ಸಾಧ್ಯತೆ ಇದೆ. ಗೋವಿಂದ ಬಾಬು ಹೇಳೋದನ್ನು ಕೇಳಿದರೆ, ಪ್ರಕರಣದಲ್ಲಿ ಗಣ್ಯರ ಪಾಲೇನೂ ಇಲ್ಲ, ಚೈತ್ರಾ ಜನರನ್ನು ವಂಚಿಸಲು ಅವರ ಹೆಸರು ಬಳಿಸಿಕೊಂಡಿದ್ದಾಳೆ, ಅಂತ ಸ್ಪಷ್ಟವಾಗುತ್ತದೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ