ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ

|

Updated on: Oct 10, 2024 | 7:30 PM

ನಟಿ ಐಶ್ವರ್ಯಾ ಅವರು ಇಷ್ಟು ದಿನಗಳ ಕಾಲ ಸ್ವರ್ಗದಲ್ಲಿ ಹಾಯಾಗಿ ಇದ್ದರು. ಆದರೆ ಈಗ ಅವರು ನರಕದ ಪಾಲಾಗಿದ್ದಾರೆ. ಈ ಶಿಕ್ಷೆಯಿಂದ ಅವರನ್ನು ತಪ್ಪಿಸಲು ಕ್ಯಾಪ್ಟನ್​ ಹಂಸಾ ಪ್ರಯತ್ನ ಮಾಡಿದರೂ ಕೂಡ ಅದಕ್ಕೆ ಬಿಗ್​ ಬಾಸ್​ ಅನುಮತಿ ನೀಡಲಿಲ್ಲ. ಕಡೆಗೂ ಐಶ್ವರ್ಯಾ ಅವರು ನರಕಕ್ಕೆ ಬರುವುದು ಅನಿವಾರ್ಯ ಆಯಿತು. ಇದರಿಂದಾಗಿ ಜಗದೀಶ್​ಗೆ ಸಖತ್​ ಖುಷಿ ಆಗಿದೆ.

ನರಕದಲ್ಲಿ ಕಾಲ ಕಳೆಯುವುದು ತುಂಬ ಕಷ್ಟ. ಅಲ್ಲಿ ಸ್ಪರ್ಧಿಗಳಿಗೆ ಸರಿಯಾದ ಊಟ ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ಐಶ್ವರ್ಯಾ ಅವರು ನರಕಕ್ಕೆ ಬರುವಂತಾಗಿದೆ. ಅವರಿಗೆ ಈ ಶಿಕ್ಷೆ ಸಿಕ್ಕಿದ್ದಕ್ಕೆ ಜಗದೀಶ್​ ತುಂಬಾ ಖುಷಿಪಟ್ಟಿದ್ದಾರೆ. ಕ್ಯಾಪ್ಟನ್​ ಹಂಸಾ ಅವರು ಎರಡನೇ ವಾರ ಸಖತ್ ಕಷ್ಟಪಟ್ಟಿದ್ದಾರೆ. ಎಲ್ಲರ ನಿಷ್ಠುರಕ್ಕೂ ಅವರು ಕಾರಣ ಆಗಿದ್ದಾರೆ. ಅನೇಕ ಬಾರಿ ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on