AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಸುರೇಶ್​ ವಿರುದ್ಧ ಸಿಎನ್​ ಮಂಜುನಾಥ್ ಭರ್ಜರಿ ಗೆಲುವು: ಸೀಕ್ರೆಟ್​ ಬಿಚ್ಚಿಟ್ಟ ವೈದ್ಯ

ಡಿಕೆ ಸುರೇಶ್​ ವಿರುದ್ಧ ಸಿಎನ್​ ಮಂಜುನಾಥ್ ಭರ್ಜರಿ ಗೆಲುವು: ಸೀಕ್ರೆಟ್​ ಬಿಚ್ಚಿಟ್ಟ ವೈದ್ಯ

ಗಂಗಾಧರ​ ಬ. ಸಾಬೋಜಿ
|

Updated on: Jun 04, 2024 | 9:54 PM

Share

Bengaluru Rural Lok Sabha Election Results 2024: ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಿಎನ್​ ಮಂಜುನಾಥ್, 50 ಸಾವಿರ ಅಥವಾ 2 ಲಕ್ಷ ರೇಂಜ್​​ನಲ್ಲಿ ಗೆಲ್ಲುತ್ತೇವೆ ಅಂತಾ ಇತ್ತು. 2 ಲಕ್ಷ ರೇಂಜ್​ನಲ್ಲಿ ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಗೆಲುವು ಪ್ರಜ್ಞಾವಂತ ಹಾಗೂ ಮತದಾರರ ಗೆಲುವು. ಈ ಗೆಲುವು ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಬೆಂಗಳೂರು, ಜೂನ್​ 04: ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್​ (DK Suresh) ವಿರುದ್ಧ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ. ಸಿಎನ್​ ಮಂಜುನಾಥ್ (Dr.CN Manjunath) ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಷ್ಟಿತ ಹಾಗೂ ಹೈವೋಲ್ಟೆಜ್ ಕ್ಷೇತ್ರವಾಗಿತ್ತು. ಜನ ಪ್ರೀತಿಯಿಂದ ಅಭಿಮಾನದಿಂದ ಮತ ಕೊಟ್ಟಿದ್ದಾರೆ. ಜನ ಕೊಟ್ಟ ಪ್ರೀತಿಗೆ ಧನ್ಯವಾದಗಳು. 50 ಸಾವಿರ ಅಥವಾ 2 ಲಕ್ಷ ರೇಂಜ್​​ನಲ್ಲಿ ಗೆಲ್ಲುತ್ತೇವೆ ಅಂತಾ ಇತ್ತು. 2 ಲಕ್ಷ ರೇಂಜ್​ನಲ್ಲಿ ಗೆದ್ದಿದ್ದೇವೆ. ಇದಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಈ ಗೆಲುವು ಪ್ರಜ್ಞಾವಂತ ಹಾಗೂ ಮತದಾರರ ಗೆಲುವು. ಈ ಗೆಲುವು ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತೇನೆ. ಎಲ್ಲಾ ಶಕ್ತಿಗಿಂತ ಜನಶಕ್ತಿ ದೊಡ್ಡದು. ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳ ಬಗ್ಗೆ ಕೆಲಸ ಮಾಡುತ್ತೇವೆ. ಮಾವ ಹಾಗೂ ಅತ್ತೆಯ ಆರ್ಶೀವಾದ ಪಡೆದವು. ನನ್ನ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಡಿಎಸ್​ ವಸಿಷ್ಟ ಹೆಚ್​ಡಿ ದೇವೇಗೌಡ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮತ್ತು ಎಲ್ಲಾ ಸದಸ್ಯರ ಪಾತ್ರವಿದೆ. ದೆಹಲಿಗೆ ಬರುವ ಬಗ್ಗೆ ಹೈಕಮಾಂಡ್​ನಿಂದ 24 ಗಂಟೆಯಲ್ಲಿ ಕರೆ ಬರಬಹುದು ಎಂದು ಹೇಳಿದ್ದಾರೆ.

ವರದಿ: ಪ್ರದೀಪ್​ 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.