ಮದುವೆಯಾಗೋ ಭರವಸೆ ನೀಡಿ ಯುವತಿಯನ್ನು ವಂಚಿಸಿದನೇ ಬಿಜೆಪಿ ಸಂಸದ ದೇವೇಂದ್ರಪ್ಪರ ವಿವಾಹಿತ ಮಗ ರಂಗನಾಥ್?

ಮದುವೆಯಾಗೋ ಭರವಸೆ ನೀಡಿ ಯುವತಿಯನ್ನು ವಂಚಿಸಿದನೇ ಬಿಜೆಪಿ ಸಂಸದ ದೇವೇಂದ್ರಪ್ಪರ ವಿವಾಹಿತ ಮಗ ರಂಗನಾಥ್?
|

Updated on:Nov 17, 2023 | 12:59 PM

ಪ್ರಾಯಶಃ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ಮದುವೆಯಾಗೋದಾಗಿ ರಂಗನಾಥ್ ಹೇಳಿರಬೇಕು. ಮದುವೆ ಅಂತ ಯುವತಿ ಕೇಳಿದಾಗ ಸಬೂಬುಗಳನ್ನು ಹೇಳಿರುತ್ತಾನೆ ಇಲ್ಲವೇ ಸ್ಪಷ್ಟವಾಗಿ ನಿರಾಕರಿಸಿರುತ್ತಾನೆ. ಹಾಗಾಗೇ, ಯುವತಿ ರಂಗನಾಥ್ ನ ನೀಯತ್ತನ್ನು ಅಕ್ರೋಶ ಮತ್ತು ಹತಾಶೆಯಿಂದ ಪ್ರಶ್ನಿಸುತ್ತಿದ್ದಾಳೆ.

ಬೆಂಗಳೂರು: ಬಳ್ಳಾರಿಯ ಬಿಜೆಪಿ ಸಂಸದ ವೈ ದೇವೇಂದ್ರಪ್ಪ (Y Devendrappa) ಮುಖಕ್ಕೆ ಅವರ ಮಗ ಮಸಿ ಬಳಿಯುವ ಕೆಲಸ ಮಾಡಿದಂತಿದೆ ಮಾರಾಯ್ರೇ. ಅಪ್ಪನ ಹೆಸರು, ಅಧಿಕಾರ, ವರ್ಚಸ್ಸುಗಳನ್ನು ದುರುಪಯೋಗ ಮಾಡಿಕೊಂಡು ಅವರ ಮಕ್ಕಳು ಪುಂಡಾಟಿಕೆ, ಸ್ವಚ್ಛಂದ ಬದುಕು ನಡೆಸುವ ಪ್ರಕರಣಗಳು ಒಂದೆರಡಲ್ಲ ಮತ್ತು ದೇವೇಂದ್ರಪ್ಪ ಪುತ್ರ ರಂಗನಾಥ್ ನ (Ranganath) ಪ್ರಕರಣ ಕೊನೆಯದೂ ಅಲ್ಲ. ಈ ಆಡಿಯೋ ಕ್ಲಿಪ್ ನಲ್ಲಿರುವ ಸಂಭಾಷಣೆ ಕೇಳಿದರೆ ವಿಷಯ ಸ್ಪಷ್ಟವಾಗುತ್ತದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ (Maharaja College, Mysuru) ಉಪನ್ಯಾಸಕನಾಗಿ ಕೆಲಸ ಮಾಡುವ ರಂಗನಾಥ್ ವಿವಾಹಿತನಾಗಿದ್ದಾಗ್ಯೂ ಬೇರೊಬ್ಬ ಯುವತಿ ಜೊತೆ ಪ್ರೀತಿ ಪ್ರೇಮದ ನಾಟಕವಾಡಿ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪ್ರಾಯಶಃ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ಮದುವೆಯಾಗೋದಾಗಿ ರಂಗನಾಥ್ ಹೇಳಿರಬೇಕು. ಮದುವೆ ಅಂತ ಯುವತಿ ಕೇಳಿದಾಗ ಸಬೂಬುಗಳನ್ನು ಹೇಳಿರುತ್ತಾನೆ ಇಲ್ಲವೇ ಸ್ಪಷ್ಟವಾಗಿ ನಿರಾಕರಿಸಿರುತ್ತಾನೆ. ಹಾಗಾಗೇ, ಯುವತಿ ರಂಗನಾಥ್ ನ ನೀಯತ್ತನ್ನು ಅಕ್ರೋಶ ಮತ್ತು ಹತಾಶೆಯಿಂದ ಪ್ರಶ್ನಿಸುತ್ತಿದ್ದಾಳೆ. ಅವನಿಂದ ಮೋಸ ಹೋಗಿರುವುದು ಖಾತ್ರಿಯಾದ ಬಳಿಕ ಸಂತ್ರಸ್ತೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ನ್ಯಾಯ ಕೇಳಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Fri, 17 November 23

Follow us
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಪುನೀತ್ 3ನೇ ವರ್ಷದ ಪುಣ್ಯಸ್ಮರಣೆ; ಅಪ್ಪು ದೇವಾಲಯದಲ್ಲಿ ವಿಶೇಷ ಪೂಜೆ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ
ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ
ನಸುಕಿನ ಜಾವದಿಂದಲೇ ಕಂಠೀರವ ಸ್ಟುಡಿಯೋ ಮುಂದೆ ನೆರೆದಿದ್ದ ಅಭಿಮಾನಿಗಳು
ನಸುಕಿನ ಜಾವದಿಂದಲೇ ಕಂಠೀರವ ಸ್ಟುಡಿಯೋ ಮುಂದೆ ನೆರೆದಿದ್ದ ಅಭಿಮಾನಿಗಳು
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ದೇವೇಗೌಡರ ಅನ್ಯಮನಸ್ಕತೆ ಅರ್ಥವಾಗಲಾರದು!
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ದೇವೇಗೌಡರ ಅನ್ಯಮನಸ್ಕತೆ ಅರ್ಥವಾಗಲಾರದು!
ತಿಂಡಿಗಾಗಿ ನಿಖಿಲ್ ಜೆಡಿಎಸ್ ಮುಖಂಡನ ಮನೆಗೆ ಹೋದಾಗ ಆರತಿ ಬೆಳಗಿ ಸ್ವಾಗತ
ತಿಂಡಿಗಾಗಿ ನಿಖಿಲ್ ಜೆಡಿಎಸ್ ಮುಖಂಡನ ಮನೆಗೆ ಹೋದಾಗ ಆರತಿ ಬೆಳಗಿ ಸ್ವಾಗತ
ಬೀದರ್​: ರೈತ ಮಹಿಳೆಯ ಜಮೀನಿನಲ್ಲಿನ ಮೇವು ನಾಶಪಡಿಸಿ ವಿಕೃತಿ
ಬೀದರ್​: ರೈತ ಮಹಿಳೆಯ ಜಮೀನಿನಲ್ಲಿನ ಮೇವು ನಾಶಪಡಿಸಿ ವಿಕೃತಿ