AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಂಟ್ ಜಾನ್ಸ್​ನಲ್ಲಿ ಅಮಾನವೀಯತೆ: ತಂದೆ ಶವಕ್ಕಾಗಿ 2 ದಿನದಿಂದ ಮಗಳ ಶೋಕ

[lazy-load-videos-and-sticky-control id=”W4-aTSZ-vm0″] ಬೆಂಗಳೂರು: ಸರ್ಕಾರ ಹೇಳ್ತಾನೆ ಇದೆ.. ಜನ ಕೇಳ್ತಾನೆ ಇದ್ದಾರೆ.. ಆದ್ರೆ ಖಾಸಗಿ ಆಸ್ಪತ್ರೆಗಳ ಅಟ್ಟಹಾಸಕ್ಕೆ ಬ್ರೇಕ್ ಬೀಳ್ತಾನೆ ಇಲ್ಲ. ತಿಗಣೆಗಳು ರಕ್ತ ಹೀರಿದ ಹಾಗೆ ಖಾಸಗಿ ಆಸ್ಪತ್ರೆಗಳು ಜನರ ರಕ್ತವನ್ನ ಹೀರುತ್ತಿವೆ. ಅದರಲ್ಲೂ ಕೊರೊನಾ ಬಂದಿರೋದು ಆಸ್ಪತ್ರೆಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿದೆ. ಮಾನವೀಯತೆ ಮರೆತು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ! ಹಣ ಕೊಟ್ಟು ಶವ ತೆಗೆದುಕೊಂಡು ಹೋಗಿ ಎಂದು ಪಟ್ಟು! ಜುಲೈ 22ರಂದು 46 ವರ್ಷದ ಬೇಗೂರು ನಿವಾಸಿ ಕಿಡ್ನಿ ಸಮಸ್ಯೆ ಅಂತ […]

ಸೇಂಟ್ ಜಾನ್ಸ್​ನಲ್ಲಿ ಅಮಾನವೀಯತೆ: ತಂದೆ ಶವಕ್ಕಾಗಿ 2 ದಿನದಿಂದ ಮಗಳ ಶೋಕ
ಆಯೇಷಾ ಬಾನು
| Edited By: |

Updated on:Aug 03, 2020 | 4:11 PM

Share

[lazy-load-videos-and-sticky-control id=”W4-aTSZ-vm0″]

ಬೆಂಗಳೂರು: ಸರ್ಕಾರ ಹೇಳ್ತಾನೆ ಇದೆ.. ಜನ ಕೇಳ್ತಾನೆ ಇದ್ದಾರೆ.. ಆದ್ರೆ ಖಾಸಗಿ ಆಸ್ಪತ್ರೆಗಳ ಅಟ್ಟಹಾಸಕ್ಕೆ ಬ್ರೇಕ್ ಬೀಳ್ತಾನೆ ಇಲ್ಲ. ತಿಗಣೆಗಳು ರಕ್ತ ಹೀರಿದ ಹಾಗೆ ಖಾಸಗಿ ಆಸ್ಪತ್ರೆಗಳು ಜನರ ರಕ್ತವನ್ನ ಹೀರುತ್ತಿವೆ. ಅದರಲ್ಲೂ ಕೊರೊನಾ ಬಂದಿರೋದು ಆಸ್ಪತ್ರೆಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿದೆ. ಮಾನವೀಯತೆ ಮರೆತು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ!

ಹಣ ಕೊಟ್ಟು ಶವ ತೆಗೆದುಕೊಂಡು ಹೋಗಿ ಎಂದು ಪಟ್ಟು! ಜುಲೈ 22ರಂದು 46 ವರ್ಷದ ಬೇಗೂರು ನಿವಾಸಿ ಕಿಡ್ನಿ ಸಮಸ್ಯೆ ಅಂತ ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ನಂತರ ಜುಲೈ 25 ರಂದು ಕೊರೊನಾ ಪಾಸಿಟಿವ್ ಅಂತ ಆಸ್ಪತ್ರೆಯವರು ರಿಪೋರ್ಟ್ ನೀಡಿದ್ದಾರೆ. ಆ ನಂತರ ರೋಗಿಗೆ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ.

ಹೀಗಾಗಿ ಅವರನ್ನು ಐಸಿಯು ವಾರ್ಡ್​ಗೆ ಶಿಫ್ಟ್ ಮಾಡಬೇಕು. ಐಸಿಯುಗೆ ಶಿಫ್ಟ್​ ಮಾಡಬೇಕಾದ್ರೆ ಹಣ ಕಟ್ಟಿ ಅಂತಾ ಆಸ್ಪತ್ರೆ ಸಿಬ್ಬಂದಿ ಹೇಳಿದ್ರಂತೆ. ಮೊನ್ನೆ ಸಂಬಂಧಿಕರು 1 ಲಕ್ಷ 30 ಸಾವಿರ ರೂಪಾಯಿ ಬಿಲ್ ಕಟ್ಟಿದ್ದಾರೆ. ಆದ್ರೆ ಮೊನ್ನೆ ಮಧ್ಯಾಹ್ನ ಮೂರೂವರೆಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.

ಬಿಲ್ ಪಾವತಿಸಿ ನಿಮ್ಮಪ್ಪನ ಶವ ಪಡೆಯಿರಿ ಇನ್ನು ಅಪ್ಪ ಸತ್ತ ದುಃಖದಲ್ಲಿದ್ದ ಮಗಳಿಗೆ ಆಸ್ಪತ್ರೆಯವರು ಮತ್ತೊಂದು ಶಾಕ್ ನೀಡಿದ್ದಾರೆ. ಮೂರು ಲಕ್ಷ ಅರವತ್ತು ಸಾವಿರ ರೂಪಾಯಿ ಹಣ ಕಟ್ಟಿ, ಮೃತದೇಹ ತೆಗೆದುಕೊಂಡು ಹೋಗಿ ಅಂತ ಆಸ್ಪತ್ರೆಯವರು ಹೇಳ್ತಿದ್ದಾರಂತೆ. ಆದ್ರೆ ನಮ್ಮ ಬಳಿ 3 ಲಕ್ಷ 60 ಸಾವಿರ ಹಣವಿಲ್ಲವೆಂದು ಮೃತನ ಪುತ್ರಿ ಕಣ್ಣೀರು ಹಾಕಿದ್ದಾರೆ. ಎಷ್ಟೇ ಗೋಗರೆದ್ರೂ ಆಸ್ಪತ್ರೆ ಸಿಬ್ಬಂದಿ ಕರುಣೆ ತೋರಿಲ್ಲ.

ಹಣ ಕಟ್ಟುವವರೆಗೆ ಮೃತ ದೇಹ ಕೊಡಲ್ಲ ಅಂತ ಹೇಳ್ತಿದ್ದಾರಂತೆ. ಹಣ ಕಟ್ಟಿಲ್ಲ ಅಂದರೆ ನಾವೇ ಅಂತ್ಯಸಂಸ್ಕಾರ ಮಾಡ್ತೀವಿ ಅಂತ ಆಸ್ಪತ್ರೆಯವರು ಹೇಳ್ತಿದ್ದಾರಂತೆ. ಮೊನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೆ ಮಗಳಿಗೆ ಅಪ್ಪನ ಮುಖ ತೋರಿಸಿಲ್ಲ. ಮೃತ ದೇಹವನ್ನು ಹಸ್ತಾಂತರಿಸಿಲ್ಲ.

ಹೀಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯ ಎದುರೇ ಮೃತನ ಪುತ್ರಿ ಕಣ್ಣೀರು ಹಾಕುತ್ತಾ ಅಪ್ಪನ ಶವಕ್ಕಾಗಿ ಕಾಯುತ್ತಿದ್ದಾಳೆ. ಈ ಬಗ್ಗೆ ಟಿವಿ9 ಕೂಡ ವರದಿ ಮಾಡಿತ್ತು. ಸಚಿವ ಸುಧಾಕರ್ ಕೂಡ ನಮ್ಮ ಅಧಿಕಾರಿಗಳನ್ನು ಕಳಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ರು. ಆದರೆ ಇಲ್ಲಿಯವರೆಗೆ ಮಗಳಿಗೆ ತಂದೆಯ ಬಾಡಿಯನ್ನು ಹಸ್ತಾಂತರ ಮಾಡಿಲ್ಲ.

Published On - 1:04 pm, Mon, 3 August 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ದೆಹಲಿಗೆ ಹಾರಿದ ಸಚಿವಾಕಾಂಕ್ಷಿಗಳು: ಯಾರೆಲ್ಲ ಪ್ರಯಾಣ?
ದೆಹಲಿಗೆ ಹಾರಿದ ಸಚಿವಾಕಾಂಕ್ಷಿಗಳು: ಯಾರೆಲ್ಲ ಪ್ರಯಾಣ?