AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ಯಾಪ್ಟನ್​ಗೆ ಮರ್ಯಾದೆ ಕೊಡಿ’: ಜಗದೀಶ್​ ಕಾಟದಿಂದ ಬೇಡಿಕೊಳ್ಳುವ ಸ್ಥಿತಿಗೆ ಬಂದ ಹಂಸಾ

ಸ್ವರ್ಗದಲ್ಲಿ ಇದ್ದಾಗ ಸಿಕ್ಕಾಪಟ್ಟೆ ಹಾರಾಡುತ್ತಿದ್ದ ಜಗದೀಶ್​ ಅವರು ನರಕಕ್ಕೆ ಬಂದರೂ ಬದಲಾಗಿಲ್ಲ. ನರಕದಲ್ಲಿಯೂ ಅವರು ಕಿರಿಕ್​ ಮಾಡುತ್ತಿದ್ದಾರೆ. ಕ್ಯಾಪ್ಟನ್​ ಆಗಿರುವ ಹಂಸಾಗೆ ಜಗದೀಶ್​ ಅವರನ್ನು ಸಹಿಸಿಕೊಳ್ಳುವುದು ಕಷ್ಟ ಆಗಿದೆ. ಉದ್ದೇಶಪೂರ್ವಕವಾಗಿಯೇ ಜಗದೀಶ್​ ಕಿರಿಕ್ ಮಾಡುತ್ತಿದ್ದಾರೆ. ಏಕವಚನದಲ್ಲೂ ಮಾತನಾಡಿ ಕೆಣಕುತ್ತಿದ್ದಾರೆ.

‘ಕ್ಯಾಪ್ಟನ್​ಗೆ ಮರ್ಯಾದೆ ಕೊಡಿ’: ಜಗದೀಶ್​ ಕಾಟದಿಂದ ಬೇಡಿಕೊಳ್ಳುವ ಸ್ಥಿತಿಗೆ ಬಂದ ಹಂಸಾ
ಜಗದೀಶ್​, ಹಂಸಾ
ಮದನ್​ ಕುಮಾರ್​
|

Updated on: Oct 08, 2024 | 10:48 PM

Share

ಬಿಗ್​ ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಅವರು ಗಲಾಟೆ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಂತಿದೆ. ಅದರಲ್ಲೂ ನಟಿ ಹಂಸಾ ಅವರನ್ನು ಜಗದೀಶ್​ ಟಾರ್ಗೆಟ್​ ಮಾಡಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಹಂಸಾಗೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ಬಿಗ್​ ಬಾಸ್​ ಮನೆಗೆ ಮೊದಲ ಕ್ಯಾಪ್ಟನ್​ ಆಗಿರುವ ಹಂಸಾ ಅವರಿಗೆ ಕಿರಿಕಿರಿ ಆಗುತ್ತಿದೆ. ಕ್ಯಾಪ್ಟನ್​ ಸ್ಥಾನಕ್ಕೂ ಗೌರವ ನೀಡಿದೇ ಜಗದೀಶ್​ ಅವರು ಕಾಟ ಕೊಡುತ್ತಿದ್ದಾರೆ. ಪ್ರತಿ ಹಂತದಲ್ಲೂ ಮಾತಿನ ಮೂಲಕ ತಿವಿಯುತ್ತಿದ್ದಾರೆ. ಅಲ್ಲದೇ ಬೇಕೆಂದೇ ಕೆಣಕುತ್ತಿದ್ದಾರೆ.

ಜಗದೀಶ್​ ಅವರು ಮೊದಲು ಸ್ವರ್ಗದಲ್ಲಿ ಇದ್ದರು. ಆದರೆ ಅವರಿಂದ ಸ್ವರ್ಗದ ಮಂದಿಗೆ ಒಂದಷ್ಟು ತೊಂದರೆ ಆಯಿತು. ಕ್ಯಾಪ್ಟನ್​ ಆದ ಹಂಸಾ ಅವರು ಎರಡನೇ ವಾರದಲ್ಲಿ ತಮ್ಮ ಅಧಿಕಾರವನ್ನು ಬಳಸಿ ಜಗದೀಶ್​ ಅವರನ್ನು ನರಕಕ್ಕೆ ಕಳಿಸಿದರು. ಆದ್ದರಿಂದ ಜಗದೀಶ್​ ಅವರಿಗೆ ಹಂಸಾ ಅವರನ್ನು ಕಂಡರೆ ಆಗುತ್ತಿಲ್ಲ. ಮಂಗಳವಾರದ (ಅ.8) ಸಂಚಿಕೆಯಲ್ಲಿ ಟೀ ತಂದುಕೊಂಡುವಂತೆ ಅವರು ತಾಕೀತು ಮಾಡಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೆ. ಇದರಿಂದ ಹಂಸಾಗೆ ಕೋಪ ಬಂದಿದೆ.

ಏಕವಚನದಲ್ಲಿ ಮಾತನಾಡಬೇಡಿ ಎಂದು ಹಂಸಾ ಅವರು ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡ ಜಗದೀಶ್​ ಬುದ್ಧಿ ಕಲಿತಿಲ್ಲ. ‘ದಯವಿಟ್ಟು ಕ್ಯಾಪ್ಟನ್​ಗೆ ಎಲ್ಲರೂ ಮರ್ಯಾದೆ ಕೊಡಿ’ ಎಂದು ಹಂಸಾ ಅವರು ಕೂಗಿ ಹೇಳಿದ್ದಾರೆ. ಹಾಗಿದ್ದರೂ ಜಗದೀಶ್​ ಅವರು ದಾರಿಗೆ ಬಂದಿಲ್ಲ. ಅದಕ್ಕೂ ಮುನ್ನ ಮಾತನಾಡುವಾಗ ‘ಹಂಸಾ ಅವರು ಮ್ಯಾಚ್ ಫಿಕ್ಸಿಂಗ್​ ಮಾಡುತ್ತಾರೆ’ ಎಂದು ಜಗದೀಶ್​ ಆರೋಪ ಹೊರಿಸಿದರು.

ಇದನ್ನೂ ಓದಿ: ‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​

ಕೆಲವೊಮ್ಮೆ ಕಿರಿಕ್ ಮಾಡುವ ಜಗದೀಶ್​ ಅವರು ಮರುಕ್ಷಣವೇ ಕಾಮಿಡಿ ಮಾಡುತ್ತಾರೆ. ಹಂಸಾ ಅವರನ್ನು ಪದೇಪದೇ ಗೋಳು ಹೊಯ್ದುಕೊಂಡ ಅವರು ನಂತರ ಅವರ ಜೊತೆಯೇ ಕಾಮಿಡಿ ಮಾಡುತ್ತಾ ಕಾಲ ಕಳೆದಿದ್ದಾರೆ. ಮೊದಲ ವಾರ ಜಗದೀಶ್​ ಅವರಿಗೆ ಸಿಕ್ಕಾಪಟ್ಟೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿತ್ತು. ಎರಡನೇ ವಾರದ ಕಾಂಟೆಂಟ್​ ಇನ್ನೂ ಖರಾಬ್​ ಆಗಿ ಇರಲಿದೆ ಎಂದು ಅವರು ಶಪಥ ಮಾಡಿದ್ದಾರೆ. ಅದಕ್ಕೆ ತಕ್ಕಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ. ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಎಲಿಮಿನೇಟ್​ ಆದರು. ಎರಡನೇ ವಾರಕ್ಕೆ ಯಾರು ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್