ದುರಂಹಕಾರದಿಂದ ವಿಶ್ವಕಪ್ ಮೇಲೆ ಕಾಲಿಟ್ಟು ಕೂತ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ನೆಟ್ಟಿಗರಿಂದ ಉಗಿಸಿಕೊಂಡ!

ದುರಂಹಕಾರದಿಂದ ವಿಶ್ವಕಪ್ ಮೇಲೆ ಕಾಲಿಟ್ಟು ಕೂತ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ನೆಟ್ಟಿಗರಿಂದ ಉಗಿಸಿಕೊಂಡ!
|

Updated on:Nov 20, 2023 | 7:39 PM

ಇವನು ಕ್ರಿಕೆಟ್ ಕುಟುಂಬದಲ್ಲಿ ಬೆಳೆದವನು ಮಾರಾಯ್ರೇ. ಅಪ್ಪ ಜೆಫ್ ಮಾರ್ಷ್ 80 ರ ದಶಕದಲ್ಲಿ ಟೀಮ್ ಆಸ್ಟ್ರೇಲಿಯದ ಆರಂಭ ಆಟಗಾರರಾಗಿದ್ದರು. ಮಿಚೆಲ್ ಅಣ್ಣ ಶಾನ್ ಮಾರ್ಷ್ ಸಹ ಆಸ್ಟ್ರೇಲಿಯ ತಂಡ ಮತ್ತು 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೇರೆ ಬೇರೆ ತಂಡಗಳಿಗೆ ಆಡಿದ್ದರು.

ಅಹಮದಾಬಾದ್: ದುರಹಂಕಾರದ ಪರಾಮಾವಧಿ ಅಂದರೆ ಇದೇ ಇರಬೇಕು. ಚಿತ್ರದಲ್ಲಿ ಕಾಣುತ್ತಿರೋನು ನಿನ್ನೆ ಭಾರತವನ್ನು ಸಿಡಬ್ಲ್ಯೂಸಿ 2023 ಪೈನಲ್ ನಲ್ಲಿ (CWC 2023) ಅತಿಥೇಯ ಭಾರತವನ್ನು ಸೋಲಿಸಿ 6 ನೇ ಬಾರಿಗೆ ಚಾಂಪಿಯನ್ ಪಟ್ಟ ಧರಿಸಿದ ಆಸ್ಟ್ರೇಲಿಯ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh). ಅವನು ಕುಳಿತಿರುವ ಭಂಗಿಗೆ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಈ ಕಪ್ ಗೆಲ್ಲುವುದಕ್ಕೆ ಆಸ್ಟ್ರೇಲಿಯ, ಭಾರತ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸಿದ ಉಳಿದ ರಾಷ್ಟ್ರೀಯ ತಂಡಗಳೆಲ್ಲ ಬೆವರು ಮತ್ತು ರಕ್ತ ಸುರಿಸಿದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಉದ್ಧಟ ಮತ್ತು ದುರಹಂಕಾರದ ಆಟಗಾರ ಕಪ್ ಮೇಲೆ ಕಾಲಿಟ್ಟು ಕೂತಿದ್ದಾನೆ! ಇವನು ಕ್ರಿಕೆಟ್ ಕುಟುಂಬದಲ್ಲಿ ಬೆಳೆದವನು ಮಾರಾಯ್ರೇ. ಅಪ್ಪ ಜೆಫ್ ಮಾರ್ಷ್ (Geoff Marsh) 80 ರ ದಶಕದಲ್ಲಿ ಟೀಮ್ ಆಸ್ಟ್ರೇಲಿಯದ ಆರಂಭ ಆಟಗಾರರಾಗಿದ್ದರು. ಮಿಚೆಲ್ ಅಣ್ಣ ಶಾನ್ ಮಾರ್ಷ್ (Shaun Marsh) ಸಹ ಆಸ್ಟ್ರೇಲಿಯ ತಂಡ ಮತ್ತು 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೇರೆ ಬೇರೆ ತಂಡಗಳಿಗೆ ಆಡಿದ್ದರು.

ಇವರಿಬ್ಬರು ಸದ್ಗೃಹಸ್ಥರಾಗಿದ್ದರೆ ಮಿಚೆಲ್ ಮಾತ್ರ ಹೀಗೆ ಅವಿವೇಕಿಯಂತೆ ವರ್ತಿಸಿದ್ದಾನೆ. ಅವನ ಕೈಯಲ್ಲಿ ಮದ್ಯ ತುಂಬಿದ ಗ್ಲಾಸ್ ಬೇರೆ ಇದೆ. ನಶೆಯಲ್ಲಿ ಹೀಗಾಡಿದನೆ? ಹಾಗಿದ್ದರೂ ಅದು ತಪ್ಪೇ. ಇವನ ಭಂಗಿಯನ್ನು ನೋಡಿದರೆ 2016 ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬ್ಯಾಟರ್ ಮರ್ಲೋನ್ ಸ್ಯಾಮುಯೆಲ್ಸ್ ನೆನಪಾಗುತ್ತಾನೆ. ಅವನು ಪೈನಲ್ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ತನ್ನೆರಡೂ ಪಾದಗಳನ್ನು ಮಾಧ್ಯಮದವರು ಮೈಕ್ ಗಳನ್ನಿಟ್ಟಿದ್ದ ಟೇಬಲ್ ಮೇಲಿಟ್ಟು ಮಾತಾಡಿದ್ದ! ಬಿಡಿ ಎಲ್ಲ ಆಟಗಾರರು ಈ ವಿವೇಕಹೀನರಂತೆ ವರ್ತಿಸಲಾರರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Mon, 20 November 23

Follow us
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ