AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​

ಕ್ಯಾಪ್ಟನ್​ ಹಂಸಾ ಮೇಲೆ ಹಲವು ಜವಾಬ್ದಾರಿಗಳಿವೆ. ಆದರೆ ಅವರ ಕೆಲಸವನ್ನು ಕೆಡಿಸಲು ಜಗದೀಶ್​ ಪ್ರಯತ್ನಿಸುತ್ತಿದ್ದಾರೆ. ಬೇಕೆಂತಲೇ ಕೆಣಕುತ್ತಿದ್ದಾರೆ. ‘ಮಾತ್ರೆ ಬೇಕು, ಔಷದಿ ಬೇಕು, ಬೇರೆ ನೀರು ಬೇಕು. ಬಿಗ್ ಬಾಸ್​ಗೆ ಹೇಳಿ ತರಿಸಿಕೊಡಿ’ ಎಂದು ಇಲ್ಲಸಲ್ಲದ ಬೇಡಿಕೆಗಳನ್ನು ಇಡುತ್ತಿದ್ದಾರೆ. ಇದರಿಂದಾಗಿ ಹಂಸಾ ಅವರಿಗೆ ಬಿಗ್​ ಬಾಸ್​ನಲ್ಲಿ ಆಟವಾಡಲು ಅಡ್ಡಿ ಆಗುತ್ತಿದೆ.

‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​
ಜಗದೀಶ್​, ಹಂಸಾ
ಮದನ್​ ಕುಮಾರ್​
|

Updated on: Oct 08, 2024 | 3:42 PM

Share

ಹಂಸಾ ಮತ್ತು ಜಗದೀಶ್​ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಹಂಸಾ ಕ್ಯಾಪ್ಟನ್​ ಆಗಿದ್ದನ್ನು ಜಗದೀಶ್​ ಸಹಿಸುತ್ತಿಲ್ಲ. ಹಾಗಾಗಿ ಪ್ರತಿ ಹಂತದಲ್ಲೂ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಚುಚ್ಚು ಮಾತುಗಳಿಂದ ಹಂಸಾ ಅವರನ್ನು ಜಗದೀಶ್​ ನಿಂದಿಸುತ್ತಿದ್ದಾರೆ. ತಂತ್ರಗಾರಿಕೆ ಮಾಡಿ ಕ್ಯಾಪ್ಟನ್​ ಆಗಿದ್ದರಿಂದ ಹಂಸಾ ಕೂಡ ಯಾವುದೇ ತಿರುಗೇಟು ನೀಡಲಾಗದೇ ಸುಮ್ಮನಾಗಿದ್ದಾರೆ. ಬೇರೆ ಎಲ್ಲರಿಗಿಂತಲೂ ಹೆಚ್ಚಾಗಿ ಜಗದೀಶ್​ ಅವರು ಹಂಸಾ ಮೇಲೆ ಮಾತಿನ ದಾಳಿ ಮಾಡುತ್ತಿದ್ದಾರೆ. ಇತ್ತೀಚಿನ ಎಪಿಸೋಡ್​ನಲ್ಲಿ ಕಟು ಮಾತುಗಳಿಂದ ಅವರು ನಿಂದಿಸಿದ್ದಾರೆ.

‘ತಂತ್ರಗಾರಿಕೆ ಮಾಡಿಕೊಂಡು ಕ್ಯಾಪ್ಟನ್​ ಆಗಿದ್ದು ನನಗೂ ಶೋಭೆ ತಂದಿಲ್ಲ. ಆದರೆ ನಾನು ಅದನ್ನು ಈಗ ಬದಲಾಯಿಸುವ ಸಾಧ್ಯವಿಲ್ಲ’ ಎಂದು ಹೇಳುತ್ತಾ ಹಂಸಾ ಅವರು ಅಳಲು ಆರಂಭಿಸಿದರು. ಆಗ ಜಗದೀಶ್​ ಮಧ್ಯ ಬಂದು ಮಾತಿನ ದಾಳಿ ಮಾಡಿದರು. ‘ಡ್ರಾಮಾ ಮಾಡುವುದು ನಿಮ್ಮ ಗುಣ. ಕಣ್ಣೀರು ಯಾಕೆ ಹಾಕುತ್ತೀರಿ? ನೇರವಾಗಿ ನಡೆದುಕೊಳ್ಳಿ. ಯಾರಿಗೂ ನೀವು ನಿಯತ್ತಾಗಿಲ್ಲ. ನಿಮಗೆ ಸಹಾಯ ಮಾಡಿದವರಿಗೂ ನೀವು ನಿಯತ್ತಾಗಿಲ್ಲ. ನಮ್ಮ ಜೊತೆ ಅದನ್ನು ನೀವು ಸಾಬೀತು ಮಾಡಿದ್ದೀರಿ’ ಎಂದು ಜಗದೀಶ್​ ಹೀಯಾಳಿಸಿದರು.

‘ನಿಮ್ಮ ಸುಳ್ಳಿನ ಕಣ್ಣೀರು ಯಾರಿಗೆ ಬೇಕಾಗಿದೆ? ಬೆನ್ನಿಗೆ ಚೂರಿ ಹಾಕುವುದಕ್ಕೆ ಇನ್ನೊಂದು ಹೆಸರು ನೀವು. ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಕ್ಯಾಪ್ಟನ್​ ಆದವಳು. ನಿಮ್ಮನೇ ನೀವು ನಂಬುವುದಿಲ್ಲ. ನಿಮ್ಮ ಯೋಗ್ಯತೆಗೆ ಯಾರೂ ಬೆಂಬಲ ನೀಡುವುದಿಲ್ಲ. ನಾನು ಬೆಂಬಲಿಸಿದೆ. ಆ ಯೋಗ್ಯತೆಯನ್ನು ನೀವು ಉಳಿಸಿಕೊಳ್ಳಬೇಕಿತ್ತು’ ಎಂದಿದ್ದಾರೆ ಜಗದೀಶ್​.

ಇದನ್ನೂ ಓದಿ: ‘ನೀನು ಯಾವನೋ’ ಎಂದು ಕೂಗಿದ ಹಂಸಾ; ಇರುವ ಗೌರವವನ್ನೂ ಕಳೆದುಕೊಂಡ ಜಗದೀಶ್

‘ನೀವು ಭವ್ಯ ಬಳಿ ಸಲಹೆ ಪಡೆಯುತ್ತಿದ್ದೀರಿ. ಸಾಮರ್ಥ್ಯವೇ ಇಲ್ಲದೇ ನೀವು ಕ್ಯಾಪ್ಟನ್​ ಆಗಿದ್ದೀರಿ. ಬೇರೆಯವರ ಮಾತು ಕೇಳಿಬೇಡಿ. ನಿಮ್ಮ ಬುದ್ಧಿ ಎಷ್ಟಿದೆಯೋ ಅಷ್ಟು ಮಾತನಾಡಿ. ಬೇರೆಯವರ ವಿಚಾರ ನಮಗೆ ಬೇಕಾಗಿಲ್ಲ’ ಎಂದು ಜಗದೀಶ್​ ಕೂಗಾಡಿದ್ದಾರೆ. ತಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡಿಲ್ಲ ಎಂದು ಗೋಲ್ಡ್​ ಸುರೇಶ್ ಕೂಡ ಹಂಸಾ ವಿರುದ್ಧ ತಿರುಗಿಬಿದ್ದಿದ್ದಾರೆ. ‘ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲ. ಅವರು ಗೋಮುಖ ವ್ಯಾಘ್ರ’ ಎಂದು ಸುರೇಶ್​ ಹೇಳಿದ್ದಾರೆ. ಜಗದೀಶ್​ ಅವರನ್ನು ಹಂಸಾ ವಿರುದ್ಧ ಎತ್ತಿಕಟ್ಟುವ ಕೆಲಸವನ್ನೂ ಸುರೇಶ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ