AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸನಗೌಡ ಯತ್ನಾಳ್ ಮಾಧ್ಯಮದೆದುರು ಪ್ರತ್ಯಕ್ಷರಾದರೂ ಶಿವಾನಂದ ಪಾಟೀಲ್​ರ ಸವಾಲು ಸ್ವೀಕರಿಸಲಿಲ್ಲ

ಬಸನಗೌಡ ಯತ್ನಾಳ್ ಮಾಧ್ಯಮದೆದುರು ಪ್ರತ್ಯಕ್ಷರಾದರೂ ಶಿವಾನಂದ ಪಾಟೀಲ್​ರ ಸವಾಲು ಸ್ವೀಕರಿಸಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: May 08, 2025 | 1:24 PM

ತಾನ್ಯಾಕೆ ರಾಜೀನಾಮೆ ಸಲ್ಲಿಸಬೇಕು ಎಂದು ಬಸನಗೌಡ ಯತ್ನಾಳ್ ತೀಕ್ಷ್ನವಾಗಿ ಪ್ರತಿಕ್ರಿಯಿಸಿದರು. ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದರೆ ತಾನೂ ನೀಡೋದಾಗಿ ಯಾವಾಗ ಹೇಳಿದ್ದೆ ಎಂದು ಯತ್ನಾಳ್ ಪ್ರಶ್ನಿಸಿದರು. ಆದರೆ ಯತ್ನಾಳ್, ರಾಜೀನಾಮೆ ಸಲ್ಲಿಸುವಂತೆ ಸವಾಲು ಹಾಕಿದ್ದರು, ಮತ್ತು ಶಿವಾನಂದ ಪಾಟೀಲ್ ವಿಜಯಪುರಕ್ಕೆ ಬರೋದು ಬೇಡ ತಾನೇ ಬಾಗೇವಾಡಿಗೆ ಹೋಗಿ ಶಿವಾನಂದರನ್ನು ಸೋಲಿಸುತ್ತೇನೆ ಎಂದಿದ್ದರು.

ಬೆಂಗಳೂರು, ಮೇ 8: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಕಡಿಮೆ ಒಂದು ವಾರದ ನಂತರ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು ಅದರೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ (Shivanand Patil) ಎಸೆದಿರುವ ಸವಾಲು ಸ್ವೀಕರಿಸುವ ಬದಲು ಶಿವಾನಂದ್ ಗೆ ಕಾಮನ ಸೆನ್ಸ್ ಇಲ್ಲ, ಗ್ರಾಮ ಪಂಚಾಯಿತಿ ಸದಸ್ಯನಿಗಿರುವಷ್ಟು ತಿಳುವಳಿಕೆ ಇಲ್ಲ, ರಾಜೀನಾಮೆ ಪತ್ರ ಯಾರಾದರೂ ಹಾಗೆ ಷರತ್ತುಬದ್ಧವಾಗಿ ಬರೆಯುತ್ತಾರೆಯೇ ಎಂದು ವಿತಂಡವಾದ ಮಾಡುತ್ತ ರಾಜೀನಾಮೆ ಪತ್ರ ಬರೆಯುವುದನ್ನು ಮತ್ತೊಮ್ಮೆ ವಿವರಿಸಿದರು. ಅವರು ಬ್ಲ್ಯಾಂಕ್ ಲೆಟರ್ ಹೆಡ್ ಕೊಡುತ್ತೇನೆ ಅಂತ ಹೇಳೋದ್ರಲ್ಲಿ ಅರ್ಥವಿಲ್ಲ, ಎಲ್ಲ ನಾಟಕ, ತಾನು ವಕ್ಫ್ ಬೋರ್ಡ್ ವಿರುದ್ಧ ನಡೆಸಿದ ಹೋರಾಟ ಸಫಲವಾಗಿದೆ, ಹಾಗಾಗಿ ಇದೆನ್ನೆಲ್ಲ ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:  ನನ್ನ ತಂದೆಯ ಸವಾಲನ್ನು ಯತ್ನಾಳ್ ಸ್ವೀಕರಿಸಲಿಲ್ಲವೆಂದು ನನ್ನ ಮಕ್ಕಳಿಗೆ ಹೇಳುತ್ತೇನೆ: ಶಿವಾನಂದ ಪಾಟೀಲ್ ಮಗ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ