ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!

| Updated By: ರಮೇಶ್ ಬಿ. ಜವಳಗೇರಾ

Updated on: Sep 10, 2024 | 5:42 PM

ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲಾಗಿರುವ ಗಣೇಶ್​ ಮೂರ್ತಿ ಹೂಳನ್ನು ಬಿಬಿಎಂಪಿ ರಸ್ತೆ ಪಕ್ಕದಲ್ಲಿ ಡಂಪ್ ಮಾಡಿದೆ. ಅದರಲ್ಲಿ ಗಣೇಶನ ಮೂರ್ತಿಗಳು ಇದ್ದು, ದೇವರಿಗೆ ಅವಮಾನಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 10): ಗಣೇಶ ಹಬ್ಬ ಮುಗಿದಿದೆ. ಇದೀಗ ಗಣೇಶ್​ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮಗಳು ನಡೆಯುತ್ತಿವೆ. ಆಯಾ ಜಿಲ್ಲೆಗಳಲ್ಲಿ ಬಾವಿ, ಹಳ್ಳ, ಕಾಲುವೆ, ನದಿಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳನ್ನು ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಲಾಗಿದೆ. ಆದ್ರೆ, ವಿಸರ್ಜನೆ ಮಾಡಿದ್ದ ಗಣೇಶ್​ ಮೂರ್ತಿಗಳ ಹೂಳನ್ನ ಬಿಬಿಎಂಪಿ ರಸ್ತೆ ಪಕ್ಕದಲ್ಲಿ ಡಂಪ್ ಮಾಡಿದೆ. ಹೌದು… ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಿದ ಗಣೇಶ ಮೂರ್ತಿಗಳ ಹೂಳನ್ನ ಬೆಂಗಳೂರು ಹೊರವಲಯದ ಮಾದವರ ಬಳಿ ಡಂಪ್ ಮಾಡಲಾಗಿದ್ದು, ಹೂಳಿನಲ್ಲಿ ನೂರಾರು ಗಣೇಶ ಮೂರ್ತಿಗಳಿವೆ. ಈ ಹಿನ್ನೆಲೆಯಲ್ಲಿ , ಗಣೇಶ ಮೂರ್ತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Follow us on