AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯಾಮರಣ ಕೊಡಿಸಿ ಎಂದು ಸಚಿವರಿಗೆ ಕೈಮುಗಿದು ವ್ಯಾಪಾರಿಯ ಮನವಿ: ಕಾರಣ ಇಲ್ಲಿದೆ

ದಯಾಮರಣ ಕೊಡಿಸಿ ಎಂದು ಸಚಿವರಿಗೆ ಕೈಮುಗಿದು ವ್ಯಾಪಾರಿಯ ಮನವಿ: ಕಾರಣ ಇಲ್ಲಿದೆ

Sahadev Mane
| Edited By: |

Updated on:May 22, 2026 | 8:52 AM

Share

ಬೆಳಗಾವಿಯ ಬೀದಿ ವ್ಯಾಪಾರಿಗಳು ಸಚಿವ ಸತೀಶ್ ಜಾರಕಿಹೊಳಿ ಅವರ ಸಭೆಯಲ್ಲಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಮೂರು ತಿಂಗಳ ವ್ಯಾಪಾರ ಅನುಮತಿ ಮುಗಿದು ಎಂಟು ತಿಂಗಳು ಕಳೆದರೂ ವಿಸ್ತರಣೆಯಾಗದ ಕಾರಣ ತೀವ್ರ ಒತ್ತಡದಲ್ಲಿದ್ದಾರೆ. ದಯಾಮರಣ ಕೊಡಿಸಿ ಎಂದು ವ್ಯಾಪಾರಿಯೊಬ್ಬರು ಕಣ್ಣೀರು ಹಾಕಿದ್ದು, ಸಂಡೇ ಮಾರ್ಕೆಟ್‌ನಂತಹ ವ್ಯವಸ್ಥಿತ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಬೆಳಗಾವಿ, ಮೇ 22: ನಗರದಲ್ಲಿ ಬೀದಿ ವ್ಯಾಪಾರ ನಡೆಸುವ ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಭೆಯಲ್ಲಿ ತಮ್ಮ ದುಸ್ಥಿತಿಯನ್ನು ಕಣ್ಣೀರು ಹಾಕಿ ನಿವೇದಿಸಿಕೊಂಡಿದ್ದಾರೆ. ಈ ಸಂಬಂಧ ಸಚಿವರಿಗೆ ವ್ಯಾಪಾರಿಯೊಬ್ಬರು ಕೈಮುಗಿದು ದಯಾಮರಣ ಕೊಡಿಸಿ ಎಂದು ಬೇಡಿಕೊಂಡಿರುವ ಪ್ರಸಂಗ ನಡೆದಿದೆ. ಈ ವ್ಯಾಪಾರಿಗಳ ಮೂರು ತಿಂಗಳ ವ್ಯಾಪಾರ ಅನುಮತಿ ಅವಧಿ ಮುಗಿದು ಆರರಿಂದ ಎಂಟು ತಿಂಗಳು ಕಳೆದಿದ್ದು, ಇನ್ನೂ ವಿಸ್ತರಣೆಯಾಗಿಲ್ಲ. ಇದರಿಂದಾಗಿ ಅವರ ಜೀವನ ನಿರ್ವಹಣೆಗೆ ಅಡ್ಡಿಯಾಗಿದ್ದು, ನಿರಂತರ ಒತ್ತಡ ಎದುರಿಸುತ್ತಿದ್ದಾರೆ. ಸಂಡೇ ಮಾರ್ಕೆಟ್‌ನಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಬೇಕೆಂದು ಹಲವರು ಪದೇ ಪದೇ ಮನವಿ ಸಲ್ಲಿಸುತ್ತಿದ್ದಾರೆ. ಕಾನೂನು ಪ್ರಕಾರ ಸಮಸ್ಯೆ ಬಗೆಹರಿಯದಿದ್ದರೆ, ಕ್ರಮ ಕೈಗೊಳ್ಳುವಂತೆ ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 22, 2026 08:52 AM
Follow Us
Sahadev Mane
Sahadev Mane