ಬೆಂಗಳೂರು, (ಜುಲೈ 18): ಇಂದು ಸಹ ವಿಧಾನಸಭಾ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ಗದ್ದಲ ನಡೆದಿದ್ದು, ಪ್ರತಿಕ್ಷಗಳ ಎಲ್ಲಾ ಎಲ್ಲಾ ಆರೋಪ=ಪ್ರತ್ಯಾರೋಪಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸುತ್ತಿದ್ದಾರೆ. ಇದರ ಮಧ್ಯ ಪ್ರತಿಪಕ್ಷದ ನಾಯಕ ಅಶೋಕ್ ಅವರು ಎದ್ದು, ಯತ್ನಾಳ್ ನಿನ್ನೆ (ಜುಲೈ 17) ಸಿಎಂ ಸಿದ್ದರಾಮಯ್ಯನವರನ್ನು ತುಂಬಾ ಹೊಗಳಿದ್ದಾರೆ ಎಂದರು. ಕೂಡಲೇ ಮಧ್ಯ ಪ್ರವೇಶಿಸಿದ ಯತ್ನಾಳ್, ನೀವು ಇಲ್ಲದ ಬಣ್ಣ ಹಚ್ಚಲು ಹೋಗಬೇಡಿ. ನಾನು ಸಿದ್ದರಾಮಯ್ಯರನ್ನು ಹೊಗಳಿಲ್ಲ, ಅವರ ಕಚೇರಿಗೂ ಹೋಗಿಲ್ಲ. ನೀವು ಹೀಗೆ ಫುಲ್ಟಾಸ್ ಹಾಕಿದರೆ ಯತ್ನಾಳ್ಗೆ ಏನೂ ಆಗಲ್ಲ. ನಾನು ಯಾವುದೇ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿಲ್ಲ ಎಂದು ಟಾಂಗ್ ಕೊಟ್ಟರು. ಅಲ್ಲದೇ ಪರೋಕ್ಷವಾಗಿ ಸದನದಲ್ಲೇ ಅಶೋಕ್ಗೆ ಮುಜುಗರವಾಗುವಂತೆ ತಿರುಗೇಟು ನೀಡಿದ್ದಾರೆ.