AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಶ್ ಎದುರು ಮಾತಾಡಲು ಸಾಧ್ಯವಾಗದೇ ಸೋತ ಚೈತ್ರಾ ಕುಂದಾಪುರ; ಆಗಿದ್ದೇನು?

ಮಾತಿನ ಬಲದಿಂದ ಚೈತ್ರಾ ಕುಂದಾಪುರ ಅವರು ಇನ್ನುಳಿದ ಸ್ಪರ್ಧಿಗಳನ್ನು ಎದುರು ಹಾಕಿಕೊಳ್ಳುತ್ತಿದ್ದರು. ಆದರೆ ಅವರಿಗೆ ಜಗದೀಶ್​ ಟಕ್ಕರ್​ ಕೊಟ್ಟಿದ್ದಾರೆ. ತಮಗೆ ಸಲಹೆ ನೀಡಲು ಬಂದ ಚೈತ್ರಾಗೆ ಜಗದೀಶ್​ ತಿರುಗೇಟು ನೀಡಿದ್ದಾರೆ. ಇದರಿಂದಾಗಿ ಚೈತ್ರಾ ಮಾತು ನಿಲ್ಲಿಸುವುದು ಅನಿವಾರ್ಯ ಆಯಿತು. ಎರಡನೇ ವಾರದಲ್ಲಿ ಜಗದೀಶ್​ ಕೂಡ ನರಕದಲ್ಲಿ ವಾಸಿಸುತ್ತಿದ್ದಾರೆ.

ಜಗದೀಶ್ ಎದುರು ಮಾತಾಡಲು ಸಾಧ್ಯವಾಗದೇ ಸೋತ ಚೈತ್ರಾ ಕುಂದಾಪುರ; ಆಗಿದ್ದೇನು?
ಚೈತ್ರಾ ಕುಂದಾಪುರ, ಲಾಯರ್​ ಜಗದೀಶ್​
ಮದನ್​ ಕುಮಾರ್​
|

Updated on: Oct 09, 2024 | 10:32 PM

Share

ಮಾತಿನಿಂದಲೇ ಗುರುತಿಸಿಕೊಂಡವರು ಚೈತ್ರಾ ಕುಂದಾಪುರ. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಾತನಾಡಲು ಬರುತ್ತದೆ ಎಂಬ ಕಾರಣದಿಂದ ಚೈತ್ರಾ ಅವರು ಕೆಲವೊಮ್ಮೆ ಅನವಶ್ಯಕವಾಗಿ ಮಾತನಾಡಲು ಬರುತ್ತಾರೆ. ಇದರಿಂದ ಕೆಲವರಿಗೆ ಕಿರಿಕಿರಿ ಆಗಿದೆ. ಬಿಗ್​ ಬಾಸ್​ ಮನೆಯಲ್ಲಿ ಈ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಬುಧವಾರದ (ಅಕ್ಟೋಬರ್​ 9) ಎಪಿಸೋಡ್​ನಲ್ಲಿ ಜಗದೀಶ್​ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ಜಗದೀಶ್​ ಎದುರು ಮಾತನಾಡಲು ಸಾಧ್ಯವಾಗಲೇ ಚೈತ್ರಾ ಮಾತು ನಿಲ್ಲಿಸಿದರು.

ಸ್ವರ್ಗ ನಿವಾಸಿಗಳು ಮತ್ತು ನರಕವಾಸಿಗಳ ನಡುವೆ ಟಾಸ್ಕ್​ ನಡೆಯಿತು. ಮೊದಲ ಟಾಸ್ಕ್​ನಲ್ಲಿ ನರಕವಾಸಿಗಳು ಗೆದ್ದರು. ಈ ವೇಳೆ ನರಕವಾಸಿಗಳಲ್ಲಿ ಒಬ್ಬರಾದ ಜಗದೀಶ್ ಅವರು ಸಂಭ್ರಮಾಚರಣೆ ಮಾಡಿದರು. ‘ಈ ಸಲ ಕಮ್​ ನಮ್ದೇ’ ಎಂದು ಕೂಗಿದರು. ಆದರೆ ‘ಆ ಮಾತನ್ನು ಮಾತ್ರ ಹೇಳಬೇಡಿ’ ಎಂದು ಚೈತ್ರಾ ಕುಂದಾಪುರ ಹೇಳಿದರು. ಇದರಿಂದ ಜಗದೀಶ್​ ಅವರಿಗೆ ಕೋಪ ಬಂತು.

ಪ್ರತಿ ಬಾರಿ ‘ಈ ಸಲ ಕಪ್​ ನಮ್ದೇ’ ಎಂದಾಗಲೂ ಆರ್​ಸಿಬಿ ತಂಡಕ್ಕೆ ನಿರಾಸೆ ಆಗಿದ್ದು ಗೊತ್ತೇ ಇದೆ. ಅದೇ ಕಾರಣಕ್ಕಾಗಿ ಚೈತ್ರಾ ಕುಂದಾಪುರ ಅವರು ‘ಆ ಮಾತು ಹೇಳಬೇಡಿ’ ಎಂದು ಜಗದೀಶ್​ಗೆ ಹೇಳಿರಬಹುದು. ಆದರೆ ಅವರ ಸಲಹೆಯನ್ನು ಜಗದೀಶ್​ ಪಾಸಿಟಿವ್​ ಆಗಿ ತೆಗೆದುಕೊಳ್ಳಲಿಲ್ಲ. ಕೂಡಲೇ ಅವರು ಜಗಳಕ್ಕೆ ನಿಂತರು. ಜಗದೀಶ್​ ಅವರು ತಿರುಗೇಟು ನೀಡಿದ ರಭಸಕ್ಕೆ ಚೈತ್ರಾ ಸೈಲೆಂಟ್​ ಆದರು.

ಇದನ್ನೂ ಓದಿ: ‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ

‘ನೀವೇನು ನನ್ನ ಸಲಹೆಗಾರರ? ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ನಾನು ಹೇಗೆ ಮಾತನಾಡಬೇಕು ಅಂತ ನೀವು ಹೇಳಬೇಡಿ’ ಎಂದು ಜಗದೀಶ್​ ಅವರು ಚೈತ್ರಾಗೆ ಖಡಕ್​ ಆಗಿ ಹೇಳಿದ್ದಾರೆ. ‘ತಪ್ಪಾಯ್ತು ಕ್ಷಮಿಸಿ’ ಎಂದು ಚೈತ್ರಾ ಅವರು ಮಾತು ನಿಲ್ಲಿಸಿದರು. ಈ ಹಿಂದೆ ಬೇರೆ ಬೇರೆ ಸ್ಪರ್ಧಿಗಳ ಜೊತೆಯಲ್ಲಿ ಕೂಡ ಚೈತ್ರಾ ಜಗಳ ಮಾಡಿದ್ದರು. ಆದರೆ ಅವರ ಬಾಯಿ ಮುಚ್ಚಿಸಲು ಬಹುತೇಕರಿಗೆ ಸಾಧ್ಯವಾಗಿರಲಿಲ್ಲ. ಕಡೆಗೂ ಜಗದೀಶ್​ ಆ ಕೆಲಸ ಮಾಡಿದ್ದಾರೆ. ಇದೆಲ್ಲವೂ ಟಾಸ್ಕ್​ ನಡುವೆ ನಡೆದ ಚಕಮಕಿ ಆದ್ದರಿಂದ ವಾದ-ಪ್ರತಿವಾದ ಹೆಚ್ಚು ಮುಂದುವರಿಯಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ