AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ

ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ

ಮದನ್​ ಕುಮಾರ್​
|

Updated on: Oct 10, 2024 | 7:30 PM

Share

ನಟಿ ಐಶ್ವರ್ಯಾ ಅವರು ಇಷ್ಟು ದಿನಗಳ ಕಾಲ ಸ್ವರ್ಗದಲ್ಲಿ ಹಾಯಾಗಿ ಇದ್ದರು. ಆದರೆ ಈಗ ಅವರು ನರಕದ ಪಾಲಾಗಿದ್ದಾರೆ. ಈ ಶಿಕ್ಷೆಯಿಂದ ಅವರನ್ನು ತಪ್ಪಿಸಲು ಕ್ಯಾಪ್ಟನ್​ ಹಂಸಾ ಪ್ರಯತ್ನ ಮಾಡಿದರೂ ಕೂಡ ಅದಕ್ಕೆ ಬಿಗ್​ ಬಾಸ್​ ಅನುಮತಿ ನೀಡಲಿಲ್ಲ. ಕಡೆಗೂ ಐಶ್ವರ್ಯಾ ಅವರು ನರಕಕ್ಕೆ ಬರುವುದು ಅನಿವಾರ್ಯ ಆಯಿತು. ಇದರಿಂದಾಗಿ ಜಗದೀಶ್​ಗೆ ಸಖತ್​ ಖುಷಿ ಆಗಿದೆ.

ನರಕದಲ್ಲಿ ಕಾಲ ಕಳೆಯುವುದು ತುಂಬ ಕಷ್ಟ. ಅಲ್ಲಿ ಸ್ಪರ್ಧಿಗಳಿಗೆ ಸರಿಯಾದ ಊಟ ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ಐಶ್ವರ್ಯಾ ಅವರು ನರಕಕ್ಕೆ ಬರುವಂತಾಗಿದೆ. ಅವರಿಗೆ ಈ ಶಿಕ್ಷೆ ಸಿಕ್ಕಿದ್ದಕ್ಕೆ ಜಗದೀಶ್​ ತುಂಬಾ ಖುಷಿಪಟ್ಟಿದ್ದಾರೆ. ಕ್ಯಾಪ್ಟನ್​ ಹಂಸಾ ಅವರು ಎರಡನೇ ವಾರ ಸಖತ್ ಕಷ್ಟಪಟ್ಟಿದ್ದಾರೆ. ಎಲ್ಲರ ನಿಷ್ಠುರಕ್ಕೂ ಅವರು ಕಾರಣ ಆಗಿದ್ದಾರೆ. ಅನೇಕ ಬಾರಿ ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More