AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಅಡ್ಜಸ್ಟ್ ಮೆಂಟ್ ಮಾಡಿಕೊಂಡಿಲ್ಲ: ಸದನದಲ್ಲೇ ಅಶೋಕ್​ಗೆ ಯತ್ನಾಳ್ ಕ್ಲಾಸ್

ನಾನು ಅಡ್ಜಸ್ಟ್ ಮೆಂಟ್ ಮಾಡಿಕೊಂಡಿಲ್ಲ: ಸದನದಲ್ಲೇ ಅಶೋಕ್​ಗೆ ಯತ್ನಾಳ್ ಕ್ಲಾಸ್

ರಮೇಶ್ ಬಿ. ಜವಳಗೇರಾ
|

Updated on: Jul 18, 2024 | 4:40 PM

ಕರ್ನಾಟಕ ವಾಲ್ಮೀಕಿ ಹಗರಣದ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದು, ಈ ಬಗ್ಗೆ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇದರ ಮಧ್ಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಮೊದಲ ಸಿದ್ದದರಾಮಯ್ಯನವರು ಆಗಿರಬೇಕು. ಮಂತ್ರಿಗಳನ್ನು ಹಿಡಿತದಲ್ಲಿಡಬೇಕು ಅಂತೆಲ್ಲಾ ಸಿದ್ದರಾಮಯ್ಯ ಅವರ ಬಗ್ಗೆ ಸ್ವಲ್ಪ ಸಾಫ್ಟ್​ ಆಗಿ ಮಾತನಾಡಿದ್ದರು. ಈ ಬಗ್ಗೆ ಅಶೋಕ್ ಮತ್ತು ಬಸನಗೌಡ ಪಾಟೀಲ್​ ಯತ್ನಾಳ್ ನಡುವೆ ವಾಕ್ಸಮರ ನಡೆದರುವ ಪ್ರಸಂಗ ನಡೆದಿದೆ.

ಬೆಂಗಳೂರು, (ಜುಲೈ 18): ಇಂದು ಸಹ ವಿಧಾನಸಭಾ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ಗದ್ದಲ ನಡೆದಿದ್ದು, ಪ್ರತಿಕ್ಷಗಳ ಎಲ್ಲಾ ಎಲ್ಲಾ ಆರೋಪ=ಪ್ರತ್ಯಾರೋಪಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸುತ್ತಿದ್ದಾರೆ. ಇದರ ಮಧ್ಯ ಪ್ರತಿಪಕ್ಷದ ನಾಯಕ ಅಶೋಕ್ ಅವರು ಎದ್ದು, ಯತ್ನಾಳ್ ನಿನ್ನೆ (ಜುಲೈ 17) ಸಿಎಂ ಸಿದ್ದರಾಮಯ್ಯನವರನ್ನು ತುಂಬಾ ಹೊಗಳಿದ್ದಾರೆ ಎಂದರು. ಕೂಡಲೇ ಮಧ್ಯ ಪ್ರವೇಶಿಸಿದ ಯತ್ನಾಳ್, ನೀವು ಇಲ್ಲದ ಬಣ್ಣ ಹಚ್ಚಲು ಹೋಗಬೇಡಿ. ನಾನು ಸಿದ್ದರಾಮಯ್ಯರನ್ನು ಹೊಗಳಿಲ್ಲ, ಅವರ ಕಚೇರಿಗೂ ಹೋಗಿಲ್ಲ. ನೀವು ಹೀಗೆ ಫುಲ್​ಟಾಸ್​​ ಹಾಕಿದರೆ ಯತ್ನಾಳ್​ಗೆ ಏನೂ ಆಗಲ್ಲ. ನಾನು ಯಾವುದೇ ಅಡ್ಜೆಸ್ಟ್​ಮೆಂಟ್ ಮಾಡಿಕೊಂಡಿಲ್ಲ ಎಂದು ಟಾಂಗ್ ಕೊಟ್ಟರು. ಅಲ್ಲದೇ ಪರೋಕ್ಷವಾಗಿ ಸದನದಲ್ಲೇ ಅಶೋಕ್​ಗೆ ಮುಜುಗರವಾಗುವಂತೆ ತಿರುಗೇಟು ನೀಡಿದ್ದಾರೆ.